ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈ ವಿದ್ಯಾರ್ಥಿಗಳ ಸಾಧನೆಗೆ ಬೆನ್ನು ತಟ್ಟೋಣವೆ?

By Prasad
|
Google Oneindia Kannada News

Rohit SJ, Bellary district
ಬಳ್ಳಾರಿ, ನ. 26 : ವಿದ್ಯಾರ್ಥಿಗಳಿಗೆ ಕಲಿಸಲು ಅಗತ್ಯವಿರುವ ಸೌಕರ್ಯಗಳಿಗೆ ಗ್ರಾಮೀಣ ವಿಭಾಗದಲ್ಲಿ ಯಾವತ್ತಿದ್ದರೂ ಕೊರತೆ ಇದ್ದೇ ಇರುತ್ತದೆ. ಅದರಲ್ಲೂ ಆರ್ಥಿಕವಾಗಿ ಹಿಂದುಳಿದಿದ್ದರೆ ಎಸ್ಎಸ್ಎಲ್ ಸಿ ಮುಗಿದ ನಂತರ ಕಾಲೇಜಿಗೆ ಚಕ್ಕರ್ ಹಾಕುವವರೇ ಜಾಸ್ತಿ. ಪರಿಸ್ಥಿತಿ ಹೀಗಿರುವಾಗ, ಗ್ರಾಮೀಣ ಹಿನ್ನೆಲೆಯಿರುವ ಮತ್ತು ಆರ್ಥಿಕವಾಗಿ ಸಬಲರಲ್ಲದ ಈ ಹುಡುಗರ ಮತ್ತು ಹುಡುಗಿಯರ ಈ ಸಾಧನೆಗೆ ಬೆನ್ನು ತಟ್ಟೋಣವೆ?

ಎಸ್.ಜೆ. ರೋಹಿತ್ : ಬಳ್ಳಾರಿಯ ನ್ಯಾಷನಲ್ ಕಾಲೇಜಿನ ವಿದ್ಯಾರ್ಥಿ ಎಸ್.ಜೆ. ರೋಹಿತ್ 2009-10ನೇ ಸಾಲಿನಲ್ಲಿ ನಡೆದ ಬಿಬಿಎಂ ಪದವಿ ಪರೀಕ್ಷೆಯಲ್ಲಿ ದ್ವೀತಿಯ ರ್‍ಯಾಂಕ್ ಪಡೆದಿದ್ದಾರೆ. ವಿದ್ಯಾರ್ಥಿಯ ಈ ಸಾಧನೆಗೆ ಕಾಲೇಜಿನ ಆಡಳಿತ ಮಂಡಲಿ ಅಧ್ಯಕ್ಷ ಎನ್. ಪ್ರತಾಪರೆಡ್ಡಿ, ಪೋಷಕರು, ಬೋಧಕವರ್ಗ, ಸ್ನೇಹಿತರು ಅಭಿನಂದನೆ ಸಲ್ಲಿಸಿದ್ದಾರೆ.

***

ಪದ್ಮಾವತಿ : ಬಳ್ಳಾರಿಯ ಇಂಡಿಯನ್ ಡಿಎಡ್ ಕಾಲೇಜಿನ ವಿದ್ಯಾರ್ಥಿನಿ ಪದ್ಮಾವತಿ 2009-10ರ ಸಾಲಿನ ವಾರ್ಷಿಕ ಅಂತಿಮ ಪರೀಕ್ಷೆಯಲ್ಲಿ ಶೇ.89ರಷ್ಟು ಅಂಕಗಳನ್ನು ಪಡೆದಿದ್ದಾಳೆ.

***

ಷಾಶವಲಿ, ಕಮಲಾಕ್ಷಿ, ಎಸ್. ಹಸೀನಾ : ಬಳ್ಳಾರಿ ಶಿಕ್ಷಕರ ತರಬೇತಿ ಸಂಸ್ಥೆ ಡಿಇಡಿ ಪರೀಕ್ಷೆಯಲ್ಲಿ 2009-10ರ ಶೈಕ್ಷಣಿಕ ಸಾಲಿನ ವಾರ್ಷಿಕ ಅಂತಿಮ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳಾದ ಷಾಶವಲಿ ಶೇ.88, ಕಮಲಾಕ್ಷಿ ಶೇ.87 ಮತ್ತು ಎಸ್. ಹಸೀನಾ ಶೇ.85 ಅಂಕಗಳಿಸಿ ಉತ್ತಮ ಫಲಿತಾಂಶ ಪಡೆದಿದ್ದಾರೆ.

English summary
Brilliant students of Bellary : Even without proper infrastructure to study these poor village students have scored high marks in various examinations conducted by Karnataka examination authority.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X