ನಕ್ಸಲರ ವಾರ್ಷಿಕ ಸುಲಿಗೆ 2 ಸಾವಿರ ಕೋಟಿ ರು!

ಚತ್ತೀಸ್ ಘಡ ಮುಖ್ಯಮಂತ್ರಿ ರಮಣ್ ಸಿಂಗ್ ಇತ್ತೀಚೆಗೆ ನೀಡಿದ ಹೇಳಿಕೆ ಪ್ರಕಾರ ನಕ್ಸಲರ ವಾರ್ಷಿಕ ಆದಾಯ 1000ದಿಂದ 1200 ಕೋಟಿ ರು. ಆದರೆ ಚತ್ತೀಸ್ ಘಡ ಪೊಲೀಸ್ ಪ್ರಧಾನ ನಿರ್ದೇಶಕರ ಪ್ರಕಾರ ಆದಾಯ ವಾರ್ಷಿಕ 2000 ಕೋಟಿ ರುಪಾಯಿಗಳಿಗೂ ಅಧಿಕ.
ಇತ್ತೀಚೆಗೆ ಬಂದಿತರಾದ ನಕ್ಸಲ್ ಮುಖಂಡರ ಹೇಳಿಕೆ ಆಧರಿಸಿ ಈ ಅಂದಾಜು ಮಾಡಲಾಗಿದೆ. ಜಾರ್ಖಂಡ್ ನಕ್ಸಲರಿಗೆ ಅತೀ ಹೆಚ್ಚು ಆದಾಯ ನೀಡಲಾಗುತ್ತಿದ್ದು ಚತ್ತೀಸ್ ಘಡದಿಂದ 150 ಕೋಟಿ ರುಪಾಯಿ ಆದಾಯವಿದೆ. ಜಾರ್ಖಂಡ್ ನಲ್ಲಿ ನಡೆಯುತ್ತಿರುವ ಪರವಾನಗಿ ಹಾಗೂ ಅಕ್ರಮ ಗಣಿಗಾರಿಕೆಯಿಂದ ನಕ್ಸಲರ ಆದಾಯ ಹೆಚ್ಚಳವಾಗಿದೆ.
ನೆರೆಯ ಓರಿಸ್ಸಾ ಮತ್ತು ಬಿಹಾರ ಕೂಡ ನಕ್ಸಲರಿಗೆ ಉತ್ತಮ ಆದಾಯ ನೀಡುತಿದ್ದು ಇಲ್ಲಿನ ಅರಣ್ಯ ಉತ್ಪನ್ನ ಗುತ್ತಿಗೆ, ಗಣಿ ಕಂಪನಿಗಳು, ರಸ್ತೆ ಗುತ್ತಿಗೆದಾರರು, ಸಾರಿಗೆ ಗುತ್ತಿಗೆದಾರರು, ದೊಡ್ಡ ಮತ್ತು ಸಣ್ಣ ಕೈಗಾರಿಕೆಗಳು ಇವರ ಆದಾಯದ ಮೂಲ ಆಗಿವೆ. ಜನರಿಂದ ವೈಯಕ್ತಿಕವಾಗಿ ನಡೆಸುವ ಸುಲಿಗೆ ಮೊತ್ತ ಅತ್ಯಲ್ಪವಾಗಿದ್ದು ಸುಲಿಗೆಯ ದೊಡ್ಡ ಪಾಲನ್ನು ನಕ್ಸಲರು ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್ ನಿಂದ ಅಕ್ರಮ ಶಸ್ತಾಸ್ತ್ರ ಖರೀದಿಸಲು ಬಳಸುತ್ತಿದ್ದಾರೆ.
ಕಳೆದ ಸೆಪ್ಟೆಂಬರ್ 2007ರಲ್ಲಿ ಬಂಧಿಸಲಾದ ಸಿಪಿಐ ಮಾವೊವಾದಿ ಪಾಲಿಟ್ ಬ್ಯೂರೋ ಸದಸ್ಯ ಮಿಸಿರ್ ಬೆಸ್ರಾ ನೀಡಿದ ತಪ್ಪೊಪ್ಪಿಗೆಯಲ್ಲಿ ಸುಲಿಗೆ ಮಾಡಲಾದ 60 ಕೋಟಿ ರು.ಗಳಲ್ಲಿ 42 ಕೋಟಿ ರು.ಗಳನ್ನು ಶಸ್ತ್ರಾಸ್ರ್ತಮತ್ತು ಸ್ಪೋಟಕ ಖರೀದಿಸಲು, 2 ಕೋಟಿ ರು.ಗಳನ್ನು ಗುಪ್ತಚರ ಮಾಹಿತಿ ಪಡೆಯಲು ಮತ್ತು ಉಳಿದ 16 ಕೋಟಿ ರು.ಗಳನ್ನು ಸಾರಿಗೆ, ಕಂಪ್ಯೂಟರ್ ತರಬೇತಿ, ಪ್ರಚಾರ ಪಡೆಯಲು ವೆಚ್ಚ ಮಾಡಲಾಗಿದೆ.
