ಈ ಸರ್ಕಾರಿ ಶಾಲೆ ಬಾಡಿಗೆ ವರ್ಷಕ್ಕೆ ರು.675

ಈ ಶಾಲೆ ಹೇಗಿದೆ ಎಂದರೆ ವಾಸ ಮಾಡಲು ಕೂಡ ಯೋಗ್ಯವಾಗಿಲ್ಲದೆ, ದನದ ದೊಡ್ಡಿಯಂತಿದ್ದು, ಮೂಲ ಸೌಲಭ್ಯಗಳಿಂದ ವಂಚಿತವಾಗಿದೆ ಅಷ್ಟೇ ಅಲ್ಲ ಇವತ್ತೋ ನಾಳೆಯೋ ಬೀಳುವಂತಹ ಹಳೆಯ ನಾಡ ಹೆಂಚಿನ ಮನೆ ಇದಾಗಿದೆ. ಆದರೆ ದುರಂತವೆಂದರೆ ಈ ಕಟ್ಟಡ ಸ್ವಂತದಾಗಿರದೆ ಬಾಡಿಗೆಯದ್ದಾಗಿದೆ.
ಶಿಥಿಲಾವಸ್ಥೆಯಲ್ಲಿರುವ ಶಾಲೆ ನಗರದ ಮಧ್ಯೆ ಇದ್ದರೂ ಶಿಕ್ಷಣ ಇಲಾಖೆ ಅಧಿಕಾರಿಗಳಾಗಲೀ, ಜನಪ್ರತಿನಿಧಿಗಳಾಲೀ ಇದರತ್ತ ಗಮನಹರಿಸದಿರುವುದು ಶಿಕ್ಷಣದ ವ್ಯವಸ್ಥೆ ಎತ್ತ ಸಾಗುತ್ತಿದೆ ಎಂಬುವುದನ್ನು ತೋರಿಸುತ್ತಿದೆ. ಹಾಗೆನೋಡಿದರೆ ಈ ಶಾಲೆಗೂ ಶತಮಾನಗಳ ಇತಿಹಾಸವಿದೆ.
ಸ್ವಂತ ಸೂರಿಲ್ಲದ ಶಾಲೆ: ಮಾರು125 ವರ್ಷಗಳ ಹಿಂದೆ ಬಣಜಿಗರ ಸಮುದಾಯಕ್ಕೆ ಸೇರಿದ ಮನೆಯನ್ನು ಬಾಡಿಗೆಗೆ ಪಡೆದು ಶಾಲೆ ಆರಂಭಿಸಲಾಗಿದ್ದು ಅಲ್ಲಿಂದ ಇಲ್ಲಿತನಕವೂ ಹೇಗಿದೆಯೋ ಹಾಗೆಯೇ ಇದೆ. ಪ್ರಸ್ತುತ ವರ್ಷಕ್ಕೆ ಕಟ್ಟಡದ ಬಾಡಿಗೆ 675 ರೂಪಾಯಿಯನ್ನು ಪಾವತಿಸಲಾಗುತ್ತಿದೆ ಎನ್ನಲಾಗಿದೆ.
ಈ ಶಾಲೆಯಲ್ಲಿ 1 ರಿಂದ 7 ರವರೆಗೆ ತರಗತಿಗಳು ನಡೆಯುತ್ತಿದ್ದು, ಸುಮಾರು 80ಮಕ್ಕಳು ಓದುತ್ತಿದ್ದಾರೆ. ಒಂದನೇ ತರಗತಿಯಲ್ಲಿ 4, ಎರಡು ಮತ್ತು ಮೂರರಲ್ಲಿ ತಲಾ 5, ನಾಲ್ಕರಲ್ಲಿ 10, ಐದರಲ್ಲಿ 8, ಆರರಲ್ಲಿ 18, ಏಳರಲ್ಲಿ 30 ಮಕ್ಕಳು ಇದ್ದಾರೆ. ಕೊಠಡಿಗಳ ಕೊರತೆಯಿಂದಾಗಿ 1, 2 ಮತ್ತು 3ನೇ ತರಗತಿ ವಿದ್ಯಾರ್ಥಿಗಳನ್ನು ಒಂದು ಕೊಠಡಿಯಲ್ಲಿ, 4, 5 ಮತ್ತು 6ನೇ ತರಗತಿ ವಿದ್ಯಾರ್ಥಿಗಳನ್ನು ಮತ್ತೊಂದು ಕೊಠಡಿಯಲ್ಲಿ ಕೂರಿಸಿ ಪಾಠ ಹೇಳಿಕೊಡಲಾಗುತ್ತಿದೆ. ಆದರೆ 7ನೇ ತರಗತಿ ವಿದ್ಯಾರ್ಥಿಗಳಿಗೆ ಮಾತ್ರ ಪ್ರತ್ಯೇಕ ಕೊಠಡಿಯಲ್ಲಿ ಪಾಠ ಮಾಡಲಾಗುತ್ತಿದೆ.
ಇಲ್ಲಿ ಪಾಠ ಕಲಿಯುವ ವಿದ್ಯಾರ್ಥಿಗಳು ಬೆಂಚು ಡೆಸ್ಕ್ ಮುಂತಾದ ಪೀಠೋಪಕರಣಗಳ ಮುಖವನ್ನೇ ನೋಡಿಲ್ಲ. ಕಿತ್ತು ಹೋದ ನೆಲದಲ್ಲಿಯೇ ಕುಳಿತು ಪಾಠ ಕೇಳುತ್ತಾರೆ, ಬಗ್ಗಿ ಕುಳಿತು ಬರೆಯುತ್ತಾರೆ.
