ಪೆಟ್ರೋಲ್ ಬೆಲೆ 70 ಪೈಸೆ ಏರಿಕೆ ಸಂಭವ

ಲಖ್ನೋದಲ್ಲಿ ಇಂದು ಬೆಲೆ ಏರಿಕೆಗೆ ಪ್ರತಿಕ್ರಿಯಿಸಿದ ಕೇಂದ್ರ ಪೆಟ್ರೋಲಿಯಂ ಖಾತೆ ರಾಜ್ಯಸಚಿವ ಜಿತಿನ್ ಪ್ರಸಾದ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ದಬೆಲೆ ಏರಿಕೆ ಕಂಡರೆ ಇಲ್ಲಿನ ಕಂಪೆನಿಗಳು ಸಹಜವಾಗಿ ಬೆಲೆ ಏರಿಕೆ ಮಾಡಲಿವೆ. ಆದರೆ ಖಾಸಗಿ ಕಂಪೆನಿಗಳು ಮಾರುಕಟ್ಟೆಯಲ್ಲಿ ಏಕಸ್ವಾಮ್ಯತೆ ಸ್ಥಾಪಿಸಲು ಸರ್ಕಾರ ಬಿಡುವುದಿಲ್ಲ ಎಂದರು.
ತೈಲ ಬೆಲೆ ನಿಯಂತ್ರಣ ರದ್ಧತಿಯ ನಂತರ ಪ್ರತೀ ಲೀಟರ್ ಪೆಟರೋಲಿಗೆ ರೂ 3.50 ದರ ಹೆಚ್ಚಳ ಆಗಿದ್ದು ಅಂತಾರಾಷ್ಟ್ರೀಯ ದರಗಳಿಗನುಗುಣವಾಗಿ ಬೆಲೆ ಏರಿಕೆ ಮಾಡಲು ಕಂಪೆನಿಗಳಿಗೆ ಸ್ವತಂತ್ರ ನೀಡಲಾಗಿದೆ. ಕಂಪೆನಿಗಳು ದರ ಪರಿಷ್ಕರಣೆ ಮಾಡಲು ಪಾರದರ್ಶಕ ಹಾಗೂ ಮಾರುಕಟ್ಟೆ ಆಧಾರಿತ ವ್ಯವಸ್ಥೆಯನ್ನು ಅಳವಡಿಸಿಕೊಂಡಿವೆ.
ಸರ್ಕಾರಿ ಸ್ವಾಮ್ಯದ ಕಂಪೆನಿಗಳು ಅಂತಾರಾಷ್ಟ್ರೀಯ ತೈಲ ಬೆಲೆಗಳ 15 ದಿನಗಳ ಸರಾಸರಿಯನ್ನು ಗಣನೆಗೆ ತೆಗೆದುಕೊಂಡರೆ ಪೆಟ್ರೋಲ್ ಬೆಲೆ ಲೀಟರಿಗೆ 50 ಪೈಸೆ ಹಾಗೂ 30 ದಿನಗಳ ಸರಾಸರಿಯನ್ನು ಗಣನೆಗೆ ತೆಗೆದುಕೊಂಡರೆ 70 ಪೈಸೆ ದರ ಏರಿಕೆ ಮಾಡಬೇಕಾಗುತ್ತದೆ.
ಈಗಿನ ಲೋಕಸಭಾ ಅಧಿವೇಶನ ಆಗಸ್ಟ್ 31ಕ್ಕೆ ಮುಗಿಯಲಿದ್ದು ನಂತರ ಕಂಪೆನಿಗಳು ದರ ಏರಿಕೆ ಮಾಡಲಿವೆ. ಶೇ.90 ರಷ್ಟು ದೇಶದ ತೈಲ ಚಿಲ್ಲರೆ ಮಾರಾಟವನ್ನು ಸರ್ಕಾರೀ ಕಂಪೆನಿಗಳಾದ ಭಾರತ್ ಪೆಟ್ರೋಲಿಯಂ, ಹಿಂದುಸ್ತಾನ್ ಪೆಟ್ರೋಲಿಯಂ ಹಾಗೂ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಗಳು ನಿಯಂತ್ರಿಸುತ್ತಿದ್ದು, ದರ ಏರಿಕೆಯಿಂದ ಖಾಸಗಿ ಕಂಪೆನಿಗಳಾದ ಎಸ್ಸಾರ್, ರಿಲಯನ್ಸ್ ಮತ್ತು ಶೆಲ್ ನ ವ್ಯಾಪಾರಕ್ಕೂ ತೊಂದರೆಯಾಗಲಿದೆ.
ಸರ್ಕಾರ ಡೀಸೆಲ್ ಮೇಲಿನ ಬೆಲೆ ನಿಯಂತ್ರಣವನ್ನು ತೆಗೆದು ಹಾಕುವಂತೆಯೂ ಕಂಪೆನಿಗಳು ಒತ್ತಾಯಿಸುತ್ತಿವೆ. ದೇಶದ ತೈಲ ಮಾರಾಟದಲ್ಲಿ ಡೀಸೆಲ್ ನ ಪಾಲು ಶೇ 40.3 ರಷ್ಟಿದೆ. ಪ್ರತೀ ಲೀಟರ್ ಡೀಸೆಲ್ ಮಾರಾಟದಿಂದ ಸರ್ಕಾರಿ ಕಂಪೆನಿಗಳು ಲೀಟರ್ ಡೀಸೆಲ್ ಗೆ ರೂ 2.50 ರಷ್ಟು ನಷ್ಟ ಅನುಭವಿಸುತ್ತಿವೆ.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications