ಕಾಮನ್ ವೆಲ್ತ್ : ಅಂತಿಮ ದಿನವೂ ಭಾರತಕ್ಕೆ ಶುಭಕರ

ಅಂತಿಮ ದಿನ ಮಾಧ್ಯಮಗಳಿಂದ ಪ್ರಧಾನ ಆಯೋಜಕ ಸುರೇಶ್ ಕಲ್ಮಾಡಿ ದೂರ ಉಳಿದಿದ್ದಾರೆ. ಮಾಧ್ಯಮದವರ ಮಾತಿಗೆ ಸಿಕಿದ್ದು ಕಾಮನ್ ವೆಲ್ತ್ ಫೆಡೆರೇಷನ್ ಅಧ್ಯಕ್ಷ ಮೈಕಲ್ ಫೆನ್ನೆಲ್ , ಸಿಇಒ ಮೈಕಲ್ ಹೂಪರ್ ಮಾತ್ರ. ನಮಗೆ ವಿಶ್ವಾಸವಿತ್ತು. ಒಟ್ಟಾರೆ ಅಥ್ಲೀಟ್ ಗಳು ಖುಷಿಯಾಗಿ ತೆರಳಿದ್ದಾರೆ. ಕಾಮನ್ ವೆಲ್ತ್ ಕ್ರೀಡಾಕೂಟ ಯಶಸ್ವಿಯಾಗಿದೆ ಎಂದು ಫೆನ್ನೆಲ್ ಘೋಷಿಸಿದರು. ಸುಮಾರು 5 ಸಾವಿರ ಕ್ರೀಡಾಳುಗಳು ಸಮಾರೋಪ ಸಮಾರಂಭದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.
ಓದಿ: 2010 ಇಸವಿಯಲ್ಲಿ ಕ್ರೀಡಾ ಕಲಿಗಳ ಏಳು ಬೀಳು
ದಿನದ ವಿಶೇಷ: ಪ್ರಧಾನಿ ಮನಮೋಹನ್ ಸಿಂಗ್ ಅವರು ಭಾರತ ಆಸ್ಟ್ರೇಲಿಯಾ ಹಾಕಿ ಫೈನಲ್ ಪಂದ್ಯ ವೀಕ್ಷಿಸಿದ್ದು ಇಂದಿನ ವಿಶೇಷ. ಆದರೆ, ಚಿನ್ನದ ಗೆಲ್ಲುವ ಆಸೆ ಹುಟ್ಟ್ಟಿಸಿದ್ದ ಹಾಕಿ ತಂಡ, ಅಂತಿಮ ಹಣಾಹಣಿಯಲ್ಲಿ ಆಸ್ಟ್ರೇಲಿಯಾಕ್ಕೆ 8-0ಅಂತರದಿಂದ ಸೋತು ರಜತ ಪದಕಕ್ಕೆ ತೃಪ್ತಿಪಟ್ಟುಕೊಂಡರು.
ಸೂಪರ್ ಸೈನಾ: ಬಾಡ್ಮಿಂಟನ್ ಸಿಂಗಲ್ಸ್ ಫೈನಲ್ ನಲ್ಲಿ ಸೈನಾ ನೆಹ್ವಾಲ್ ಅವರು ಮಲೇಷಿಯಾದ ಮಿಯೂ ಚೂ ವಾಂಗ್ ಅವರು 19-21, 23-21, 21-13 ಅಂತರದಿಂದ ಸೋಲಿಸಿ ಚಿನ್ನದ ಪದಕ ಗಳಿಸಿದ್ದಾರೆ. ಈ ಮೂಲಕ ಪದಕ ಪಟ್ಟಿಯಲ್ಲಿ ಇಂಗ್ಲೆಂಡ್ ಅನ್ನು ಹಿಂದಿಕ್ಕಿ ಎರಡನೇ ಸ್ಥಾನಕ್ಕೆ ಭಾರತ ಜಿಗಿದಿದೆ.ಒಟ್ಟು 38 ಚಿನ್ನ, 27 ಬೆಳ್ಳಿ ಮತ್ತು 34 ಕಂಚಿನೊಂದಿಗೆ ಶತಕದ(101 ಪದಕ) ಗಡಿ ದಾಟಿ ಮುನ್ನುಗ್ಗಿದ ದಾಖಲೆ ಮೆರೆದಿದೆ.
