Get Updates
Get notified of breaking news, exclusive insights, and must-see stories!

ಅನೈತಿಕ ಸಂಬಂಧ : ಆಂಧ್ರದಲ್ಲೊಂದು ಮರ್ಯಾದಾ ಹತ್ಯೆ

Andhra Pradesh map
ಹೈದರಾಬಾದ್, ಆ. 3 : ಉತ್ತರ ಭಾರತಕ್ಕೆ ಸಿಮೀತವಾಗಿದ್ದ ಮರ್ಯಾದಾ ಹತ್ಯೆ ಪ್ರಕರಣಗಳು ದಕ್ಷಿಣ ಭಾರತದಲ್ಲೂ ವರದಿಯಾಗತೊಡಗಿವೆ. ಅನೈತಿಕ ಸಂಬಂಧ ಹೊಂದಿದ್ದ ಮಹಿಳೆಯೊಬ್ಬಳನ್ನು ಆಕೆಯ ತಂದೆ ಮತ್ತು ಸಹೋದರರು ಮರ್ಯಾದಾ ಹತ್ಯೆ ಮಾಡಿರುವ ಕ್ರೋರ ಘಟನೆ ನಗರದ ಎಸ್ಆರ್ ನಗರದಲ್ಲಿ ಸೋಮವಾರ ಮಧ್ಯಾಹ್ನ ನಡೆದಿದೆ.

ಭಾಗ್ಯಲಕ್ಷ್ಮಿ ಮೃತಪಟ್ಟ ದುರ್ದೈವಿ. 1998ರಲ್ಲಿ ಮದುವೆಯಾಗಿದ್ದ ಭಾಗ್ಯಲಕ್ಷ್ಮಿ ಕೌಟುಂಬಿಕ ಸಮಸ್ಯೆಯಿಂದಾಗಿ ಗಂಡನನ್ನು ಬಿಟ್ಟು ಬೇರೆಡೆ ವಾಸಿಸುತ್ತಿದ್ದಳು. ಹೇರ್ ಕಟಿಂಗ್ ಅಂಗಡಿ ಮಾಲೀಕನೊಬ್ಬನ ಜೊತೆಗೆ ಭಾಗ್ಯಲಕ್ಷ್ಮಿ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂಬ ಸಂಗತಿ ಬಯಲಾಗಿದೆ.

ಇದರಿಂದ ಕೋಪಗೊಂಡ ಆಕೆಯ ತಂದೆ ಸತ್ಯನಾರಾಯಣ , ಸಹೋದರರಾದ ವಿಜಯಕುಮಾರ ಮತ್ತು ರಾಜು ಭಾಗ್ಯಲಕ್ಷ್ಮಿಯನ್ನು ಹತ್ಯೆಗೈದಿದ್ದಾರೆ. ಹತ್ಯೆಗೈದ ನಂತರ ನೇರವಾಗಿ ಪೊಲೀಸ್ ಠಾಣೆಗೆ ತೆರಳಿದ ಆರೋಪಿಗಳು, ತಮ್ಮ ತಪ್ಪನ್ನು ಒಪ್ಪಿಕೊಂಡು ಶರಣಾಗಿದ್ದಾರೆ. ಕುಟುಂಬದ ಮರ್ಯಾದೆ ಉಳಿಸಲು ಹತ್ಯೆಗೆ ಮುಂದಾಗಬೇಕಾಯಿತು ಎಂದು ಪೊಲೀಸರೆದುರಿಗೆ ಹೇಳಿದ್ದಾರೆ. ಭಾಗ್ಯಲಕ್ಷ್ಮಿಗೆ ಎರಡು ಮಕ್ಕಳಿವೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+