ಕುಂದಾಪುರದಲ್ಲಿ ವರದಕ್ಷಿಣೆ ಪೀಡಕನ ವಿರುದ್ಧ ನಿಂತ ಪತ್ನಿ
ಕುಂದಾಪುರ ನಾನಾ ಸಾಹೇಬ್ ರಸ್ತೆಯ ನಿವಾಸಿ ಚೆನ್ನ ಪೂಜಾರಿ ಎಂಬವರ ವಿವಾಹ ಕಾನೂನು ಪದವೀಧರೆ ಮಮತಾಳೊಂದಿಗೆ 18-11-1996 ರಂದು ಕುಂದಾಪುರದ ನಾರಾಯಣ ಗುರು ಕಲ್ಯಾಣ ಮಂಟಪದಲ್ಲಿ ನಡೆದಿತ್ತು. ಇವರಿಗೆ ಒಬ್ಬಳು ಮಗಳು ಇದ್ದಾಳೆ. ಚೆನ್ನಪೂಜಾರಿ ಮದುವೆ ವೇಳೆ ರೂ.1,55,000 ವರದಕ್ಷಿಣೆಯನ್ನು ಪಡೆದಿದ್ದರು. ನಂತರ ಹೆಚ್ಚಿನ ವರದಕ್ಷಿಣೆಗಾಗಿ ಪತ್ನಿ ಮಮತಾರನ್ನು ಪೀಡಿಸುತ್ತಿದ್ದರು.
ಅನೈತಿಕ ಸಂಬಂಧ ಮನೆಗೆ : ಮಾವನಿಂದ ಪಡೆದ ಜಾಗದಲ್ಲಿ ನೂತನ ಮನೆ ಕಟ್ಟಿಸಿದ ಚೆನ್ನ ಪೂಜಾರಿ ಪತ್ನಿ ಪೀಡನೆಯನ್ನು ಮುಂದುವರಿಸಿದ್ದನು. ನಂತರ ಮೈಸೂರಿನ ಮನ ಶಾಸ್ತ್ರಜ್ಞೆ ಎಂದು ಹೇಳುವ ಡಾ.ರೇಖಾ ಎಂಬಾಕೆಯನ್ನು ಮನೆಗೆ ಕರೆತಂದ ಉಪನ್ಯಾಸಕ ಆಕೆಯೊಂದಿಗೆ ಪತ್ನಿಯ ಸಮಕ್ಷಮವೇ ಅನೈತಿಕ ನಡವಳಿಕೆಯನ್ನು ಹೊಂದಿ ಪತ್ನಿಗೆ ವಂಚಿಸಿದ್ದನು. ಆರೋಪಿಗಳಿಬ್ಬರೂ ಸೇರಿ ಮಮತಾರಿಗೆ ಬೈದು ಬೆದರಿಕೆಯನ್ನು ಹಾಕಿದ್ದರು.
ಈ ಬಗ್ಗೆ ಮಮತಾ ಕುಂದಾಪುರದ ನ್ಯಾಯವಾದಿ ರವಿಕಿರಣ ಮುರ್ಡೇಶ್ವರ ಮುಖಾಂತರ ಸಲ್ಲಿಸಿರುವ ದೂರನ್ನು ಸ್ವೀಕರಿಸಿರುವ ದೂರನ್ನು ನ್ಯಾಯಧೀಶೆ ಹೇಮಲತಾ ಬಸಪ್ಪನವರು ಪ್ರಕರಣದ ತನಿಖೆ ಮಾಡಿ ವರದಿ ಸಲ್ಲಿಸುವಂತೆ ಕುಂದಾಪುರದ ಪೊಲೀಸರಿಗೆ ಆದೇಶಿಸಿದ್ದಾರೆ.