Get Updates
Get notified of breaking news, exclusive insights, and must-see stories!

ನ್ಯಾಯಾಧೀಕರಣ ತೀರ್ಪು ವಿರೋಧಿಸಿ ಜಗನ್ ಉಪವಾಸ

YS Jaganmohan Reddy
ನವದೆಹಲಿ, ಜ. 11 : ಕೃಷ್ಣ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಕೃಷ್ಣಾ ನ್ಯಾಯಾಧೀಕರಣ ನೀಡಿರುವ ತೀರ್ಪು ವಿರೋಧಿಸಿ ಮಾಜಿ ಸಂಸದ ಜಗನ್ಮೋಹನ್ ರೆಡ್ಡಿ ನವದೆಹಲಿಯ ಜಂತರ್-ಮಂತರ್ ನಲ್ಲಿ ಒಂದು ದಿನದ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ಬಂಡೆದ್ದಿರುವ ಜಗನ್ ಅವರ ಪ್ರತಿಭಟನೆಗೆ ಕಾಂಗ್ರೆಸ್ಸಿನ ಅನೇಕ ಶಾಸಕರು ಬೆಂಬಲ ಸೂಚಿಸಿರುವುದು ಭಾರಿ ಕುತೂಹಲ ಕೆರಳಿಸಿದೆ.

ಇತ್ತೀಚೆಗೆ ಕೃಷ್ಣ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಕೃಷ್ಣ ನ್ಯಾಯಾಧೀಕರಣ ನೀಡಿರುವ ತೀರ್ಪಿನಿಂದ ರಾಜ್ಯದ ರೈತರಿಗೆ ಅನ್ಯಾಯವಾಗುತ್ತಿದೆ. ಆಲಮಟ್ಟಿ ಆಣೆಕಟ್ಟಿನ ಎತ್ತರವನ್ನು ಹೆಚ್ಚಿಸುವುದರಿಂದ ರಾಜ್ಯದ ರೈತರಿಗೆ ನೀರಿನ ಸಮಸ್ಯೆ ಉಂಟಾಗುತ್ತದೆ. ಹೀಗಾಗಿ ಯಾವ ಕಾರಣಕ್ಕೂ ಅಣೆಕಟ್ಟಿನ ಎತ್ತರವನ್ನು ಹೆಚ್ಚಿಸಬಾರದು ಎಂದು ಜಗನ್ಮೋಹನ್ ರೆಡ್ಡಿ ಒತ್ತಾಯಿಸಿದ್ದಾರೆ.

ಜಗನ್ಮೋಹನ್ ರೆಡ್ಡಿ ಆರಂಭಿಸಿರುವ ಒಂದು ದಿನದ ಉಪವಾಸ ಸತ್ಯಾಗ್ರಹಕ್ಕೆ ಕಾಂಗ್ರೆಸ್ಸಿನ ಸುಮಾರು 18 ಶಾಸಕರು ಮತ್ತು ಅನೇಕ ಸಂಸದರು ಬೆಂಬಲ ಸೂಚಿಸಿರುವುದು ವಿಶೇಷವಾಗಿದೆ. ನೆರೆ ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡುವಂತೆ ಒತ್ತಾಯಿಸಿ ಜಗನ್ ಇತ್ತೀಚೆಗೆ 48 ಗಂಟೆ ಉಪವಾಸ ಸತ್ಯಾಗ್ರಹ ನಡೆಸಿದ್ದರು. (ಕೃಷ್ಣಾ ನ್ಯಾಯಾಧೀಕರಣ)

ಕೃಷ್ಣಾ ನ್ಯಾಯಾಧೀಕರಣ ತೀರ್ಪಿನ ಮುಖ್ಯಾಂಶಗಳು

* ಆಲಮಟ್ಟಿನ ಆಣೆಕಟ್ಟಿನ ಎತ್ತರವನ್ನು 519.6 ರಿಂದ 524.25 ಅಡಿಗೆ ಹೆಚ್ಚಿಸಲು ಅನುಮತಿ.
* ಎ ಮತ್ತು ಬಿ ಸ್ಕೀಂ ನಲ್ಲಿ ರಾಜ್ಯಕ್ಕೆ ಒಟ್ಟು 911 ಟಿಎಂಸಿ ನೀರು ಲಭ್ಯ.
* ಎ ಸ್ಕೀಂನಲ್ಲಿ 734 ಟಿಎಂಸಿ ಮತ್ತು, ಬಿ ಸ್ಕೀಂ ನಲ್ಲಿ 177 ಟಿಎಂಸಿ ನೀರು ಹಂಚಿಕೆ.
* ಆಂಧ್ರಪ್ರದೇಶಕ್ಕೆ ಸುಮಾರು 1001 ಟಿಎಂಸಿ ನೀರು ಬಳಕೆಗೆ ನ್ಯಾಯಾಧೀಕರಣ ಅನುಮತಿ.
* ಮಹಾರಾಷ್ಟ್ರ ಕೇವಲ 81 ಟಿಎಂಸಿ ನೀರು ಬಳಕೆಗೆ ಅನುಮತಿ.
* ಬಿ ಸ್ಕೀಂನಲ್ಲಿ ಅಂಧ್ರಪ್ರದೇಶ 190 ಟಿಎಂಸಿ ನೀರು ಬಳಕೆಗೆ ಅನುಮತಿ.
* 2050 ರ ತನಕ ಈ ತೀರ್ಪಿನಲ್ಲಿ ಯಾವುದೇ ಬದಲಾದವಣೆ ಇಲ್ಲ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+