ತುಮಕೂರಿನಲ್ಲಿ 'ಆಧಾರ್' ಗುರುತಿನ ಚೀಟಿಗೆ ಚಾಲನೆ

ಮೈಸೂರಿನಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮಾಹಿತಿ ಸಂಗ್ರಹಣೆಯೊಂದಿಗೆ ಸಾಂಕೇತಿಕವಾಗಿ ಹಾಗೂ ತುಮಕೂರಿನಲ್ಲಿ ಸಿದ್ದಗಂಗಾ ಶ್ರೀಗಳ ಮಾಹಿತಿ ಸಂಗ್ರಹಣೆಯೊಂದಿಗೆ ಅಧಿಕೃತವಾಗಿ ಚಾಲನೆ ನೀಡಲಾಯಿತು.
ತುಮಕೂರು ಮಹಾನಗರ ಪಾಲಿಕೆ ಆವರಣದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ 103 ವರ್ಷಗಳ ಜ್ಞಾನವೃದ್ಧರೂ ಆದ ಶಿವಕುಮಾರ ಸ್ವಾಮೀಜಿಗಳ ಹತ್ತು ಬೆರಳುಗಳ ಬೆರಳಚ್ಚು, ಎರಡು ಕಣ್ಣಿನ ಸ್ಕ್ಯಾನ್ ಮಾಡಿ ಭಾವಚಿತ್ರ ತೆಗೆಯುವ ಮೂಲಕ ಅವರ ಮಾಹಿತಿ ದಾಖಲಿಸಿಕೊಳ್ಳಲಾಯಿತು.
ಸ್ವಾಮೀಜಿಗಳಿಗೆ ಮುಂಬರುವ 15 ದಿನಗಳಲ್ಲಿ ವಿಶಿಷ್ಟ ಗುರುತಿನ ಚೀಟಿಯನ್ನು ರವಾನಿಸಲಾಗುತ್ತದೆ ಎಂದು ವಿಪ್ರೋ ಅಧಿಕಾರಿಗಳು ತಿಳಿಸಿದರು. ಬಳಿಕ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವೆ ಹಾಗೂ ಇಂಧನ ಖಾತೆ ಸಚಿವೆ ಶೋಭಾ ಕರಂದ್ಲಾಜೆ ಅವರು ಯುಐಡಿಗಾಗಿ ನೋಂದಾಯಿಸಿಕೊಂಡರು.












Click it and Unblock the Notifications