ಕೊನೆಗೂ ಮುಕೇಶ್ ಅಂಬಾನಿ ರಾಯಗಢ ವಿವಿವ ರದ್ದು

ದೇಶದ ಅತಿ ದೊಡ್ಡ ವಿವಿವ ಇದಾಗಬೇಕಿತ್ತು. ಆದರೆ ಇದಕ್ಕಾಗಿ ತಮ್ಮ ಫಲವತ್ತಾದ ಭೂಮಿಯನ್ನು ಕಳೆದುಕೊಳ್ಳಲು ಇಲ್ಲಿನ ರೈತರು ಸುತರಾಂ ಒಪ್ಪಲಿಲ್ಲ. ರೈತರಿಗೆ ಮಾರಕವಾಗುವ ವಿವಿವ ಯೋಜನೆಯನ್ನು ಕೈಬಿಡಬೇಕು ಎಂದು ತೀವ್ರ ಹೋರಾಟ ನಡೆಸಿದ್ದರು. ಇದೀಗ ಭೂಮಿ ರೈತರ ಸುಪರ್ದಿಯಲ್ಲೇ ಉಳಿಯಲಿದೆ.
ಮುಕೇಶ್ ನೇತೃತ್ವದ ಈ ಯೋಜನೆಗೆ ಮತ್ತೊಬ್ಬ ಉದ್ಯಮಿ ಆನಂದ್ ಜೈನ್ ಕೈಜೋಡಿಸಿದ್ದರು. ಬರೋಬ್ಬರಿ 20,000 ಎಕರೆ ಕೃಷಿ ಭೂಮಿಯ ಮೇಲೆ ಇವರ ಕಣ್ಣುಬಿದ್ದಿತ್ತು. ಇದಕ್ಕೆ ರೈತರು ವ್ಯಾಪಕ ಪ್ರತಿರೋಧವೊಡ್ಡಿದರು. 2008 ರಲ್ಲಿ ರಾಜ್ಯ ಸರಕಾರ ನ್ಯಾಯ ಪಂಚಾಯಿತಿಯನ್ನೂ ನಡೆಸಿತ್ತು. ತೀರ್ಪು ರೈತರ ಪರವಾಗಿತ್ತು. ಈ ಮಧ್ಯೆ, ಶೇ. 13ರಷ್ಟು ಭೂಮಿಯನ್ನು ಯೋಜನೆಗಾಗಿ ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಅದನ್ನೀಗ ರೈತರಿಗೆ ಮರಳಿಸುವ ಕೆಲಸವಾಗಬೇಕಿದೆ.











Click it and Unblock the Notifications