ಹಿರಿಯ ಪೀಲೀಸ್ ಅಧಿಕಾರಿಗಳ ಪ್ರಕಾರ ಸುಲಿಗೆ ಮಾಡಲಾದ ಹಣದಲ್ಲಿ ನಕ್ಸಲ್ ಮುಖಂಡರು ಐಷಾರಾಮಿ ಜೀವನ ನಡೆಸುತಿದ್ದು ತಮ್ಮ ಮಕ್ಕಳನ್ನು ಮೆಟ್ರೋ ನಗರಗಳಲ್ಲಿ ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಶಿಕ್ಷಣ ಕೊಡಿಸುತಿದ್ದಾರೆ.
-
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
B Khata: ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಸವಾಲುಗಳು: ವೆಚ್ಚ, ಪ್ರಕ್ರಿಯೆ ಸ್ವಂತ ವಿವರ ಹಂಚಿಕೊಂಡ ಆಸ್ತಿದಾರ ಶ್ರೀನಿವಾಸ ಮಠ -
Rain in Karnataka: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಕರ್ನಾಟಕದ ಈ ಜಿಲ್ಲೆಗಳಲ್ಲಿ ನಾಲ್ಕು ದಿನ ಮಳೆ: ಐಎಂಡಿ ರಿಪೋರ್ಟ್ -
ವಿಶ್ವಕಪ್ ಕಿರೀಟದ ಹಿಂದೆ ದೈವಬಲ: ಕರಾವಳಿಯ ಅಳಿಯ ಸೂರ್ಯಕುಮಾರ್ ಯಾದವ್ ನಡೆಗೆ ಮೆಚ್ಚುಗೆಗಳ ಸುರಿಮಳೆ -
New Airport: 3 ಜಿಲ್ಲೆ ಜನರ ಅನುಕೂಲಕ್ಕಾಗಿ ಸರ್ಕಾರದ ಮಾಸ್ಟರ್ ಪ್ಲ್ಯಾನ್: ಬಳ್ಳಾರಿ ಬಳಿ ಹೊಸ ಏರ್ಪೋರ್ಟ್ -
KSRTC: ಸಾರಿಗೆ ಲೋಕಕ್ಕೆ 'ಪಲ್ಲಕ್ಕಿ' ಮೆರುಗು: ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ 115 ಹೊಸ ಬಸ್ಗಳ ಲೋಕಾರ್ಪಣೆ -
ಬೆಂಗಳೂರಲ್ಲಿ ಗ್ಯಾಸ್ ಏಜೆನ್ಸಿಗಳ ಭರ್ಜರಿ ದಂಧೆ: ಸಿಲಿಂಡರ್ ಸಿಗದೇ ಗ್ರಾಹಕರು ಕಂಗಾಲು; ಕಾಳಸಂತೆಯಲ್ಲಿ ₹3,000ಕ್ಕೆ ಮಾರಾಟ -
LPG Gas: ಎಲ್ಪಿಜಿ ನಿಯಮಗಳಲ್ಲಿ ಭಾರೀ ಬದಲಾವಣೆ; ಗ್ರಾಹಕರು ದೂರು ನೀಡಲು ಸಹಾಯವಾಣಿ ಸಂಖ್ಯೆಗಳ ಬಿಡುಗಡೆ -
Gold Rate March 13: ಸತತ 3ನೇ ದಿನವೂ ಚಿನ್ನ - ಬೆಳ್ಳಿ ಬೆಲೆ ಭರ್ಜರಿ ಕುಸಿತ, ಎಷ್ಟಾಗಿದೆ ಇಂದಿನ ಬಂಗಾರದ ಬೆಲೆ -
Resort: ಕರ್ನಾಟಕದಲ್ಲಿ ಶುರುವಾಯ್ತು ರೆಸಾರ್ಟ್ ರಾಜಕೀಯ: ‘ಅವರು ನಮ್ಮ ಅತಿಥಿಗಳು’ ಎಂದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ -
Horoscope March 13: ಈ ರಾಶಿಯವರ ಬದುಕಲ್ಲಿ ಸಕಾರಾತ್ಮಕ ಬೆಳವಣಿಗೆ, ಅಧಿಕ ಲಾಭ; ದಿನ ಭವಿಷ್ಯ












Click it and Unblock the Notifications