ಗುರುವಿಗೆ ಶಬರಿಯಂತೆ ಕಾದಿರುವ ನಿತ್ಯಾನಂದ ಭಕ್ತರು
ರಾಮನಗರ, ಜೂ. 7 : ನಿತ್ಯಾನಂದ ಜೈಲುವಾಸಿ 6 ವಾರ ಕಳೆದರೂ ಪಲ್ಲಂಗ ಪ್ರವೀಣನಿಗೆ ಜಾಮೀನು ಸಿಗದೇ ಜೈಲಿನ ಕಂಬಿಗಳ ಹಿಂದೆಯೇ ಕಾಲಕಳೆಯುತ್ತಿದ್ದಾನೆ. ನಿತ್ಯಾನಂದನ ಜಾಮೀನಿಗಾಗಿ ಈಗಾಗಲೇ ಇಬ್ಬರು ವಕೀಲರು ಬದಲಾಗಿ ಮುಂಬೈನ ವಕೀಲ ವಿವೇಕಾನಂದಗುಪ್ತ ವಾದಗಳನ್ನ ಮಂಡಿಸುತ್ತಿದ್ದರೂ ಹೈಕೋರ್ಟ್ ಮಾತ್ರ ನಿತ್ಯಾನಂದನಿಗೆ ಬಿಡುಗಡೆ ಭಾಗ್ಯವನ್ನ ಕರುಣಿಸಿಲ್ಲ.
ಒಂದೆಡೆ ನಿತ್ಯಾನಂದ ಜೈಲಿನ ಹಕ್ಕಿಯಾಗಿದ್ದಾನೆ, ಇನ್ನೊಂದೆಡೆ ನಿತ್ಯಾನಂದನ ಭಕ್ತ ಸಮೂಹ ತನ್ನ ಗುರುದರ್ಶನವಿಲ್ಲದೇ ಬಿಡದಿಯ ಧ್ಯಾನಪೀಠದಲ್ಲೇ ಗುರುವಿಗಾಗಿ ಶಬರಿಯಂತೆ ಕಾಯುತ್ತಿದೆ. ಈ ನಡುವೆ ನಿನ್ನೆಯಿಂದ ನಿತ್ಯಾನಂದನ ಭಕ್ತರು ನಿತ್ಯಾನಂದನ ಬಿಡುಗಡೆಗಾಗಿ ಬಿಡದಿಯ ಧ್ಯಾನಪೀಠದ ಆನಂದೇಶ್ವರಸ್ವಾಮಿಯ ಎದುರು ನಿರಾಹಾರ ಭಜನೆ ಪ್ರಾರ್ಥನೆ ಮಾಡುತ್ತಾ ದೇವರ ಮೊರೆಹೋಗಿದ್ದಾರೆ.
ರಾಮನಗರ ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ವಜಾಗೊಂಡ ಹಿನ್ನೆಲೆಯಲ್ಲಿ ಹೈಕೋರ್ಟ್ನಲ್ಲಿ ಜಾಮೀನು ಅರ್ಜಿ ವಿಚಾರಣೆ ನಡೆಯುತ್ತಿದೆ. ಹೈಕೊರ್ಟ್ನಲ್ಲಿ ವಿಚಾರಣೆ ಆರಂಭವಾಗಿ ನಿತ್ಯಾನಂದನ ಪರವಾಗಿ ಮುಂಬೈ ವಕೀಲರ ದಂಡು ವಾದ ಮಾಡುತ್ತಿದ್ದರೂ ನಿತ್ಯಾನಂದನಿಗೆ ಜಾಮೀನು ಸಿಗಲಿಲ್ಲ. ಈ ನಡುವೆ ನಿತ್ಯಾನಂದನ ಭಕ್ತರು ಬಿಡದಿಯ ಧ್ಯಾನಪೀಠದಲ್ಲಿ ಆಹಾರಸೇವಿಸದೇ ನಿರಾಹಾರರಾಗಿ ನಿನ್ನೆಯಿಂದ ಎರಡು ದಿನಗಳ ಕಾಲ ಆನಂದೇಶ್ವರಸ್ವಾಮಿಯ ಎದುರು ಶ್ವೇತವಸ್ತ್ರದಾರಿಗಳಾಗಿ ಭಜನೆ ಮಾಡುತ್ತ ನಿತ್ಯಾನಂದನ ಬಿಡುಗಡೆಗೆ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.
