ಬೆಂಗಳೂರಿನಲ್ಲಿ ಇಬ್ಬರು ಟೆಕ್ಕಿಗಳು ಆತ್ಮಹತ್ಯೆ

Crimebeat
ಬೆಂಗಳೂರು, ನ. 15 : ನಗರದಲ್ಲಿ ನಡೆದ ಎರಡು ಪ್ರತ್ಯೇಕ ಘಟನೆಯಲ್ಲಿ ವೈದ್ಯ ಮತ್ತು ಸಾಫ್ಟ್ ವೇರ್ ಇಂಜಿನಿಯರ್ ಪತ್ನಿಯರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದಾಖಲಾಗಿದೆ. ಆತ್ಮಹತ್ಯೆ ಮಾಡಿಕೊಂಡಿರುವ ಇಬ್ಬರೂ ಸಾಫ್ಟ್ ವೇರ್ ಇಂಜನಿಯರ್ ಗಳು ಎಂದು ಪೊಲೀಸರು ತಿಳಿಸಿದ್ದಾರೆ.

ಮಾನಸಿಕ ಒತ್ತಡ ತಾಳಲಾರದೇ ವೈದ್ಯರೊಬ್ಬರ ಪತ್ನಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಾಮರಾಜಪೇಟೆಯ ಅಜಾದ್ ನಗರದಲ್ಲಿ ನಡೆದಿದೆ. ವೈದ್ಯ ಗಿರೀಶ ಬಾಬು ಎಂಬುವವರ ಪತ್ನಿ ವಾಣಿ (30) ಅತ್ಮಹತ್ಯೆ ಮಾಡಿಕೊಂಡವರು. ವಾಣಿ ಅವರು ಸಿಸ್ಕೋ ಕಂಪನಿಯಲ್ಲಿ ಸಾಫ್ಟ್ ವೇರ್ ಇಂಜನಿಯರ್ ಆಗಿ ಕೆಲಸ ಮಾಡುತ್ತಿದ್ದರು. ತಾಯಿಯ ಮನೆಯಲ್ಲಿ ವಾಣಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ವರದಕ್ಷಿಣೆ ಕಿರುಕುಳ : ವೈಟ್ ಪೀಲ್ಡ್ ನ ಐಟಿಪಿಎಲ್ ಸಾಫ್ಟ್ ವೇರ್ ಕಂಪನಿಯಲ್ಲಿ ಮ್ಯಾನೇಜರ್ ಆಗಿರುವ ಯತೀಶ್ ಎಂಬುವವರ ಪತ್ನಿ ಪ್ರತಿಮಾ(25)ವರದಕ್ಷಿಣೆ ಕಿರುಕುಳ ತಾಳಲಾರದೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಾಣಿ ಅವರು ಪತಿ ಮತ್ತು ಆತನ ಪೋಷಕರ ಜೊತೆ ಜೆಪಿ ನಗರದಲ್ಲಿ ವಾಸವಿದ್ದರು. ವಿವಾಹವಾಗಿ ಮೂರು ವರ್ಷಗಳಾಗಿದ್ದವು. ಎರಡು ವರ್ಷದ ಗಂಡು ಮಗುವಿದೆ. ಎಂಬಿಎ ಪದವೀಧರೆಯಾಗಿದ್ದ ಪ್ರತಿಮಾ ಮ್ಯಾಗ್ನಾ ಇನ್ಫೋಟೆಕ್ ನಲ್ಲಿ ಕೆಲಸ ಮಾಡುತ್ತಿದ್ದರು. ಮದುವೆ ಸಮಯದಲ್ಲಿ ಯತೀಶ್ ಗೆ 14 ಲಕ್ಷ ರುಪಾಯಿ ವರದಕ್ಷಿಣೆಯಾಗಿ ನೀಡಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+