ಡಿಕೆಶಿ ವಿರುದ್ಧ ಇಸ್ಕಾನ್ ಮಾನನಷ್ಟ ಮೊಕದ್ದಮೆ

ನಗರ ಸಿಟಿ ಸಿವಿಲ್ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿರುವ ಇಸ್ಕಾನ್, ಡಿಕೆಶಿಯಿಂದ 1.8 ಕೋಟಿ ರು ಪರಿಹಾರ ಮೊತ್ತವನ್ನು ಕೇಳಿದೆ. ಕಳೆದ ಜುಲೈನಲ್ಲಿ ಡಿಕೆ ಶಿವಕುಮಾರ್ ಅವರು ಇಸ್ಕಾನ್ ನ ಮೇಲೆ ಆರೋಪ ಮಾಡಿ, ಅಕ್ಷಯ ಪಾತ್ರೆ ಹಾಗೂ ಬಿಸಿಯೂಟ ಯೋಜನೆಗಳಲ್ಲಿ ಅವ್ಯವಹಾರ ನಡೆದಿದೆ ಕೂಡಲೇ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದರು.
ಅಕ್ಷಯ ಪಾತ್ರೆ ಯೋಜನೆಯ ಲಾಭ ಪಡೆದು, ಸ್ಥಳೀಯ ಬಡಮಕ್ಕಳ ಚಿತ್ರಗಳನ್ನು ಸೆರೆಹಿಡಿದು, ವಿದೇಶಗಳಲ್ಲಿ ರಾಜ್ಯದ ಘನತೆ, ಗೌರವವನ್ನು ಇಸ್ಕಾನ್ ಸಂಸ್ಥೆ ಹರಾಜು ಹಾಕಿ. ಕೋಟ್ಯಂತರ ಹಣ ಗಳಿಸುತ್ತಿದೆ ಎಂದು ಡಿಕೆ ಶಿವಕುಮಾರ್ ಹೇಳಿದ್ದರು.












Click it and Unblock the Notifications