ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ನಾಗರಬಾವಿ: ಕಾಂಗ್ರೆಸ್ ಬಿಜೆಪಿ ಜಟಾಪಟಿ ಕೃಷ್ಣ ಕೃಷ್ಣಾ!
ವಾರ್ಡ್ ನಂಬರ್ 128 ನಲ್ಲಿ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡುವ ಕಾರ್ಯಕ್ರಮವನ್ನು ಇಂದು ನಾಗರಭಾವಿ ಸರ್ಕಲ್ ನಲ್ಲಿ ಬಿಬಿಎಂಪಿ ಹಮ್ಮಿಕೊಂಡಿತ್ತು. ಆದರೆ ಶಾಸಕ ಪ್ರಿಯಕೃಷ್ಣ ಅವರಿಗೆ ಕಾರ್ಯಕ್ರಮಕ್ಕೆ ಆಹ್ವಾನ ನೀಡಿಲ್ಲ ಏಕ್ಕೆ? ಎಂದು ಅವರ ಬೆಂಬಲಿಗರು ಘೋಷಣೆ ಕೂಗುತ್ತಾ, ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದರು. ಈ ಸಂದರ್ಭದಲ್ಲಿ ವೇದಿಕೆಯಲ್ಲಿದ್ದ ಗೃಹಸಚಿವ ಆರ್ ಅಶೋಕ್ ಅವರು ಕಾಂಗ್ರೆಸ್ ಕಾರ್ಯಕರ್ತರನ್ನು ಸಮಾಧಾನಪಡಿಸಲು ಯತ್ನಿಸಿದರೂ ಸಫಲರಾಗಲಿಲ್ಲ.
ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಮಾತಿಗೆ ಮಾತು ಬೆಳೆದು ಮಾರಾಮಾರಿ ಆರಂಭವಾಗಿದೆ. ಯಾಕೃಷ್ಣ ಅವರ ಬೆಂಬಲಿಗರು ವೇದಿಕೆಗೆ ನುಗ್ಗಿ ದಾಂಧಲೆ ನಡೆಸತೊಡಗಿದ್ದಾರೆ. ಪರಿಸ್ಥಿತಿ ಕೈ ಮೀರುತ್ತಿದೆ ಎಂದು ಎನಿಸಿ ಮಧ್ಯೆ ಪ್ರವೇಶಿಸಿದ ಪೊಲೀಸರಿಗೂ ಗೂಸಾ ಬಿದ್ದಿದೆ. ಪರಿಸ್ಥಿತಿಯನ್ನು ನಿಯಂತ್ರಿಸಲು ಲಾಠಿ ಪ್ರಹಾರ ನಡೆಸಿದ ಪೊಲೀಸರು ಕಾರ್ಯಕರ್ತರನ್ನು ಚದುರಿಸಿ, ಕಾರ್ಯಕ್ರಮ ಮುಂದುವರೆವಂತೆ ಮಾಡಿದ್ದಾರೆ.
Comments
ಬಿಬಿಎಂಪಿ ಕಾಂಗ್ರೆಸ್ ಬಿಜೆಪಿ ಪ್ರಿಯಕೃಷ್ಣ ಆರ್ ಅಶೋಕ್ ಬೆಂಗಳೂರು bbmp bengaluru priyakrishna r ashok bjp congress
English summary
Bruhat Bengaluru Maha nagara Palige(BBMP) organised inauguration function of various developement activities in Nagarabhavi ward today(Feb.12). MLA Priya Krishna was not invited to the program which turned entire program into violence as congress and BJP activists clashed in front of Home Minister R Ashoka and Mayor SK Nataraj.
Story first published: Saturday, February 12, 2011, 12:33 [IST]