ಚಿನ್ನದ ಹುಡುಗಿಯರು: ಬಾಡ್ಮಿಂಟನ್ ಮಹಿಳೆಯ ಡಬಲ್ಸ್ ನಲ್ಲಿ ಭಾರತದ ಎರಡನೇ ಸೀಡ್ ನ ಜ್ವಾಲಾ ಗುಟ್ಟಾ, ಕನ್ನಡತಿಅಶ್ವಿನಿ ಪೊನ್ನಪ್ಪ ಜೋಡಿ 21-16 21-19.ಸೆಟ್ ಗಳ ಮೂಲಕ ಸಿಂಗಪುರದ ಶಾಂತಿ-ಲೈ ಜೋಡಿಯನ್ನು ಮಣಿಸಿ ಚಿನ್ನದ ಪದಕವನ್ನು ಕೊರಳಿಗೇರಿಸಿಕೊಂಡರು.
ಇದಕ್ಕೂಮುನ್ನ ಪುರುಷರ ಟೇಬಲ್ ಟೆನಿಸ್ ಸಿಂಗಲ್ಸ್ ವಿಭಾಗದಲ್ಲಿ ಅಚಂತಾ ಶರತ್ ಕಮಾಲ್ ಅವರು ಎದುರಾಳಿ ಭಾರತದವರೇ ಆದ ಸೌಮ್ಯದೀಪ್ ರಾಯ್ರನ್ನು ಮಣಿಸುವ ಮೂಲಕ ದೇಶಕ್ಕೆ 100ನೇ ಪದಕವನ್ನು ಗೆದ್ದುಕೊಟ್ಟರು.
ವೈವಿಧ್ಯಮಯ ಸಂಗೀತ ಕಾರ್ಯಕ್ರಮಗಳು: ಚಕ್ ದೆ ಚಕ್ ದೆ ಇಂಡಿಯಾ ಗೀತೆ, ಸೂಫಿ ,ಶಾಸ್ತ್ರೀಯ ಸಂಗೀತ, ಸ್ಕಾಟ್ ಲ್ಯಾಂಡ್ ನ ಸಾಂಪ್ರದಾಯಿಕ ಬ್ಯಾಗ್ ಪೈಪರ್ ಸಂಗೀತ ಪ್ರೇಕ್ಷಕರ ಮನತಣಿಸಲಿದೆ. 2,010 ಶಾಲಾ ಮಕ್ಕಳಿಂದ 'ವಂದೇ ಮಾತರಂ' ಗೀತೆಗೆ 50 ನಿಮಿಷಗಳ ನರ್ತನ ಪ್ರದರ್ಶನವಿದೆ. ಕೇರಳ, ಪಂಜಾಬ್, ಮಣಿಪುರ, ಮಹಾರಾಷ್ಟ್ರ, ಗುಜರಾತ್, ಕರ್ನಾಟಕ ಹಾಗೂ ತಮಿಳುನಾಡಿನ ಸುಮಾರು 800 ಸಮರಕಲೆ ತಜ್ಞರಿಂದ 'ಅಗ್ನಿ' ಎಂಬ ಹೆಸರಿನಲ್ಲಿ ಅಮೋಘ ಪ್ರದರ್ಶನಕ್ಕೆ ವೇದಿಕೆ ಸಜ್ಜಾಗಿದೆ.
ಶಂಕರ್ ಮಹಾದೇವನ್, ಸುನೀಧಿ ಚೌಹಾಣ್, ಇಂಡಿಯನ್ ಐಡಲ್ ವಿಜೇತ ಶ್ರೀರಾಮ್ ಸೇರಿದಂತೆ ಅನೇಕ ಹೆಸರಾಂತ ಕಲಾವಿದರ ಸಂಗೀತ ಲಹರಿ ಹರಿಯಲಿದೆ. ಉಳಿದಂತೆ ಬಿರಿಸು ಬಾಣಗಳು, ಲೇಸರ್ ಷೋ ಎಲ್ಲರ ಮನಸೂರೆ ಮಾಡಲಿದೆ.
-
Horoscope March 14: ಈ ರಾಶಿಯವರ ಆರ್ಥಿಕ ಸ್ಥಿತಿ ಸುಧಾರಣೆ, ದಾಂಪತ್ಯ ಜೀವನದಲ್ಲಿ ಸಂತಸ, ದಿನ ಭವಿಷ್ಯ -
BCCI: ಕರ್ನಾಟಕದ ಕ್ರಿಕೆಟ್ ದಿಗ್ಗಜರಾದ ರಾಹುಲ್ ದ್ರಾವಿಡ್, ರೋಜರ್ ಬಿನ್ನಿಗೆ ಬಿಸಿಸಿಐ ಅತ್ಯುನ್ನತ ಪ್ರಶಸ್ತಿ -
Yash: ಯಶ್ ಡಿಪ್ರೆಶನ್ನಲ್ಲಿದ್ದಾರೆ, ಕೆಜಿಎಫ್ ರೀತಿಯ ಸಿನಿಮಾ ನೀಡಲು ಆಗ್ತಿಲ್ಲ: ಜ್ಯೋತಿಷಿ ವೇಣುಸ್ವಾಮಿ -
Ajith Kumar: ನಟ ಅಜಿತ್ ಕುಮಾರ್ಗೆ ಮಹೀಂದ್ರಾದಿಂದ ರೇಸಿಂಗ್ ಕಾರ್ ಗಿಫ್ಟ್; ಇದರ ಫೀಚರ್ಸ್ ಕೇಳಿದ್ರೆ ಫಿದಾ ಆಗ್ತೀರಿ -
Double-Decker Flyover: ಸಿಲ್ಕ್ ಬೋರ್ಡ್ ಟ್ರಾಫಿಕ್ಗೆ ಮುಕ್ತಿ: ಇದೇ ತಿಂಗಳಲ್ಲಿ ಡಬಲ್ ಡೆಕ್ಕರ್ ಫ್ಲೈಓವರ್ ಸಂಚಾರಕ್ಕೆ ಮುಕ್ತ -
ಪುನೀತ್ ನಟನೆಯ "ಆಕಾಶ್" ರೀರಿಲೀಸ್: ಅಭಿಮಾನಿಗಳ ಜತೆ ಸಿನಿಮಾ ವೀಕ್ಷಿಸಿ ಕುಣಿದು ಕುಪ್ಪಳಿಸಿದ ನಟಿ ರಮ್ಯಾ -
Viral Video: ಮಗನ ಸಾಧನೆ ಕಂಡು ಭಾವುಕರಾದ ಪೋಷಕರು; ಕ್ಯೂಟ್ ವಿಡಿಯೋ ವೈರಲ್ -
ಸರ್ಕಾರಿ ಜಮೀನು ಒತ್ತುವರಿ ತಡೆಗೆ ಪ್ರತಿ ಮೂರು ತಿಂಗಳಿಗೊಮ್ಮೆ ಸ್ಥಳಕ್ಕೆ ಭೇಟಿ ನೀಡುತ್ತಿರಿ: ಸಚಿವ ಕೃಷ್ಣ ಬೈರೇಗೌಡ ಸೂಚನೆ -
Karnataka Weather: ರಾಜ್ಯವನ್ನು ಸುಡುತ್ತಿದೆ ರಣಬಿಸಿಲು; ಕರಾವಳಿ, ಮಲೆನಾಡಿಗೆ ಇಂದು ಮಳೆ ಮುನ್ಸೂಚನೆ -
Trisha Krishnan: ದಳಪತಿ ವಿಜಯ್ ಜೊತೆಗಿನ ಸಂಬಂಧ, ಡಿವೋರ್ಸ್ ಬಗ್ಗೆ ಮಾಧ್ಯಮಗಳ ಪ್ರಶ್ನೆ: ನಟಿ ತ್ರಿಶಾ ಕೊಟ್ಟ ಉತ್ತರವೇನು? -
92,00,00,000 ರೂಪಾಯಿ ಬಹುಮಾನ, ಈತನ ಬಗ್ಗೆ ಸುಳಿವು ನೀಡಿದರೆ ನಿಮಗೂ ಸಿಗಲಿದೆ ಹಣ... Mojtaba Khamenei -
Shri Gandhada Gudi Serial: "ಶ್ರೀಗಂಧದಗುಡಿ" ಸೀರಿಯಲ್ಗೆ ಗುಡ್ಬೈ ಹೇಳಿದ ಸಂಜನಾ ಬುರ್ಲಿ, ಕಾರಣ ಇಲ್ಲಿದೆ












Click it and Unblock the Notifications