ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ತಮಿಳುನಾಡಿಗೆ ಕಾವೇರಿ ನೀರು ಬಿಡಲ್ಲ : ಸಿಎಂ
ತುರ್ತಾಗಿ ಕಾವೇರಿ ನೀರು ಒದಗಿಸುವಂತೆ ತಮಿಳುನಾಡು ಮುಖ್ಯಮಂತ್ರಿ ಕರುಣಾನಿಧಿ ರಾಜ್ಯ ಸರಕಾರಕ್ಕೆ ಪತ್ರ ಬರೆದಿದ್ದರು. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಗೃಹ ಕಚೇರಿ ಕೃಷ್ಣಾದಲ್ಲಿ ಬುಧವಾರ ಸಂಜೆ ಸರ್ವಪಕ್ಷ ಮುಖಂಡರ ಮಹತ್ವದ ಸಭೆ ನಡೆಯಿತು. ಕಾವೇರಿ ಕೊಳ್ಳದ ರೈತರ ಹಿತದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳ ಲಾಗಿದೆ.
ಈಗ ತಮಿಳುನಾಡಿಗೆ ನೀರು ಕೊಡಲು ಸಾಧ್ಯವಿಲ್ಲ. ಕೃಷ್ಣರಾಜಸಾಗರ ಆಣೆಕಟ್ಟೆ ತುಂಬಿದ ಬಳಿಕ ಸಹಜವಾಗಿ ಹೆಚ್ಚುವರಿ ನೀರು ಹರಿದು ಹೋಗಲಿದೆ. ಅಲ್ಲಿಯವರೆಗೆ ತಮಿಳುನಾಡು ಕಾಯಬೇಕು ಎಂದು ಸಭೆ ಬಳಿಕ ಮಾತನಾಡಿದ ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು. ವಯನಾಡು ಹಾಗೂ ಕೊಡಗಿನಲ್ಲಿ ವ್ಯಾಪಕ ಮಳೆಯಾಗುತ್ತಿದೆ. ಕೃಷ್ಣರಾಜಸಾಗರ ದಲ್ಲಿ 17 ಸಾವಿರ ಕ್ಯೂಸೆಕ್ ಒಳಹರಿವು ಇದೆ. ಆಣೆಕಟ್ಟೆ 124.8 ಅಡಿ ಎತ್ತರವಿದೆ. ಶೀಘ್ರದಲ್ಲಿ ನೀರು ಈ ಮಟ್ಟ ತಲುಪಬಹುದೆಂದು ನಿರೀಕ್ಷಿಸಲಾಗಿದೆ. ಆಗ ತುಂಬಿ ಹರಿಯುವ ನೀರು ತಮಿಳುನಾಡಿಗೆ ಸಿಗಲಿದೆ ಎಂದು ಹೇಳಿದರು.
Comments
Story first published: Thursday, October 28, 2010, 12:47 [IST]