ಜಗನ್ ರೆಡ್ಡಿ ರಾಜೀನಾಮೆ, ಹೊಸ ಪಕ್ಷ ಸ್ಥಾಪನೆ?
ರಾಜೀನಾಮೆ ನೀಡಿರುವ ಜಗನ್, ತನ್ನ ತಂದೆ ವೈಎಸ್ ಆರ್ ಹೆಸರಿನಲ್ಲಿ "ವೈಎಸ್ ಆರ್ ಕಾಂಗ್ರೆಸ್ "ಹೊಸ ಪ್ರಾದೇಶಿಕ ಪಕ್ಷವನ್ನು ಘೋಷಿಸಿದ್ದಾರೆ. ಅಲ್ಲದೆ, ಜಗನ್ ಬೆಂಬಲಿಗ ಶಾಸಕರು ರಾಜೀನಾಮೆ ನೀಡಿದಲ್ಲಿ, ಸರಕಾರ ಪತನಗೊಳ್ಳುವ ಸಾಧ್ಯತೆಯಿದೆ. ಇದನ್ನು ತಡೆಯಲು ರಾಜ್ಯದ ಉಸ್ತುವಾರಿ ಹೊತ್ತಿರುವ ವೀರಪ್ಪ ಮೊಯ್ಲಿ, ನೂತನ ಮುಖ್ಯಮಂತ್ರಿ ಕಿರಣ್ ಕುಮಾರ್ ರೆಡ್ಡಿ ಅವರು ಪ್ರಜಾರಾಜ್ಯಂ ಅಧ್ಯಕ್ಷ ಕೆ. ಚಿರಂಜೀವಿ ಬೆಂಬಲ ಕೋರಿರುವ ಬಗ್ಗೆ ಟಿವಿ ಮಾಧ್ಯಮಗಳಲ್ಲಿ ವರದಿಯಾಗಿದೆ.
ಸರ್ಕಾರ ಪತನ ಸಾಧ್ಯವೇ?: ಆಂಧ್ರಪ್ರದೇಶ ವಿಧಾನಸಭೆಯು 294 ಸದಸ್ಯ ಬಲವನ್ನು ಹೊಂದಿದೆ. ಕಾಂಗ್ರೆಸ್ ಬಳಿ ಸುಮಾರು 156 ಸ್ಥಾನಗಳಿವೆ. ಸರ್ಕಾರದ ಬೆಂಬಲಕ್ಕೆ 147 ಸದಸ್ಯರು ಸಾಕು. ಚಿರಂಜೀವಿ ನೇತೃತ್ವದ ಪ್ರಜಾರಾಜ್ಯಂ ಹೊಂದಿರುವ ಶಾಸಕರ ಸಂಖ್ಯೆ 18. ಹೀಗಾಗಿ ಜಗನ್ ಹಿಂದೆ 30 ರಿಂದ 35 ಶಾಸಕರು ಹೋದರೂ, ಸರ್ಕಾರ ಉಳಿಸಿಕೊಳ್ಳಬಹುದು ಎಂಬ ವಿಶ್ವಾಸ ಕಾಂಗ್ರೆಸ್ಸಿಗಿದೆ. ಅಲ್ಲದೆ, ಜಗನ್ ಚಿಕ್ಕಪ್ಪ ವಿವೇಕಾನಂದ ರೆಡ್ಡಿ ಅವರ ಸಂಪುಟಕ್ಕೆ ಸೇರಿಸಿಕೊಂಡಿದ್ದಲ್ಲದೆ, ವೈಎಸ್ ಆರ್ ಹಿಂಬಾಲಕರಾಗಿದ್ದ ಹಿರಿಯ ನಾಯಕರಿಗೆ ಸೂಕ್ತ ಸ್ಥಾನ ಕಲ್ಪಿಸಿ, ಜಗನ್ ಗೆ ಹೊಡೆತ ನೀಡುವಲ್ಲಿ ಆಂಧ್ರ ಸಿಎಂ ಕಿರಣ್ ರೆಡ್ಡಿ ನಿರತರಾಗಿದ್ದಾರೆ.