ಛೇ! ಇವರು ಊಸರವಳ್ಳಿಯ ಉಳಿಸಲಾರರು

ಆಂಗ್ಲ ಭಾಷೆಯಲ್ಲಿ chameleon ಎಂದು ಕರೆಯಿಸಿಕೊಳ್ಳುವ ಇದರ ವಂಶ Chamaeleonidae ಪಕ್ಕಾ ಮಾಂಸಹಾರಿಯಾದ ಇದು ನಿಧಾನಗತಿಯಿಂದಲೇ ತನ್ನ ಆಹಾರವನ್ನು ಸಂಪಾದಿಸಿಕೊಳ್ಳುತ್ತದೆ. ಕೀಟಗಳು ಇದರ ಪ್ರಮುಖ ಆಹಾರ. ಸಾಮಾನ್ಯವಾಗಿ ಇದು ಯಾರ ತಂಟೆಗೂ ಹೋಗುವ ಸರೀಸೃಪ ಅಲ್ಲ. ಆದರೆ ಇದರ ಬಗೆಗಿನ ಮಿಥ್ಯಾರೋಪಗಳು ಅದರ ಪ್ರಾಣಕ್ಕೆ ಸಂಚಕಾರ ತಂದಿದೆ ಎನ್ನುವುದು ಖೇದಕರ ವಿಷಯ. ತಮ್ಮ ಶತ್ರುಗಳ ಏಳ್ಗೆಯನ್ನು ಸಹಿಸಲಾರದ ಜನ ಇದನ್ನು ಕೊಂದು ನೇತುಹಾಕಿ ಕೆಲದಿನಗಳನಂತರ ಅದರಿಂದ ಬಸಿಯುವ ರಸವನ್ನು ಬಸಿದಿಟ್ಟುಕೊಂಡು ಕುಡಿಯುವ ಕಾಫಿಗೆ ಒಂದು ಹನಿ ಬೆರೆಸುತ್ತಾರೆ. ಅದಕ್ಕೆ ಕೈಮದ್ದು ಎಂದು ಕರೆಯುತ್ತಾರೆ.
ಹಾಗೆ ಈರ್ಷೆಯಿಂದ ಹಾಕಿದ ಕೈಮದ್ದು ಎದುರಾಳಿಯ ಪ್ರಾಣವನ್ನು ನಿಧಾನ ಗತಿಯಲ್ಲಿ ತಿನ್ನುತ್ತದೆ ಎಂಬುದು ಪ್ರಚಲಿತದಲ್ಲಿರುವ ಕತೆಗಳು. ಹಾಗೆಲ್ಲಾ ಯಾರು ಮಾಡುತ್ತಾರೆ? ಎಂಬುದಕ್ಕೆ ಸಮರ್ಪಕವಾದ ಉತ್ತರವಿಲ್ಲದಿದ್ದರೂ ಅದರ ದುಷ್ಪರಿಣಾಮ ಮಾತ್ರಾ ಈ ನಿರುಪದ್ರವಿ ಸುಂದರ ಜೀವಿಯಮೇಲೆ ಆಗುತ್ತಿರುವುದಂತೂ ಸತ್ಯ.
ಮೊನ್ನೆ ರಸ್ತೆಯಲ್ಲಿ ಹೋಗುತ್ತಿರುವಾಗ ಅಕಸ್ಮಾತ್ ಕೆಲಹುಡುಗರ ಗುಂಪು ಈ ಊಸರವಳ್ಳಿಯ ಹತ್ಯೆಗೆ ಸಿದ್ಧತೆ ನಡೆಸಿದ್ದು ನನ್ನ ಕಣ್ಣಿಗೆ ಬಿತ್ತು. ನಾನು ಬೈಕ್ ನಿಲ್ಲಿಸಿ ವಿಚಾರಿಸಿದಾಗ ಯಾರೋ ಬೈಕ್ ಹತ್ತಿಸಿಕೊಂಡು ಹೋಗಿದ್ದಾರೆ ಎಂಬ ಸಮಜಾಯಿಷಿ ಬಂತಾದರೂ ನನಗೆ ನಂಬಿಕೆ ಬರಲಿಲ್ಲ. ಅದಾಗಲೆ ಒಂದು ಏಟು ಊಸರವಳ್ಳಿಯ ದೇಹದ ಮೇಲೆ ಬಿದ್ದಾಗಿತ್ತು. ನಾನು ತಡೆದು ಊಸರವಳ್ಳಿಯ ಬದುಕಿಸಲು ನೀರು ಚಿಮುಕಿಸಿ ಯತ್ನಿಸಿದೆ ಆದರೆ ಅಷ್ಟರೊಳಗೆ ಬಿದ್ದ ಏಟು ಜೋರಿನದಾಗಿತ್ತಾದ್ದರಿಂದ ನನ್ನ ಕಣ್ಣೆದುರಿಗೆ ಇಹಲೋಕ ಸೇರಿತು ಊಸರವಳ್ಳಿ.
ರಸ್ತೆ ಬದಿಗೊಯ್ದು ಬಿಟ್ಟೆ ಅಕಸ್ಮಾತ್ ಕುಟುಕು ಜೀವ ವಿದ್ದರೆ ಬದುಕಿಕೊಳ್ಳಲಿ ಎಂದು. ನಂತರ ಹುಡುಗರಿಗೆ ತಿಳಿಹೇಳಿದೆ. ಆದರೆ ಅವರು "ಇಲ್ಲಾ ಸಾರ್ ನಿಮಗೆ ಗೊತ್ತಿಲ್ಲ ಅದು ಕೆಟ್ಟ ಪ್ರಾಣಿ" ಎಂದು ಕಂಬಿ ಕಿತ್ತರು. ನಾನು ಅಸಹಾಯಕನಾಗಿ ಗೋಸುಂಬೆಯ ವೇಗದಲ್ಲಿ ಹೊರಟೆ. [ಶಿವಮೊಗ್ಗ]
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications