ಕಲ್ಕುರ್ಚಿಊರಿಗೆ ಬಂದಿದ್ದ ಕಾಳಿಂಗ ಸರ್ಪ

ಆದರೆ, ಸರಿಯಾದ ಸಮಯಕ್ಕೆ ನೂರಾರು ಹಾವುಗಳ ಹಿಡಿದ ಸಾಧನೆ ಮಾಡಿರುವ ನಿಷ್ಣಾತ ಸ್ನೇಕ್ ಕಿರಣ್ ಅವರ ತಂಡ ಬಂದು ಹಾವು ಹಿಡಿದಿದ್ದಾರೆ.
ಕಲ್ಕುರ್ಚಿ ಊರಿನ ಕಮಲಮ್ಮರವರು ಎಂದಿನಂತೆ ಬೆಳಗ್ಗೆ ಒಲೆಯ ಗೂಡಿನ ಬಳಿ ಹೋದಾಗ , ಒಲೆಯಲ್ಲಿ ಬೆಚ್ಚಗೆ ಕೂತಿದ್ದ ಕಾಳಿಂಗ ಸರ್ಪ ಕಣ್ಣಿಗೆ ಬಿದ್ದಿದೆ. ಸುದ್ದಿಯನ್ನು ವಲಯದ ಅರಣ್ಯಾಧಿಕಾರಿಗಳಿಗೆ ತಕ್ಷಣ ತಿಳಿಸಿದ್ದಾರೆ.
ಅರಣ್ಯಸಿಬ್ಬಂದಿಗಳಾದ ಎಸ್.ವಿ. ಮಧುಕರ ವನಪಾಕ, ಎಂ.ಎಸ್. ಹುಲ್ಲತ್ತಿ ವನಪಾಲಕ, ಬಿ. ಹುಚ್ಚಪ್ಪ ಅರಣ್ಯ ವೀಕ್ಷಕರು, ಹಾಗು ತಂಡದವರ ಜೊತೆ ಸೇರಿ ಸ್ನೇಕ್ ಕಿರಣ ಅವರು 8 ಅಡಿ ಉದ್ದದ ಕಾಳಿಂಗ ಸರ್ಪವನ್ನು ಹಿಡಿದಿದ್ದಾರೆ. ವಲಯ ವ್ಯಾಪ್ತಿಯಲ್ಲೇ ಇರುವ ದಟ್ಟ ಅರಣ್ಯ ಪ್ರದೇಶವಾದ ಹಣಗೆರೆ ಬಳಿಯ ನಾಯಿ ಮುಟ್ಟಹಳ್ಳ ಬಳಿಯ ಗುಡ್ಡದಲ್ಲಿ ಬಿಟ್ಟು ಬಂದಿದ್ದಾರೆ.











Click it and Unblock the Notifications