ಬಂಗಾರಪ್ಪ ಅವರ ಬಂಗಲೆ ಜಪ್ತಿಗೆ ಕೋರ್ಟ್ ಆದೇಶ

1993 ರಲ್ಲಿ ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರಿಗೆ ಸೇರಿದ ಅಕಾಶ್ ಆಡಿಯೋ ಕಂಪನಿ ಹೆಸರಿನಲ್ಲಿ ಕೆ.ಎಸ್.ಎಸ್ ಐ.ಡಿ.ಸಿ. ಯಿಂದ ಸುಮಾರು 1.14 ಕೋಟಿ ರೂ. ಸಾಲ ಪಡೆಯಲಾಗಿದ್ದು, ಸಾಲ ಮರುಪಾವತಿ ಆಗಿರಲಿಲ್ಲ.ಈ ಸಾಲಕ್ಕೆ ಮಲ್ಲೇಶ್ವರಂನಲ್ಲಿರುವ ಲಾವಣ್ಯ ಟವರ್ಸ್ ಹಾಗೂ ಸದಾಶಿವನಗರದಲ್ಲಿರುವ ಶ್ರೀರೇಣುಕಾಂಬ ಕಟ್ಟಡವನ್ನು ಅಡಮಾನ ಇಟ್ಟಿದ್ದರು. ಸಾಲದ ಮೂಲಧನ, ಬಡ್ಡಿ, ಚಕ್ರಬಡ್ಡಿ ಎಲ್ಲಾ ಸೇರಿ ಈವರೆಗೆ 3.70 ಕೋಟಿ ರು.ಗಳಾಗಿವೆ ಎಂದು ಕೆಎಸ್ ಎಸ್ ಐಡಿಸಿ ದೂರಿದೆ.
ಈ ಪ್ರಕರಣ ನ್ಯಾಯಾಲಯದ ಮಟ್ಟಿಲೇರಿದ್ದು, ಈ ಬಗ್ಗೆ ವಿಚಾರಣೆ ನಡೆಸಿದ ನಗರದ ಸಿವಿಲ್ ನ್ಯಾಯಾಲಯ ಸಾಲ ಮರುಪಾವತಿ ಮಾಡದ ಹಿನ್ನೆಲೆಯಲ್ಲಿ ಬಂಗಾರಪ್ಪನವರಿಗೆ ಸೇರಿದ ಸದಾಶಿವನಗರದ ಮನೆ ಹಾಗೂ ಕುಮಾರಪಾರ್ಕ್ನಲ್ಲಿರುವ ಆಕಾಶ್ ಆಡಿಯೊ ಕಂಪನಿ ಕಟ್ಟಡವನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಆದೇಶಿಸಿದೆ.












Click it and Unblock the Notifications