ಮಲ್ಲೇಶ್ವರಂ ಮದುವೆ ಮನೆಯಲ್ಲಿ ಮೂವರ ಕೊಲೆ

Triple Murder rocked Malleswaram
ಬೆಂಗಳೂರು, ಡಿ.5: ಮಲ್ಲೇಶ್ವರದ ಸಂಪಿಗೆ ರಸ್ತೆಯ ನ್ಯೂ ಶಾಂತಿಸಾಗರ ಹೋಟೆಲ್‌ನಲ್ಲಿ ನಡೆಯುತ್ತಿದ್ದ ಆರತಕ್ಷತೆ ಸಮಾರಂಭಕ್ಕೆ ನುಗ್ಗಿದ ದುಷ್ಕರ್ಮಿಗಳನ್ನು ಸಮಾರಂಭದಲ್ಲಿದ್ದವರೇ ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿದ ಘಟನೆ ಶನಿವಾರ ರಾತ್ರಿ ನಡೆದಿದೆ.

ಗಾಯತ್ರಿ ನಗರದ ಕುಖ್ಯಾತ ರೌಡಿ ಲಂಬೂ ನಟರಾಜ್, ಆತನ ಸಹಚರರಾದ ಭರತ್‌ರಾಜ್ ಮತ್ತು ರವಿ ಕೊಲೆಯಾದವರು. ಇವರ ಎದುರಾಳಿ ಗುಂಪಿನವರಾದ ಪ್ರಶಾಂತ್ ಎಂಬಾತನ ಸ್ನೇಹಿತ ಶ್ರೀನಿವಾಸ್ ಎಂಬುವರ ಸಹೋದರಿಯ ಆರತಕ್ಷತೆ ಸಮಾರಂಭ ಈ ಹೋಟೆಲ್‌ನಲ್ಲಿ ನಡೆಯುತ್ತಿತ್ತು.

ಪ್ರಶಾಂತ್ ಮತ್ತು ಆತನ ಸಹಚರ ಪ್ರಭು ಎಂಬುವರನ್ನು ಕೊಲೆ ಮಾಡುವ ಸಲುವಾಗಿ ಲಂಬೂ ನಟರಾಜ್ ತನ್ನ ಸಹಚರರೊಂದಿಗೆ ಈ ಹೋಟೆಲ್‌ಗೆ ನುಗ್ಗಿದರು. ಈ ಸಂದರ್ಭದಲ್ಲಿ ಎರಡೂ ಗುಂಪಿನವರ ನಡುವೆ ಮಾರಾಮಾರಿ ನಡೆದು ಪ್ರಶಾಂತ್‌ನ ಕಡೆಯುವರು ಆ ಮೂವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದರು ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧನ: ಘಟನಾ ಸ್ಥಳಕ್ಕೆ ಭೇಟಿ ನೀಡಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ನಗರ ಪೊಲೀಸ್ ಕಮಿಷನರ್ ಶಂಕರ್ ಬಿದರಿ 'ಘಟನೆ ಸಂಬಂಧ ಪ್ರಶಾಂತ್, ಪ್ರಭು ಸೇರಿದಂತೆ ಮೂರು ಮಂದಿಯನ್ನು ಬಂಧಿಸಲಾಗಿದೆ.

ಕೊಲೆಯಾದವರು ಹಾಗೂ ಕೊಲೆ ಆರೋಪಿಗಳು ಈ ಹಿಂದೆ ರೌಡಿ ಸೈಲೆಂಟ್ ರವಿಯ ಸಹಚರರಾಗಿದ್ದರು. ಆದರೆ ವ್ಯವಹಾರದ ವಿಷಯವಾಗಿ ಪರಸ್ಪರ ನಡುವೆ ಭಿನ್ನಾಭಿಪ್ರಾಯ ಉಂಟಾಗಿತ್ತು. ಇದರಿಂದ ಉಭಯ ಗುಂಪಿನವರ ನಡುವೆ ದ್ವೇಷ ಮೂಡಿತ್ತು. ಈ ಕಾರಣದಿಂದಲೇ ಇವರ ಕೊಲೆಯಾಗಿದೆ" ಎಂದು ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+