ಯಡಿಯೂರಪ್ಪ ಕೆಳಗೆ ಉರುಳಿದರೆ ರಾಜ್ಯಕ್ಕೆ ಉಳಿಗಾಲ

"ನಮಗೆ ಅನ್ಯಾಯವಾಗಿದೆ. ನಾಡಿಗೆ ಒಳ್ಳೆ ಆಡಳಿತ ನೀಡಬೇಕು ಎಂಬುದು ನಮ್ಮ ಅಪೇಕ್ಷೆ. ಮುಖ್ಯಮಂತ್ರಿ ಪಟ್ಟದಿಂದ ಯಡಿಯೂರಪ್ಪ ಅವರು ಕೆಳಗಿಳಿಯಲೇ ಬೇಕು. ನಾವು ಮಾಧ್ಯಮದ ಮುಂದೆ ಬಂದು ನಮ್ಮ ನಾಯಕರು ಯಾರೂ ಎಂದು ಪ್ರಕಟಿಸಲಿದ್ದೇವೆ. ಯಾವ ನಾಯಕರ ಆಮಿಷಕ್ಕೂ ಬಲಿಯಾಗುವುದಿಲ್ಲ.
ವಿಪಕ್ಷ ನಾಯಕರ ಜೊತೆ ಮಾತುಕತೆ ಮಾಡಿಲ್ಲ. 120 ಜನ ಶಾಸಕರಲ್ಲಿ ಒಬ್ಬರ ಜೊತೆಯಾದರೂ ಸಿಎಂ ಸಮಾಧಾನದಿಂದ ಮಾತಾಡಿಲ್ಲ. ಅವರ ನಡೆನುಡಿ ಸರಿಯಿಲ್ಲ. ಸಿಎಂ ಸಮರ್ಥರಿದ್ದಾರೆ ಯಾರಾದರೂ ಎದೆಮುಟ್ಟಿ ಹೇಳಿದರೆ ನಾನು ಇಂದೇ ರಾಜಕೀಯ ತೊರೆದುಬಿಡುತ್ತೇನೆ" ಎಂದು ವೀರಾವೇಷದ ಮಾತಾಡಿದವರು ಆನಂದ್ ಆಸ್ನೋಟಿಕರ್.
ತಾವಿರುವ ಸ್ಥಳದ ಸುಳಿವು ಕೊಡದ( ಪುಣ್ಯಸ್ಥಳ ಎಂದಷ್ಟೇ ಖಾಸಗಿ ವಾಹಿನಿಗೆ ಹೇಳಿದರು. ಮೂಲಗಳ ಪ್ರಕಾರ ಎಲ್ಲರೂ ಶಿರಡಿ ಸಾಯಿ ಬಾಬಾನ ಸನ್ನಿಧಿಯಲ್ಲಿದ್ದಾರೆ) ಆನಂದ್ ಆಸ್ನೋಟಿಕರ್ ಅವರು ಅಧಿಕಾರ ವ್ಯಾಮೋಹಿ ಸಿಎಂ, ಹಿಟ್ಲರ್ ರೀತಿ ವರ್ತಿಸುತ್ತಿದ್ದಾರೆ. ಅತೃಪ್ತರ ಸಂಖ್ಯೆ ಸದ್ಯದಲ್ಲೇ 40 ಕ್ಕೇರಲಿದೆ. ಸ್ವಲ್ಪ ಸಮಯದಲ್ಲೇ ಸುದ್ದಿಗೋಷ್ಠಿ ನಡೆಸುತ್ತೇವೆ ಎಂದರು.












Click it and Unblock the Notifications