ಯಡ್ಡಿಗೆ ಒಂದು ಚಿಂತೆಯಾದರೆ ವರ್ತೂರ್ ಮತ್ತೊಂದು

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಪಕ್ಷದ ರಾಜ್ಯಾಧ್ಯಕ್ಷ ಈಶ್ವರಪ್ಪ, ಅನಂತಕುಮಾರ್ ಅವರ ಮೇಲೆ ನನಗೆ ಸಂಪೂರ್ಣ ಭರವಸೆ ಇದೆ. ಬಿಜೆಪಿಯಲ್ಲಿ ನಡೆಯುತ್ತಿರುವ ವಿದ್ಯಮಾನಗಳಿಗೂ ತಮಗೂ ಯಾವುದೇ ಸಂಬಂಧವಿಲ್ಲ. ಆ ಯಾವುದೇ ಬೆಳವಣಿಗೆಯಲ್ಲಿ ತಾವು ಭಾಗಿಯಾಗಿಲ್ಲ. ಆಗುವುದೂ ಇಲ್ಲ ಎಂದರು.
ಸಿಎಂಗೆ ಬಹು ಪರಾಕ್ : ಮುಖ್ಯಮಂತ್ರಿ ಅವರು ಭರವಸೆ ನೀಡಿದ ರೀತಿಯಲ್ಲಿ ಕೋಲಾರ ಕ್ಷೇತ್ರದ ಅಭಿವೃದ್ಧಿಗೆ ಈಗಾಗಲೇ 25 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದ್ದಾರೆ. ಇನ್ನೂ ಹೆಚ್ಚಿನ ಹಣ ಬಿಡುಗಡೆ ಮಾಡುವಂತೆ ಕೋರಿದ್ದೇನೆ. ಅದಕ್ಕೂ ಅವರು ಒಪ್ಪಿದ್ದಾರೆ. ಸಂಪುಟ ವಿಸ್ತರಣೆ ಯಾವಾಗ ಬೇಕಾದರೂ ಮಾಡಲಿ, ತಾವು ಸೇರ್ಪಡೆಯಾಗುವುದು ಖಚಿತವಾಗಿರುವುದರಿಂದ ಹೆಚ್ಚು ಒತ್ತಾಯ ಮಾಡಲು ಹೋಗುವುದಿಲ್ಲ ಎಂದು ವರ್ತೂರು ಪ್ರಕಾಶ್ ಹೇಳಿದರು.












Click it and Unblock the Notifications