ಆದಾಯ ತೆರಿಗೆ ಮಿತಿ : ಯಾರ್ಯಾರಿಗೆ ಎಷ್ಟೆಷ್ಟು?

ಆದಾಯ ತೆರಿಗೆ ಮಿತಿಯನ್ನು 1.6 ಲಕ್ಷ ರು.ನಿಂದ 1.8 ಲಕ್ಷ ರು.ಗೆ ಏರಿಸಿ ಪ್ರಣಬ್ ಮುಖರ್ಜಿಯವರು ತಮ್ಮ ವಾಗ್ದಾನವನ್ನು ಕಾಯ್ದುಕೊಂಡಿದ್ದಾರೆ. 1.6 ಲಕ್ಷ ರು.ನಿಂದ 2 ಲಕ್ಷ ರು.ವರೆಗೆ ಏರಿಸಲಾಗುವುದು ಎಂದು ನಿರೀಕ್ಷಿಸಲಾಗಿತ್ತು. ಆದರೆ, 20 ಸಾವಿರ ರು.ನಷ್ಟಾದರೂ ಏರಿಸಿರುವುದು ಪುರುಷ ತೆರಿಗೆದಾರರಲ್ಲಿ ತುಸುಮಟ್ಟಿಗಾದರೂ ಸಂತಸ ತಂದಿರುತ್ತದೆ.
ಕೇಂದ್ರ ಬಜೆಟ್ : ಯಾವುದು ಅಗ್ಗ ಯಾವುದು ತುಟ್ಟಿ?
ಹಿರಿಯ ನಾಗರಿಕರ ಆದಾಯ ತೆರಿಗೆ ಮಿತಿಯನ್ನು 2.4 ಲಕ್ಷ ರು.ನಿಂದ 2.5 ಲಕ್ಷ ರು.ಗೆ ಏರಿಸಲಾಗಿದೆ. ಹಾಗೆಯೆ, ಹಿರಿಯ ನಾಗರಿಕರ ವಯೋಮಿತಿಯನ್ನು 65ರಿಂದ 60ಕ್ಕೆ ಇಳಿಸಿ ನಿವೃತ್ತ ನೌಕರರ ವೃಂದಕ್ಕೆ ಕೊಡುಗೆ ನೀಡಿದ್ದಾರೆ. 80 ವರ್ಷ ದಾಟಿದ ವಯೋವೃದ್ಧರ ಆದಾಯ ತೆರಿಗೆ ಮಿತಿಯನ್ನು 5 ಲಕ್ಷ ರು.ಗೆ ನಿಗದಿಪಡಿಸಲಾಗಿದೆ.
ಕಳೆದ ಬಜೆಟ್ಟಿನಲ್ಲಿ ಮಹಿಳೆಯರ ಆದಾಯ ತೆರಿಗೆ ಮಿತಿಯನ್ನು 1.9 ಲಕ್ಷ ರು.ಗೆ ನಿಗದಿಪಡಿಸಲಾಗಿತ್ತು. ಈ ಬಾರಿ ಈ ಮಿತಿಯನ್ನು ಪ್ರಣಬ್ 'ಟಚ್' ಮಾಡಲು ಹೋಗಿಲ್ಲ. ಸಹಜವಾಗಿ ಮಹಿಳಾಮಣಿಗಳು ದನಿಯೇರಿಸಿದರೂ ಆಶ್ಚರ್ಯವಿಲ್ಲ. ಆದರೆ, ಪುರುಷರ ಜೇಬಿನಲ್ಲಿ ನಾಲ್ಕು ಕಾಸು ಉಳಿಯಲಿದೆ.
ತೆರಿಗೆ ಸ್ಲ್ಯಾಬ್ : ಪುರುಷರಿಗಾಗಿ ತೆರಿಗೆ ಮಿತಿಯನ್ನು 20 ಸಾವಿರ ರು.ಯಷ್ಟು ಏರಿಸಿರುವುದರಿಂದ 1.8 ಲಕ್ಷ ರು.ನಿಂದ 5 ಲಕ್ಷ ರು.ವರೆಗಿನ ಆದಾಯಕ್ಕೆ ಶೇ.10ರಷ್ಟು ತೆರಿಗೆ ಬೀಳಲಿದೆ. 5 ಲಕ್ಷ ರು.ನಿಂದ 8 ಲಕ್ಷ ರು. ಆದಾಯಕ್ಕೆ ಶೇ.20 ಮತ್ತು 8 ಲಕ್ಷ ರು. ಮೇಲ್ಪಟ್ಟ ಆದಾಯಕ್ಕೆ ಶೇ.30ರಷ್ಟು ತೆರಿಗೆ ಕಟ್ಟಬೇಕಾಗುತ್ತದೆ.
ಆದಾಯ ತೆರಿಗೆ ಮಿತಿ ಏರಿಸಿದ್ದರಿಂದ ಪುರುಷರು ಎರಡು ಸಾವಿರ ರು.ನಷ್ಟು ಹಣವನ್ನು ಉಳಿತಾಯ ಮಾಡಬಹುದು. ಹಿರಿಯ ನಾಗರಿಕರ ವಯೋಮಿತಿಯನ್ನು ಇಳಿಸಿದ್ದರಿಂದ ಅವರಿಗೂ ಲಾಭ ಕಟ್ಟಿಟ್ಟ ಬುತ್ತಿ. ಅವರು ವಾರ್ಷಿಕ ಆದಾಯದಲ್ಲಿ ಸಾವಿರ ರು. ಹೆಚ್ಚಿಗೆ ಉಳಿತಾಯ ಮಾಡಬಹುದು. ಇನ್ನು, ಮಹಿಳೆಯರ ಬಗ್ಗೆ ಪ್ರಣಬ್ ಸಾಹೇಬರು ಕನಿಕರ ತೋರದ್ದರಿಂದ ಉಳಿತಾಯ ಮಾಡಬೇಕಿದ್ದರೆ ಹೆಚ್ಚಿಗೆ ಖರ್ಚು ಮಾಡುವಂತಿಲ್ಲ.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications