ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಭಾರತ್ ಬಂದ್ ಗೆ ಸಹಕರಿಸಿ : ಗಡ್ಕರಿ
ಭಾನುವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, 1998ರಿಂದ 2004ರವರಗೆ ಎನ್ ಡಿಎ ಮೈತ್ರಿಕೂಟ ಉತ್ತಮ ಆಡಳಿತವನ್ನು ನೀಡಿದೆ ಎಂದರು. ಕೇಂದ್ರ ಸರಕಾರದ ಜನವಿರೋಧಿ ನೀತಿಯ ವಿರುದ್ಧ ಜನಸಾಮಾನ್ಯರು ಬೇಸತ್ತು ಹೋಗಿದ್ದಾರೆ. ಯುಪಿಎ ಸರಕಾರದ ಜನವಿರೋಧಿ ಕ್ರಮಗಳನ್ನು ಖಂಡಿಸಿ ಬಿಜೆಪಿ ನೇತೃತ್ವದ ಎನ್ ಡಿಎ ಜುಲೈ 5ರಂದು ಭಾರತ್ ಬಂದ್ ಗೆ ಕರೆ ನೀಡಿದೆ. ಬಂದ್ ಗೆ ಎಲ್ಲರೂ ಸಹಕರಿಸಬೇಕು ಎಂದು ಅವರು ಮನವಿ ಮಾಡಿಕೊಂಡರು.
ಬಿಜೆಪಿ ಹಿರಿಯ ನಾಯಕರಾಗಿದ್ದ ಜಸ್ವಂತ್ ಸಿಂಗ್ ಮತ್ತೆ ಪಕ್ಷಕ್ಕೆ ಮರಳುತ್ತಿರುವುದು ಸಂತಸದ ಸಂಗತಿ. ಜಿನ್ನಾ ಪರವಾಗಿ ಅವರ ಬರೆದಿರುವ ಪುಸ್ತಕದ ವಿವಾದ ಮುಗಿದ ಅಧ್ಯಾಯ. ಇದೀಗ ಅದರ ಬಗ್ಗೆ ಚರ್ಚೆ ನಡೆಸಿದರೆ ಪ್ರಯೋಜನವಿಲ್ಲ ಎಂದು ಗಡ್ಕರಿ ವಿವರಿಸಿದರು. ಪಾಕಿಸ್ತಾನದ ಜನಕ ಮೊಹ್ಮದ್ ಅಲಿ ಜಿನ್ನಾ ಅವರನ್ನು ಪ್ರಶಂಸಿದ್ದರಿಂದ ಬಿಜೆಪಿ ಹೈಕಮಾಂಡ್ ಅವರನ್ನು ಪಕ್ಷದಿಂದ ಉಚ್ಚಾಟಿಸಿತ್ತು.
Comments
ಬಿಜೆಪಿ ನಿತಿನ್ ಗಡ್ಕರಿ ಭಾರತ್ ಬಂದ್ ಎನ್ ಡಿಎ ಯುಪಿಎ ಕಾಂಗ್ರೆಸ್ ತೈಲ ಬೆಲೆ bjp nitin gadkari bharat bandh nda upa congress fuel price
Story first published: Sunday, July 4, 2010, 15:04 [IST]