ಛೇ! ಇವರು ಊಸರವಳ್ಳಿಯ ಉಳಿಸಲಾರರು

ಆಂಗ್ಲ ಭಾಷೆಯಲ್ಲಿ chameleon ಎಂದು ಕರೆಯಿಸಿಕೊಳ್ಳುವ ಇದರ ವಂಶ Chamaeleonidae ಪಕ್ಕಾ ಮಾಂಸಹಾರಿಯಾದ ಇದು ನಿಧಾನಗತಿಯಿಂದಲೇ ತನ್ನ ಆಹಾರವನ್ನು ಸಂಪಾದಿಸಿಕೊಳ್ಳುತ್ತದೆ. ಕೀಟಗಳು ಇದರ ಪ್ರಮುಖ ಆಹಾರ. ಸಾಮಾನ್ಯವಾಗಿ ಇದು ಯಾರ ತಂಟೆಗೂ ಹೋಗುವ ಸರೀಸೃಪ ಅಲ್ಲ. ಆದರೆ ಇದರ ಬಗೆಗಿನ ಮಿಥ್ಯಾರೋಪಗಳು ಅದರ ಪ್ರಾಣಕ್ಕೆ ಸಂಚಕಾರ ತಂದಿದೆ ಎನ್ನುವುದು ಖೇದಕರ ವಿಷಯ. ತಮ್ಮ ಶತ್ರುಗಳ ಏಳ್ಗೆಯನ್ನು ಸಹಿಸಲಾರದ ಜನ ಇದನ್ನು ಕೊಂದು ನೇತುಹಾಕಿ ಕೆಲದಿನಗಳನಂತರ ಅದರಿಂದ ಬಸಿಯುವ ರಸವನ್ನು ಬಸಿದಿಟ್ಟುಕೊಂಡು ಕುಡಿಯುವ ಕಾಫಿಗೆ ಒಂದು ಹನಿ ಬೆರೆಸುತ್ತಾರೆ. ಅದಕ್ಕೆ ಕೈಮದ್ದು ಎಂದು ಕರೆಯುತ್ತಾರೆ.
ಹಾಗೆ ಈರ್ಷೆಯಿಂದ ಹಾಕಿದ ಕೈಮದ್ದು ಎದುರಾಳಿಯ ಪ್ರಾಣವನ್ನು ನಿಧಾನ ಗತಿಯಲ್ಲಿ ತಿನ್ನುತ್ತದೆ ಎಂಬುದು ಪ್ರಚಲಿತದಲ್ಲಿರುವ ಕತೆಗಳು. ಹಾಗೆಲ್ಲಾ ಯಾರು ಮಾಡುತ್ತಾರೆ? ಎಂಬುದಕ್ಕೆ ಸಮರ್ಪಕವಾದ ಉತ್ತರವಿಲ್ಲದಿದ್ದರೂ ಅದರ ದುಷ್ಪರಿಣಾಮ ಮಾತ್ರಾ ಈ ನಿರುಪದ್ರವಿ ಸುಂದರ ಜೀವಿಯಮೇಲೆ ಆಗುತ್ತಿರುವುದಂತೂ ಸತ್ಯ.
ಮೊನ್ನೆ ರಸ್ತೆಯಲ್ಲಿ ಹೋಗುತ್ತಿರುವಾಗ ಅಕಸ್ಮಾತ್ ಕೆಲಹುಡುಗರ ಗುಂಪು ಈ ಊಸರವಳ್ಳಿಯ ಹತ್ಯೆಗೆ ಸಿದ್ಧತೆ ನಡೆಸಿದ್ದು ನನ್ನ ಕಣ್ಣಿಗೆ ಬಿತ್ತು. ನಾನು ಬೈಕ್ ನಿಲ್ಲಿಸಿ ವಿಚಾರಿಸಿದಾಗ ಯಾರೋ ಬೈಕ್ ಹತ್ತಿಸಿಕೊಂಡು ಹೋಗಿದ್ದಾರೆ ಎಂಬ ಸಮಜಾಯಿಷಿ ಬಂತಾದರೂ ನನಗೆ ನಂಬಿಕೆ ಬರಲಿಲ್ಲ. ಅದಾಗಲೆ ಒಂದು ಏಟು ಊಸರವಳ್ಳಿಯ ದೇಹದ ಮೇಲೆ ಬಿದ್ದಾಗಿತ್ತು. ನಾನು ತಡೆದು ಊಸರವಳ್ಳಿಯ ಬದುಕಿಸಲು ನೀರು ಚಿಮುಕಿಸಿ ಯತ್ನಿಸಿದೆ ಆದರೆ ಅಷ್ಟರೊಳಗೆ ಬಿದ್ದ ಏಟು ಜೋರಿನದಾಗಿತ್ತಾದ್ದರಿಂದ ನನ್ನ ಕಣ್ಣೆದುರಿಗೆ ಇಹಲೋಕ ಸೇರಿತು ಊಸರವಳ್ಳಿ.
ರಸ್ತೆ ಬದಿಗೊಯ್ದು ಬಿಟ್ಟೆ ಅಕಸ್ಮಾತ್ ಕುಟುಕು ಜೀವ ವಿದ್ದರೆ ಬದುಕಿಕೊಳ್ಳಲಿ ಎಂದು. ನಂತರ ಹುಡುಗರಿಗೆ ತಿಳಿಹೇಳಿದೆ. ಆದರೆ ಅವರು "ಇಲ್ಲಾ ಸಾರ್ ನಿಮಗೆ ಗೊತ್ತಿಲ್ಲ ಅದು ಕೆಟ್ಟ ಪ್ರಾಣಿ" ಎಂದು ಕಂಬಿ ಕಿತ್ತರು. ನಾನು ಅಸಹಾಯಕನಾಗಿ ಗೋಸುಂಬೆಯ ವೇಗದಲ್ಲಿ ಹೊರಟೆ. [ಶಿವಮೊಗ್ಗ]
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications