ಜನಾರ್ದನ ರೆಡ್ಡಿ ವೀಡಿಯೊ ಟೇಪ್ ಬಿಎಸ್ ವೈ ಕೈವಾಡ?

ವೀಡಿಯೊ ಟೇಪ್ನಲ್ಲಿರುವ ವ್ಯಕ್ತಿ ಅಶೋಕ್ ಶರ್ಮಾ ಯಾರು ಎಂಬುದು ತಮಗೆ ಗೊತ್ತಿಲ್ಲ. ಆ ವ್ಯಕ್ತಿಯ ಹೆಸರು ತಾನು ಕೇಳಿಲ್ಲ. ಅಲ್ಲದೆ, ಟೇಪ್ನಲ್ಲಿ ರಾಜಭವನವನ್ನು ಪ್ರಸ್ತಾಪಿಸಿರುವುದು ಕಂಡರೆ, ರಾಜ್ಯಪಾಲರು ಹಾಗೂ ರಾಜಭವನಕ್ಕೆ ಕೆಟ್ಟ ಹೆಸರು ತರುವ ಯತ್ನ ಇದಾಗಿರಬಹುದು. ಅಲ್ಲದೆ, ಇಂತಹ ಕೃತ್ಯಗಳಲ್ಲಿ ಕಾಂಗ್ರೆಸ್ ನಾಯಕರು ಭಾಗಿಯಾಗಿಲ್ಲ. ಸರ್ಕಾರ ಉರುಳಿಸಲು ಈ ರೀತಿ ತಂತ್ರ ಮಾಡುವುದಿಲ್ಲ ಈ ಸಂಬಂಧ ಸಮಗ್ರ ತನಿಖೆಯಾಗಲಿ ಎಂದು ಸಿದ್ದರಾಮಯ್ಯ ಸ್ಪಷ್ಟಣೆ ನೀಡಿದರು.
ಸ್ವಯಂ ಕೃತ ಅಪರಾಧ ಕಾರಣ: ಮಾಧ್ಯಮಗಳಲ್ಲಿ ಪ್ರಸಾರವಾದಂತೆ ಈ ವಿಡಿಯೋ ದೃಶ್ಯಗಳು ಆಗಸ್ಟ್ನಲ್ಲಿ ಚಿತ್ರೀಕೃತವಾಗಿದೆ. ಹಾಗಿದ್ದರೂ ಯಡಿಯೂರಪ್ಪ ಈವರೆಗೆ ರೆಡ್ಡಿ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿರಲು ಕಾರಣವೇನು? ಬಿಜೆಪಿ ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರತಿಪಕ್ಷಗಳು ಯತ್ನಿಸುತ್ತಿಲ್ಲ. ಸ್ವಯಂ ಕೃತ ಅಪರಾಧವೆ ಯಡಿಯೂರಪ್ಪರ ಇಂದಿನ ಸ್ಥಿತಿಗೆ ಕಾರಣ. ಅವರ ಪಕ್ಷದ ಆಂತರಿಕ ಕಿತ್ತಾಟವೇ ಅವರನ್ನು ಈ ಸ್ಥಿತಿಗೆ ತಂದಿದೆ ಎಂದು ಸಿದ್ದರಾಮಯ್ಯ ಹೇಳಿದರು.












Click it and Unblock the Notifications