ಊಟವುಂಟು, ಆಟವಿಲ್ಲ: ಪ್ರತ್ಯೇಕ ಅಡುಗೆ ಕೊಠಡಿ ಇಲ್ಲದಿದ್ದರೂ ಹೇಗೋ ಇದ್ದುದರಲ್ಲಿಯೇ ಬಿಸಿಯೂಟ ನಡೆಯುತ್ತಿದೆ. ಆದರೆ ಊಟ ಮಾಡಲು ಮಕ್ಕಳ ಪರದಾಡುವ ರೀತಿ ಮಾತ್ರ ಭಯಂಕರವಾಗಿದೆ. ಶೌಚಾಲಯ, ಆಟದ ಮೈದಾನ ಈ ಶಾಲೆ ವಿದ್ಯಾರ್ಥಿ ಗಳಿಗೆ ಗಗನಕುಸುಮವಾಗಿದೆ.
ಶಾಲೆಯಲ್ಲಿ ಮುಖ್ಯ ಶಿಕ್ಷಕ ಹಾಗೂ ಮೂವರು ಸಹಶಿಕ್ಷಕರನ್ನೊಳಗೊಂಡ ಶಿಕ್ಷಕ ವೃಂದವಿದೆ ಆದರೆ ಮೂಲ ಸೌಲಭ್ಯವೇ ಇಲ್ಲಿ ಇಲ್ಲದ ಮೇಲೆ ಅವರು ತಾನೆ ಏನು ಮಾಡಿಯಾರು? ಇರುವುದರಲ್ಲಿ ಮಕ್ಕಳಿಗೆ ಕಲಿಸಿಕೊಡುತ್ತಿದ್ದಾರೆ. ತಮ್ಮ ಶಾಲೆ ಮಕ್ಕಳು ಯಾವುದರಲ್ಲಿಯೂ ಕಡಿಮೆಯಾಗಬಾರದೆಂದು ಯೋಗ, ಧ್ಯಾನ, ಸಂಸ್ಕೃತ ಪಾಠ ಕಲಿಸುವ ಪ್ರಯತ್ನವನ್ನು ಕೂಡ ಮಾಡುತ್ತಿದ್ದಾರೆ. ಶಾಲೆ ಹಿಂದುಳಿದಿರಬಹುದು ಆದರೆ ವಿದ್ಯಾರ್ಥಿಗಳು ಕಲಿಕೆಯಲ್ಲಿ ಹಿಂದೆ ಬೀಳದೆ ಕಲಿಯುತ್ತಿದ್ದಾರೆ.
ಕ್ಯಾರೇ ಎನ್ನದ ಇಲಾಖೆ: ಶಾಲೆಗೊಂದು ಸ್ವಂತ ಕಟ್ಟಡ ಕಟ್ಟಿ ಕೊಡಿ, ಎಲ್ಲಾ ಶಾಲೆಗಳಿಗಿರುವಂತೆ ಇಲ್ಲಿಯೂ ಮೈದಾನ, ಶೌಚಾಲಯ ನಿರ್ಮಿಸಿ ಎಂಬ ಮನವಿಯನ್ನು ಹಿಡಿದು ಜಿಲ್ಲಾ ಉಸ್ತು ವಾರಿ ಸಚಿವರು. ಸ್ಥಳೀಯ ಸಂಸದರು, ಶಾಸಕರು, ಜಿಲ್ಲಾಧಿಕಾರಿ, ನಗರಸಭೆ ಪೌರಾಯುಕ್ತರು ಹೀಗೆ ಎಲ್ಲರಿಗೂ ಮನವಿ ನೀಡಿದ್ದಾರೆ. ನೀಡುತ್ತಲೇ ಇದ್ದಾರೆ ಇಲ್ಲಿನ ಮುಖ್ಯ ಶಿಕ್ಷಕರಾದ ರಂಗಸ್ವಾಮಿ.
ಆದರೆ ಯಾರೂ ಕೂಡ ಕ್ಯಾರೇ ಎನ್ನದಿರುವುದು ನಾಚಿಕೆಗೇಡಿನ ಸಂಗತಿ. ಶಿಕ್ಷಣ ಕ್ಷೇತ್ರಕ್ಕೆ ಕೋಟ್ಯಾಂತರ ಅನುದಾನ ನೀಡಿದ್ದೇವೆ. ಸರ್ಕಾರಿ ಶಾಲೆಗಳೆಲ್ಲಾ ಉದ್ದಾರ ಆಗಿ ಹೋಗಿವೆ ಎಂದು ಭೋಂಗು ಬಿಡುವ ಶಿಕ್ಷಣ ಸಚಿವರು ಈ ಶಾಲೆಗೆ ಒಮ್ಮೆ ಭೇಟಿ ನೀಡಿದರೆ ಸಾಕು ನಿಮ್ಮ ಸಾಧನೆಯ ಅನಾವರಣವಾಗುತ್ತದೆ.
-
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Summer Drinks: ಬಿಸಿಲಿನಲ್ಲಿ ದೇಹಕ್ಕೆ ಬೆಸ್ಟ್ ಡ್ರಿಂಕ್ ಯಾವುದು? ಎಳನೀರು ಅಥವಾ ಮಜ್ಜಿಗೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ












Click it and Unblock the Notifications