2ಜಿ ಹಗರಣ : ಸಿಬಿಐದಿಂದ ರಾಜಾ ವಿಚಾರಣೆ ಆರಂಭ

ಪ್ರತಿಪಕ್ಷಗಳಿಂದ ತೀವ್ರ ಪ್ರತಿಭಟನೆ ಎದುರಿಸಿದ ನಂತರ ನೈತಿಕ ಹೊಣೆ ಹೊತ್ತು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ರಾಜಾ ಅವರು, ರಾಜೀನಾಮೆ ನೀಡಿದಾಗಿನಿಂದಲೂ 2ಜಿ ಸ್ಪೆಕ್ಟ್ರಂ ಹಗರಣದಲ್ಲಿ ನಾನು ಅಮಾಯಕ. ಈ ಹಗರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ವಿನಾಕಾರಣ ಹಗರಣದಲ್ಲಿ ಸುಳಿಯಲ್ಲಿ ನನ್ನನ್ನು ಸಿಲುಕಿಸಲಾಗಿದೆ ಎಂದು ಸಮರ್ಥಿಸಿಕೊಳ್ಳತ್ತಲೇ ಬಂದಿದ್ದಾರೆ.
2ಜಿ ಸ್ಪೆಕ್ಟ್ರಂ ಹಗರಣದಲ್ಲಿ ಮಾಜಿ ಸಚಿವ ಎ ರಾಜಾ ಸಿಲುಕಿರುವುದು ಪಕ್ಷಕ್ಕೆ ಮುಜುಗರ ಉಂಟಾಗಿದೆ. ಸಿಬಿಐ ತಿನಿಖೆ ಎದುರಿಸುತ್ತಿರುವ ರಾಜಾ ಆರೋಪ ಸಾಬೀತಾದರೆ ಅವರ ವಿರುದ್ದ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಡಿಎಂಕೆ ನಾಯಕ ಟಿಕೆಎಸ್ ಇಳಂಗೋವನ್ ಹೇಳಿದ್ದಾರೆ.
ಹಗರಣಕ್ಕೆ ನೇರ ಕಾರಣರಾಗಿರುವ ರಾಜಾ ವಿರುದ್ದ ತನಿಖೆ ಆರಂಭವಾಗಿರುವುದು ತುಂಬಾ ತಡವಾಗಿದೆ. 2ಜಿ ಹಗರಣದಲ್ಲಿ ಭಾರಿ ಭ್ರಷ್ಟಾಚಾರ ನಡೆದಿದೆ. ಇದನ್ನು ಸರಕಾರ ಒಪ್ಪಿಕೊಳ್ಳಬೇಕು ಎಂದು ಬಿಜೆಪಿ ಆಗ್ರಹಿಸಿದೆ. ಹಗರಣದ ಇನ್ನೊಬ್ಬ ಪ್ರಮುಖ ಆರೋಪಿ ಕಾರ್ಪೋರೇಟ್ ಕಂಪನಿ ಮುಖ್ಯಸ್ಥೆ ನೀರಾ ರಾಡಿಯಾ ಅವರನ್ನು ಸಿಬಿಐ ಈಗಾಗಲೇ ಎರಡು ಬಾರಿ ವಿಚಾರಣೆಗೆ ಒಳಪಡಿಸಿದೆ.(ಎ ರಾಜಾ)












Click it and Unblock the Notifications