ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕಲ್ಕುರ್ಚಿಊರಿಗೆ ಬಂದಿದ್ದ ಕಾಳಿಂಗ ಸರ್ಪ
ಆದರೆ, ಸರಿಯಾದ ಸಮಯಕ್ಕೆ ನೂರಾರು ಹಾವುಗಳ ಹಿಡಿದ ಸಾಧನೆ ಮಾಡಿರುವ ನಿಷ್ಣಾತ ಸ್ನೇಕ್ ಕಿರಣ್ ಅವರ ತಂಡ ಬಂದು ಹಾವು ಹಿಡಿದಿದ್ದಾರೆ.
ಕಲ್ಕುರ್ಚಿ ಊರಿನ ಕಮಲಮ್ಮರವರು ಎಂದಿನಂತೆ ಬೆಳಗ್ಗೆ ಒಲೆಯ ಗೂಡಿನ ಬಳಿ ಹೋದಾಗ , ಒಲೆಯಲ್ಲಿ ಬೆಚ್ಚಗೆ ಕೂತಿದ್ದ ಕಾಳಿಂಗ ಸರ್ಪ ಕಣ್ಣಿಗೆ ಬಿದ್ದಿದೆ. ಸುದ್ದಿಯನ್ನು ವಲಯದ ಅರಣ್ಯಾಧಿಕಾರಿಗಳಿಗೆ ತಕ್ಷಣ ತಿಳಿಸಿದ್ದಾರೆ.
ಅರಣ್ಯಸಿಬ್ಬಂದಿಗಳಾದ ಎಸ್.ವಿ. ಮಧುಕರ ವನಪಾಕ, ಎಂ.ಎಸ್. ಹುಲ್ಲತ್ತಿ ವನಪಾಲಕ, ಬಿ. ಹುಚ್ಚಪ್ಪ ಅರಣ್ಯ ವೀಕ್ಷಕರು, ಹಾಗು ತಂಡದವರ ಜೊತೆ ಸೇರಿ ಸ್ನೇಕ್ ಕಿರಣ ಅವರು 8 ಅಡಿ ಉದ್ದದ ಕಾಳಿಂಗ ಸರ್ಪವನ್ನು ಹಿಡಿದಿದ್ದಾರೆ. ವಲಯ ವ್ಯಾಪ್ತಿಯಲ್ಲೇ ಇರುವ ದಟ್ಟ ಅರಣ್ಯ ಪ್ರದೇಶವಾದ ಹಣಗೆರೆ ಬಳಿಯ ನಾಯಿ ಮುಟ್ಟಹಳ್ಳ ಬಳಿಯ ಗುಡ್ಡದಲ್ಲಿ ಬಿಟ್ಟು ಬಂದಿದ್ದಾರೆ.
Comments
ಕಾಳಿಂಗ ಸರ್ಪ ಶಿವಮೊಗ್ಗ ಹಾವು ಅರಣ್ಯ ಜಿಲ್ಲಾಸುದ್ದಿ ಸೋಮನಾಥ್ ನಾಗರಿಕ ಪತ್ರಕರ್ತ king cobra snake forest district news somanath
Story first published: Thursday, July 1, 2010, 18:57 [IST]