ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಸಾವಿರ ಕೋಟಿ ರು. ಭೂಕಬಳಿಕೆ ಹಗರಣ ಬಯಲು
ವಿವೇಕನಗರದ ಪೊಲೀಸ್ ಠಾಣೆ ವ್ಯಾಪ್ತಿಯ ಕೋರಮಂಗಲದ ಶಾಂತಿನಗರದ ಗೃಹ ನಿರ್ಮಾಣ ಸಹಕಾರ ಸಂಘವನ್ನು ಅದೇ ಹೆಸರಿನಲ್ಲಿ ನಕಲು ಮಾಡಿ ಬೇರೆ ಸದಸ್ಯರನ್ನು ಸೃಷ್ಟಿಸಿ ಸುಮಾರು 66.22 ಎಕರೆ ಜಾಗವನ್ನು ಒತ್ತುವರಿ ಮಾಡಲಾಗಿತ್ತು. ಹಗರಣದ ಪ್ರಮುಖ ರೂವಾರಿ ಆಂಧ್ರ ಮೂಲದ ಲಾರೆನ್ಸ್ ಪ್ರೊಜೆಕ್ಟ್ ಸಂಸ್ಥೆ ಮುಖ್ಯಸ್ಥ ಜಿ ಪಿ ರೆಡ್ಡಿ (50), ಆಡುಗೋಡಿ ಲಕ್ಷ್ಮಣ್, ಶಶಿಕುಮಾರ್ ಶ್ರೀಕಂಠ, ತ್ಯಾಗರಾಜ ಹಾಗೂ ಚಂದ್ರಶೇಖರ್ ಎಂಬುವವರನ್ನು ಬಂಧಿಸಲಾಗಿದೆ.
ಈ ಹಗರಣದಲ್ಲಿ ಪ್ರಭಾವಿಗಳು ಹೆಸರು ತಳುಕು ಹಾಕಿಕೊಂಡಿದೆ. 1986ರಲ್ಲಿ ಭೂಮಿಯನ್ನು ವಶಕ್ಕೆ ತೆಗೆದುಕೊಂಡಿದ್ದರೂ 2004ರವರೆಗೆ ನಿವೇಶನ ಹಂಚಿಕೆ ಮಾಡದ ಮೂಲ ಸಂಸ್ಥೆ ವಿರುದ್ಧವೂ ಅನುಮಾನವಿದೆ. ಹೀಗಾಗಿ ನಗರದ ಹೃದಯ ಭಾಗದಲ್ಲಿರುವ ಈ ಜಾಗವನ್ನು ಸೂಕ್ತ ಪ್ರಾಧಿಕಾರದ ಮೂಲಕ ಸರಕಾರದ ವಶಕ್ಕೆ ತೆಗೆದುಕೊಳ್ಳುವುದು ಸೂಕ್ತ ಎಂದು ಪೊಲೀಸ್ ಆಯುಕ್ತ ಶಂಕರ ಬಿದರಿ ಮಾಧ್ಯಮಗಳಿಗೆ ವಿವರಿಸಿದ್ದಾರೆ.
Comments
Story first published: Thursday, September 2, 2010, 10:17 [IST]