ಕಲ್ಕುರ್ಚಿಊರಿಗೆ ಬಂದಿದ್ದ ಕಾಳಿಂಗ ಸರ್ಪ

King Cobra captured in Shimoga
ಶಿವಮೊಗ್ಗ, ಜು.1: ಶೆಟ್ಟಿಹಳ್ಳಿ ಅಭಯಾರಣ್ಯ ವ್ಯಾಪ್ತಿಯಲ್ಲಿ ಹಣಗೆರೆ ವನ್ಯ ಜೀವಿ ವಲಯ ಸಿರಿಗೆರೆ ಈ ವ್ಯಾಪ್ತಿಯ ಕಲ್ಕುರ್ಚಿ ಊರಿನಲ್ಲಿ ಬೆಳ್ಳಂಬೆಳಗೆ ಕಾಳಿಂಗ ಸರ್ಪ[ಚಿತ್ರ ವೀಕ್ಷಿಸಿ] ಕಾಣಿಸಿಕೊಂಡು, ಗ್ರಾಮಸ್ಥರಿಗೆ ಆತಂಕ ಉಂಟು ಮಾಡಿತ್ತು.

ಆದರೆ, ಸರಿಯಾದ ಸಮಯಕ್ಕೆ ನೂರಾರು ಹಾವುಗಳ ಹಿಡಿದ ಸಾಧನೆ ಮಾಡಿರುವ ನಿಷ್ಣಾತ ಸ್ನೇಕ್ ಕಿರಣ್ ಅವರ ತಂಡ ಬಂದು ಹಾವು ಹಿಡಿದಿದ್ದಾರೆ.

ಕಲ್ಕುರ್ಚಿ ಊರಿನ ಕಮಲಮ್ಮರವರು ಎಂದಿನಂತೆ ಬೆಳಗ್ಗೆ ಒಲೆಯ ಗೂಡಿನ ಬಳಿ ಹೋದಾಗ , ಒಲೆಯಲ್ಲಿ ಬೆಚ್ಚಗೆ ಕೂತಿದ್ದ ಕಾಳಿಂಗ ಸರ್ಪ ಕಣ್ಣಿಗೆ ಬಿದ್ದಿದೆ. ಸುದ್ದಿಯನ್ನು ವಲಯದ ಅರಣ್ಯಾಧಿಕಾರಿಗಳಿಗೆ ತಕ್ಷಣ ತಿಳಿಸಿದ್ದಾರೆ.

ಅರಣ್ಯಸಿಬ್ಬಂದಿಗಳಾದ ಎಸ್.ವಿ. ಮಧುಕರ ವನಪಾಕ, ಎಂ.ಎಸ್. ಹುಲ್ಲತ್ತಿ ವನಪಾಲಕ, ಬಿ. ಹುಚ್ಚಪ್ಪ ಅರಣ್ಯ ವೀಕ್ಷಕರು, ಹಾಗು ತಂಡದವರ ಜೊತೆ ಸೇರಿ ಸ್ನೇಕ್ ಕಿರಣ ಅವರು 8 ಅಡಿ ಉದ್ದದ ಕಾಳಿಂಗ ಸರ್ಪವನ್ನು ಹಿಡಿದಿದ್ದಾರೆ. ವಲಯ ವ್ಯಾಪ್ತಿಯಲ್ಲೇ ಇರುವ ದಟ್ಟ ಅರಣ್ಯ ಪ್ರದೇಶವಾದ ಹಣಗೆರೆ ಬಳಿಯ ನಾಯಿ ಮುಟ್ಟಹಳ್ಳ ಬಳಿಯ ಗುಡ್ಡದಲ್ಲಿ ಬಿಟ್ಟು ಬಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+