ಸಚಿನ್ಗೆ ರಾಜ್ಯದಿಂದ ಎರಡು ಗೌರವ ಡಾಕ್ಟರೇಟ್

ಏತನ್ಮಧ್ಯೆ, ತೆಂಡೂಲ್ಕರ್ ಅವರಿಗೆ ಗೌರವ ಡಾಕ್ಟರೇಟ್ ನೀಡಲು ಮೈಸೂರು ವಿಶ್ವವಿದ್ಯಾಲಯವೂ ಬಯಸಿದೆ. ತೆಂಡೂಲ್ಕರ್, ರಾಜೀವ್ ತಾರಾನಾಥ್, ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತಿತರರಿಗೆ ಡಾಕ್ಟರೇಟ್ ನೀಡಲು ವಿವಿ ನಿರ್ಧರಿಸಿದೆ.
ಕ್ರಿಕೆಟ್ ಜಗತ್ತಿಗೆ ಅವರು ಸಲ್ಲಿಸಿರುವ ಗಣನೀಯ ಕೊಡುಗೆಯನ್ನು ಪರಿಗಣಿಸಿ, ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ರಾಜ್ಯದಲ್ಲಿ ಅವರ ಅಭಿಮಾನಿಗಳು ಭಾರಿ ಸಂಖ್ಯೆಯಲ್ಲಿದ್ದಾರೆ ಎಂದು
RGUHS ಸಿಂಡಿಕೇಟ್ ತಿಳಿಸಿದೆ. ಸಚಿನ್ ಬಿಡುವು ನೋಡಿಕೊಂಡು ಅವರಿಗಾಗಿ ಪ್ರತ್ಯೇಕ ಡಾಕ್ಟರೇಟ್ ಪ್ರದಾನಕ್ಕೆ ಸಮಾರಂಭ ಆಯೋಜಿಸಲು ವಿವಿ ಚಿಂತನೆ ನಡೆಸಿದೆ. ಬಹುಶಃ ಹಾಲಿ ವಿಶ್ವ ಕಪ್ ಬಳಿಕವೇ ಇದಕ್ಕೆ ಕಾಲ ಕೂಡಿ ಬರಬಹುದು.












Click it and Unblock the Notifications