ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಸ್ಲಿಮರೇನು ಎರಡನೆ ದರ್ಜೆ ಪ್ರಜೆಗಳೇ? : ಗೌಡ್ರು

By Mahesh
|
Google Oneindia Kannada News

HD Devegowda on BJP Ekta Yatra
ಬೆಂಗಳೂರು, ಜ.28: ಬಿಜೆಪಿ ತನ್ನ 'ನಕಲಿ" ದೇಶಭಕ್ತಿಯ ಮೂಲಕ ಮುಸ್ಲಿಮರನ್ನು ಎರಡನೆ ದರ್ಜೆಯ ಪ್ರಜೆಗಳನ್ನಾಗಿ ಮಾಡಲು ಕುತಂತ್ರ ರೂಪಿಸುತ್ತಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಆರೋಪ ಮಾಡಿ, ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗುರುವಾರ ಪಕ್ಷದ ಕಚೇರಿಯಲ್ಲಿ ಆಯೋ ಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಶ್ಮೀರದ ಲಾಲ್‌ಚೌಕ್ ನಲ್ಲಿ ತಿರಂಗ ಧ್ವಜಾರೋಹಣದ ನೆಪದಲ್ಲಿ ಬಿಜೆಪಿ ಕೈಗೊಂಡಿರುವ ತಿರಂಗಯಾತ್ರೆ ದೇಶ ವಿಭಜನೆ ಮಾಡುವಂತಹ ಯತ್ನವಾಗಿದೆ ಎಂದರು.

ಬಿಜೆಪಿ ದೇಶದಲ್ಲಿನ ಅಲ್ಪಸಂಖ್ಯಾತರನ್ನು ಎರಡನೆ ದರ್ಜೆಯ ಪ್ರಜೆಗಳನ್ನಾಗಿ ಕಾಣುತ್ತಿಲ್ಲ ಎಂಬುದಕ್ಕೆ ಪಕ್ಷದ ರಾಷ್ಟ್ರೀಯ ಮುಖಂಡರು ಉತ್ತರಿಸಬೇಕು. ರಾಜ್ಯ ಸರಕಾರ ಆಡಳಿತಕ್ಕೆ ಬಂದು ಎರಡೂವರೆ ವರ್ಷಗಳು ಕಳೆದರೂ ಲೋಕ ಸೇವಾ ಆಯೋಗಕ್ಕೆ ಒಬ್ಬೇ ಒಬ್ಬ ಮುಸ್ಲಿಮ್ ಸಮುದಾಯದವನನ್ನು ನೇಮಿಸಲಿಲ್ಲವೇಕೆ? ಎಂದು ಖಾರವಾಗಿ ಪ್ರಶ್ನಿಸಿದರು.

ಲಜ್ಜೆಗೆಟ್ಟ ಸಿಎಂ: ಮುಖ್ಯಮಂತ್ರಿ ಯಡಿಯೂರಪ್ಪನವರ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಾಗಿದ್ದು, ಎಫ್‌ಐಆರ್ ಹಾಕುವುದಷ್ಟೇ ಬಾಕಿ ಇದೆ. ಆದರೂ, ಅವರು ರಾಜೀನಾಮೆ ನೀಡುವುದಿಲ್ಲ ಎಂದರೆ ಅವರ ಭಂಡತನ ಎಷ್ಟಿದೆ ನೋಡಿ ಎಂದು ಟೀಕಿಸಿದ ಅವರು, ರಾಜ್ಯಪಾಲರ ಚಹಾ ಕೂಟಕ್ಕೆ ಗೈರುಹಾಜರಾಗಿರುವ ಬಿಜೆಪಿ ಸರಕಾರದ ಬಗ್ಗೆ ಇನ್ನೇನು ಹೇಳಲಿ ಎಂದು ವ್ಯಂಗ್ಯವಾಡಿದರು. [ದೇವೇಗೌಡ]

English summary
BJP is treating Muslim Community as second class citizens. BJP's Tiranga Ekta Yatra is pakka politically motivated and such rally will definatly divide people on caste basis. CM BSY is shameless and it better not to comment on such persons said HD Devegowda
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X