ಬಂಗಾರದ ಚೆಂಡು ಯಾರ ಪಾಲಾಗಲಿದೆ?

ಜುಲೈ 11ರಂದು ನಡೆಯಲಿರುವ ವಿಶ್ವಕಪ್ ಫೈನಲ್ ಪಂದ್ಯವನ್ನು ಎದುರು ನೋಡುತ್ತಿರುವ ಫುಟ್ಬಾಲ್ ಪ್ರೇಮಿಗಳಲ್ಲಿ ಈ ಪ್ರಶ್ನೆಗಳು ಭಾರೀ ಕುತೂಹಲ ಕೆರಳಿಸಿವೆ. ಭಾರತೀಯ ಕಾಲಮಾನದ ಪ್ರಕಾರ ಜುಲೈ 11ರ ರಾತ್ರಿ 12 ಗಂಟೆಗೆ ನಡೆಯಲಿರುವ ನೆದರ್ಲ್ಯಾಂಡ್ ಮತ್ತು ಸ್ಪೇನ್ ನಡುವಿನ ಫೈನಲ್ ಕಾಳಗದ ನಂತರವಷ್ಟೇ ಈ ಕುತೂಹಲಕ್ಕೆ ತೆರೆ ಬೀಳಲಿದೆ.
ಕಣದಲ್ಲಿರುವ ಹತ್ತು ಆಟಗಾರರಲ್ಲಿ ಸಿಂಹಪಾಲು ಫೈನಲ್ ತಲುಪಿರುವ ಸ್ಪೇನ್ ತಂಡದ ಆಟಗಾರರು ಪಡೆದಿದ್ದಾರೆ. ಹತ್ತರಲ್ಲಿ ಮೂರು ಸ್ಥಾನಗಳು ಸ್ಪೇನ್ ಪಾಲಾಗಿದೆ. ಸ್ಪೇನ್ ಪರ ಡೆವಿಡ್ ವಿಲ್ಲಾ, ಆಂಡ್ರೆಸ್ ಇನೀಸ್ಟಾ ಮತ್ತು ಕ್ಸೇವಿ ನಾಮನಿರ್ದೇಶನಗೊಂಡಿದ್ದರೆ, ಫೈನಲ್ ತಲುಪಿರುವ ನೆದರ್ಲ್ಯಾಂಡಿನಿಂದ ವೆಸ್ಲಿ ಸ್ನೀಜರ್ ಮತ್ತು ಅರ್ಜೆನ್ ರಾಬೆನ್ ಗೋಲ್ಡನ್ ಬಾಲ್ ಮೇಲೆ ಕಣ್ಣಿಟ್ಟಿದ್ದಾರೆ.
ಮೂರನೇ ಸ್ಥಾನಕ್ಕಾಗಿ ಉರುಗ್ವೆ ಜೊತೆ ಸೆಣಸಲಿರುವ ಜರ್ಮನಿ ಪರ ಮೇಸಟ್ ಓಜಿಲ್ ಮತ್ತು ಬಸ್ಟಿಯಾನ್ ಹತ್ತರಲ್ಲಿ ಇಬ್ಬರಾಗಿದ್ದಾರೆ. ಇಬ್ಬರೂ ಮಿಡ್ ಫೀಲ್ಡರ್ ಗಳು ಆಕರ್ಷಕ ಆಟದಿಂದಾಗಿ ಎದುರಾಳಿಗಳಲ್ಲಿ ನಡುಕ ಹುಟ್ಟಿಸಿದ್ದರು. ಉರುಗ್ವೆಯ ಮುನ್ಪಡೆ ಆಟಗಾರ ಡೀಗೊ ಫೋರ್ಲಾನ್ ಕೂಣ ಕಣದಲ್ಲಿದ್ದಾರೆ. ಘಾನಾದ ಗ್ಯಾನ್ ಮತ್ತು ಅರ್ಜೆಂಟೀನಾದ ಮೆಸ್ಸಿ ಉಳಿದವರಿಗೆ ಸ್ಪರ್ಧೆ ನೀಡುವುದು ಖಚಿತ.
ಭಾನುವಾರ ರಾತ್ರಿ ನಡೆಯಲಿರುವ ಫೈನಲ್ ಪಂದ್ಯದ ನಂತರವಷ್ಟೇ ಗೋಲ್ಡನ್ ಬಾಲ್ ಯಾರ ಪಾಲಾಗಲಿದೆ ಎಂದು ತಿಳಿಯಲಿದೆ.
ಕಣದಲ್ಲಿರುವವರ ಪಟ್ಟಿ ಕೆಳಗಿನಂತಿದೆ
1. ಡೀಗೊ ಫೋರ್ಲಾನ್ - ಉರುಗ್ವೆ
2. ಗ್ಯಾನ್ - ಘಾನಾ
3. ಆಂಡ್ರೆಸ್ ಇನೀಸ್ಟಾ - ಸ್ಪೇನ್
4. ಲಿಯೋನೆಲ್ ಮೆಸ್ಸಿ - ಅರ್ಜೆಂಟೀನಾ
5. ಮೇಸಟ್ ಓಜಿಲ್ - ಜರ್ಮನಿ
6. ಅರ್ಜೆನ್ ರಾಬೆನ್ - ನೆದರ್ಲ್ಯಾಂಡ್ಸ್
7. ಬಸ್ಟಿಯಾನ್ - ಜರ್ಮನಿ
8. ವೆಸ್ಲಿ ಸ್ನೀಜರ್ - ನೆದರ್ಲ್ಯಾಂಡ್ಸ್
9. ಡೆವಿಡ್ ವಿಲ್ಲಾ - ಸ್ಪೇನ್
10. ಕ್ಸೇವಿ - ಸ್ಪೇನ್
ಬಂಗಾರದ ಚೆಂಡು ಅತ್ಯುತ್ತಮ ಆಟಗಾರನಿಗೆ ನೀಡಿದರೆ, ಬಂಗಾರದ ಬೂಟು ಅತಿ ಹೆಚ್ಚು ಗೋಲು ಹೊಡೆದ ಆಟಗಾರನ ಪಾಲಾಗಲಿದೆ.
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications