ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಲೈಂಗಿಕ ಕಿರುಕುಳ ಆರೋಪ ಅಲ್ಲಗೆಳೆದ ಸುಬ್ರಮಣ್ಯಂ
ಸುಬ್ರಮಣ್ಯಂ ಅವರ ವಿರುದ್ಧ ಮನೆ ಕೆಲಸದ ಭಾಗ್ಯ ಎಂಬಾಕೆ ಸಂಸ್ಥೆಯೊಂದರ ಲೆಟರ್ ಹೆಡ್ನಲ್ಲಿ ಲೈಂಗಿಕ ಕಿರುಕುಳದ ದೂರಿನ ಪ್ರತಿಯನ್ನು ಸಂಜಯನಗರ ಪೊಲೀಸರಿಗೆ ನೀಡಿದ್ದಾಳೆ. ತಮ್ಮ ಮನೆಯಲ್ಲಿ ನಾಲ್ಕು ಲಕ್ಷ ರೂ.ಗಿಂತ ಅಧಿಕ ಮೌಲ್ಯದ ಚಿನ್ನಾಭರಣಗಳು ಕಳುವಾಗಿವೆ.ಇದು ಕೆಲಸದಾಕೆಯ ಕೃತ್ಯ ಎಂದು ಸುಬ್ರಮಣ್ಯಂ ಮತ್ತು ಅವರ ಪತ್ನಿ ಖ್ಯಾತ ಹಿನ್ನಲೆ ಗಾಯಕಿ ಕವಿತಾ ಕೃಷ್ಣಮೂರ್ತಿ ಪ್ರತಿದೂರು ನೀಡಿದ್ದಾರೆ.
ಈ ಸಂಬಂಧ ಕೆಲಸದಾಕೆ ಭಾಗ್ಯಳನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಸಂಘಟನೆಯೊಂದರ ಲೇಟರ್ ಹೆಡ್ ಬಳಸಿ ಭಾಗ್ಯ ದೂರು ನೀಡಿದ್ದಾಳೆ. ಇದರ ಬದಲಿಗೆ ತಾನೇ ಲಿಖಿತವಾಗಿ ಪೊಲೀಸ್ ಠಾಣೆಗೆ ದೂರು ನೀಡಿದರೆ ಎಫ್ ಐಆರ್ ದಾಖಲಿಸಿ, ತನಿಖೆ ನಡೆಸಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಶಂಕರ ಬಿದರಿ ತಿಳಿಸಿದ್ದಾರೆ.
Comments
ಲೈಂಗಿಕ ಕಿರುಕುಳ ಶಂಕರ್ ಬಿದರಿ ರೇಪ್ ಕ್ರೈಂ ಬೆಂಗಳೂರು ಕಳ್ಳತನ ಸಂಜಯನಗರ sexual harassment rape crime beat bengaluru
Story first published: Wednesday, September 8, 2010, 12:17 [IST]