ಡಿಕೆಶಿ ವಿರುದ್ಧ ಇಸ್ಕಾನ್ ಮಾನನಷ್ಟ ಮೊಕದ್ದಮೆ
ಬೆಂಗಳೂರು,
ಜೂ.9: ಕೆಪಿಸಿಸಿ ಕಾರ್ಯಾಧ್ಯಕ್ಷ ಡಿಕೆ ಶಿವಕುಮಾರ್ ವಿರುದ್ಧ ಬೆಂಗಳೂರಿನ ಇಸ್ಕಾನ್ ಸಂಸ್ಥೆ ಮಾನನಷ್ಟ ಮೊಕದ್ದಮೆ ಹೂಡಿದೆ. ಇಸ್ಕಾನ್ ಸಂಸ್ಥೆ ವಿದೇಶಗಳಲ್ಲಿ ಕೋಟ್ಯಂತರ ರುಪಾಯಿ ವಂತಿಕೆ ವಸೂಲಿ ಮಾಡುತ್ತಿದೆ ಎಂದು ಡಿಕೆ ಶಿವಕುಮಾರ್ ಅವರು ವಿಧಾನಸಭೆಯಲ್ಲಿ ಆರೋಪಿಸಿದ್ದರು. id="toptextpromo">ನಗರ
ಸಿಟಿ ಸಿವಿಲ್ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿರುವ ಇಸ್ಕಾನ್, ಡಿಕೆಶಿಯಿಂದ 1.8 ಕೋಟಿ ರು ಪರಿಹಾರ ಮೊತ್ತವನ್ನು ಕೇಳಿದೆ. ಕಳೆದ ಜುಲೈನಲ್ಲಿ ಡಿಕೆ ಶಿವಕುಮಾರ್ ಅವರು ಇಸ್ಕಾನ್ ನ ಮೇಲೆ ಆರೋಪ ಮಾಡಿ, ಅಕ್ಷಯ ಪಾತ್ರೆ ಹಾಗೂ ಬಿಸಿಯೂಟ ಯೋಜನೆಗಳಲ್ಲಿ ಅವ್ಯವಹಾರ ನಡೆದಿದೆ ಕೂಡಲೇ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದರು. id='are-slot-1' class='oiad oi-axt oiadv'> id='top-searched-articles'>ಅಕ್ಷಯ
ಪಾತ್ರೆ ಯೋಜನೆಯ ಲಾಭ ಪಡೆದು, ಸ್ಥಳೀಯ ಬಡಮಕ್ಕಳ ಚಿತ್ರಗಳನ್ನು ಸೆರೆಹಿಡಿದು, ವಿದೇಶಗಳಲ್ಲಿ ರಾಜ್ಯದ ಘನತೆ, ಗೌರವವನ್ನು ಇಸ್ಕಾನ್ ಸಂಸ್ಥೆ ಹರಾಜು ಹಾಕಿ. ಕೋಟ್ಯಂತರ ಹಣ ಗಳಿಸುತ್ತಿದೆ ಎಂದು ಡಿಕೆ ಶಿವಕುಮಾರ್ ಹೇಳಿದ್ದರು.











Click it and Unblock the Notifications