ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒರಿಸ್ಸಾ: ನಕ್ಸಲರಿಂದ ಜಿಲ್ಲಾಧಿಕಾರಿಯ ಅಪಹರಣ

By Srinath
|
Google Oneindia Kannada News

orissa
ಭುನನೇಶ್ವರ, ಫೆ.17:ಒರಿಸ್ಸಾದ ನಕ್ಸಲ್ ಪೀಡಿತ ಮಲ್ಕನ್‌ಗಿರಿಯ ಜಿಲ್ಲಾಧಿಕಾರಿ ಆರ್. ವೀನಿಲ್ ಕೃಷ್ಣ ಅವರನ್ನು ನಕ್ಸಲರು ಬುಧವಾರ ಸಂಜೆ ಅಪಹರಿಸಿದ್ದಾರೆ. 30 ವರ್ಷದ ಕೃಷ್ಣ ಹೈದರಾಬಾದಿನವರು. ಮದ್ರಾಸ್ ಐಐಟಿ ಪದವೀಧರರು. ಒರಿಸ್ಸಾ ಕೇಡರ್‌ಗೆ ಸೇರಿದ ಐಎಎಸ್ ಅಧಿಕಾರಿ (2005). 2009ರಿಂದ ಮಾವೋ ಉಪಟಳದ ಇದೇ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು.

ಈ ಮಧ್ಯೆ, ಮಾವೋ ಬಂಡುಕೋರರ ಅಟ್ಟಹಾಸಗಳನ್ನು ಕೊನೆಗಾಣಿಸಬೇಕೆಂದು ಆಗ್ರಹಿಸಿ, ಒರಿಸ್ಸಾದ ವಿಧಾನಸಭೆಯಲ್ಲಿ ಸದಸ್ಯರು ಗುರುವಾರ ಭಾರಿ ಕೋಲಾಹಲವೆಬ್ಬಿಸಿದರು.

ಜಿಲ್ಲಾಧಿಕಾರಿ ಕೃಷ್ಣ ಅವರ ಜತೆಗಿದ್ದ ಇತರೆ ಇಬ್ಬರು ಅಧಿಕಾರಿಗಳು ಮತ್ತೊ ಒಬ್ಬ ಸ್ವಯಂ ಸೇವಕನನ್ನು ನಕ್ಸಲರು ಬಿಟ್ಟು ಕಳಿಸಿದ್ದಾರೆ. ಬಂಧನದಲ್ಲಿರುವ ಮಾವೊ ಬಂಡುಕೋರರನ್ನು 48 ಗಂಟೆಗಳಲ್ಲಿ ಬಿಡುಗಡೆ ಮಾಡುವಂತೆ ಆಗ್ರಹಿಸಿ, ಪತ್ರ ಬರೆದು ಕಳಿಸಿದ್ದಾರೆ. ಆಂಧ್ರಪ್ರದೇಶದ ಗಡಿ ಭಾಗದ ಜಿಲ್ಲೆ ಇದಾಗಿದ್ದು, ಜಿಲ್ಲಾಧಿಕಾರಿ ಪತ್ತೆ ಕಾರ್ಯಕ್ಕಾಗಿ ಹೆಚ್ಚುವರಿ ಪೊಲೀಸ್ ಪಡೆಗಳನ್ನು ಕಳಿಸಲಾಗಿದೆ ಎಂದು ಗೃಹ ಕಾರ್ಯದರ್ಶಿ ಬೆಹೇರಾ ಹೇಳಿದ್ದಾರೆ.

ಜಿಲ್ಲೆಯ ಚಿತ್ರಕೊಂಡ ಪೊಲೀಸ್ ಠಾಣೆ ವ್ಯಾಪ್ತಿಯ ಬಾರಾಪಾಡದ ಕುಗ್ರಾಮವೊಂದರಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಪರಿಶೀಲಿಸಲು ತೆರಳಿದ್ದಾಗ ಅಪಹರಣ ನಡೆದಿದೆ ಎನ್ನಲಾಗಿದೆ. ಘಟನೆಯ ಬಳಿಕ ಅವರು ಯಾವುದೇ ಸಂಪರ್ಕಕ್ಕೆ ಸಿಕ್ಕಿಲ್ಲ ಎಂದು ಮಾವೊ ವಿರೋಧಿ ಕಾರ್ಯಾಚರಣೆಯ ಮುಖ್ಯಸ್ಥ ಸಂಜೀವ್ ಮಾರಿಕ್ ತಿಳಿಸಿದ್ದಾರೆ.

English summary
Malkangiri district collector R Veenil Krishna went missing from Orissa's Maoist-hit Malkangiri district on Wednesday and was suspected to have been abducted by Naxalites.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X