ಧ್ಯಾನಪೀಠದಲ್ಲಿ ಯೋಗ ಧ್ಯಾನದ ಮೂಲಕ ಮತ್ತೆ ಹೊಸಚೈತನ್ಯ ಮೂಡಿಸಲಿ ಎಂಬ ಉದ್ದೇಶಕ್ಕಾಗಿ ಮಾಡುತ್ತಿದ್ದೇವೆಂದು ನಿರಾಹಾರ ಪ್ರಾರ್ಥನೆಯಲ್ಲಿ ತೊಡಗಿರುವ ನಿತ್ಯಾನಂದನ ಪರಮಭಕ್ತ ಸಂತೋಷಾನಂದ ಹೇಳಿದ್ದಾರೆ. ಮಹಿಳಾ ಭಕ್ತರು ಮತ್ತು ಪುರುಷ ಭಕ್ತರು ಬಿಡದಿಯ ಧ್ಯಾನಪೀಠದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಇಂದಿಗೂ ಇದ್ದಾರೆ. ನಿತ್ಯಾನಂದನ ಕಾಮಪುರಾಣ ಬೆತ್ತಲಾಗಿ ನಿತ್ಯಾನಂದ ಜೈಲುಹಕ್ಕಿಯಾಗಿದ್ದರೂ ನಿತ್ಯಾನಂದನ ಭಕ್ತರು ಮಾತ್ರ ಧ್ಯಾನಪೀಠವಾಸಿಗಳಾಗಿಯೇ ನಿತ್ಯಾನಂದನನ್ನ ನಿತ್ಯವೂ ಆರಾಧಿಸಿ ಪೂಜಿಸುತ್ತಿದ್ದಾರೆ.
ನಿತ್ಯಾನಂದ ಮತ್ತೆ ಧ್ಯಾನಪೀಠಕ್ಕೆ ಮರಳಿ ಧ್ಯಾನ ಯೋಗದ ಮೂಲಕ ಸಮಾಜಸೇವೆ ಮುಂದುವರೆಸಲಿ ಎಂಬ ನಿಟ್ಟಿನಲ್ಲಿ ನಿತ್ಯಾನಂದನ ಭಕ್ತರು ಎರಡುದಿನಗಳ ಪ್ರಾರ್ಥನೆಯಲ್ಲಿ ತೊಡಗಿದ್ದಾರೆ. ರಾಜ್ಯ ಮತ್ತು ಹೊರರಾಜ್ಯಗಳಿಂದ ಆಗಮಿಸಿರುವ ನಿತ್ಯಾನಂದನ ಭಕ್ತರು ನಿತ್ಯಾನಂದನ ದರ್ಶನಕ್ಕಾಗಿ ನಿರಾಹಾರರಾಗಿ ದೇವರ ಪ್ರಾರ್ಥನೆ ಮಾಡುತ್ತಿರುವುದಾಗಿ ಧ್ಯಾನಪೀಠವಾಸಿ ಅರ್ಪಣಾನಂದ ಹೇಳಿದ್ದಾರೆ.
ನಟಿ ರಂಜಿತಾ ಜೊತೆ ಪಲ್ಲಂಗ ಹಂಚಿಕೊಂಡ ನಿತ್ಯಾನಂದನ ಜಾಮೀನು ಅರ್ಜಿ ವಿಚಾರಣೆ ಹೈಕೋರ್ಟ್ನಲ್ಲಿ ಜೂನ್ 8ರ ಮಂಗಳವಾರದಂದು ನಡೆಯಲಿದೆ.
-
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Gold Price Today: ಆಭರಣ ಪ್ರಿಯರಿಗೆ ಬಿಗ್ ರಿಲೀಫ್: ಬೆಂಗಳೂರಿನಲ್ಲಿ ಚಿನ್ನದ ಬೆಲೆ ದಿಢೀರ್ ಇಳಿಕೆ; ಇಂದಿನ ದರ ಇಲ್ಲಿದೆ -
Horoscope March 9; ಈ ರಾಶಿಯವರ ಅದೃಷ್ಟವೇ ಬದಲಾಗುತ್ತೆ: 12 ರಾಶಿ ಭವಿಷ್ಯ ತಿಳಿಯಿರಿ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
Sensex crash: ಷೇರು ಮಾರುಕಟ್ಟೆಯಲ್ಲಿ ಭಾರಿ ಸಂಚಲನ; ಸೆನ್ಸೆಕ್ಸ್ 2100 ಅಂಕ ಕುಸಿತ -
E-Bus: ಕರ್ನಾಟಕದ ಹೊಸ ಯೋಜನೆಯಡಿ ಗ್ರಾಮೀಣ ಭಾಗಗಳಲ್ಲೂ ಓಡಾಡಲಿವೆ 1950 ಎಲೆಕ್ಟ್ರಿಕ್ ಬಸ್ಗಳು -
Prediction on Donald Trump: ಟ್ರಂಪ್ ಗೆಲುವು, ಇರಾನ್ ಯುದ್ಧ ಭವಿಷ್ಯ: 3 ಭವಿಷ್ಯವಾಣಿಯಲ್ಲಿ 2 ನಿಜ, ಮತ್ತೊಂದೇನು -
ಕರ್ನಾಟಕದಲ್ಲಿ 40 ಡಿಗ್ರಿ ಸೆಲ್ಸಿಯಸ್ ದಾಟಿದೆ ಉಷ್ಣಾಂಶ: ಈಗಿನ್ನೂ ಮಾರ್ಚ್, ಮೇ ಕಥೆ ಹೇಗೆ? ಬಿಸಿಗಾಳಿಗೆ ಬಸವಳಿದ ಜನ -
Sanju Samson: ಟಿ20 ವಿಶ್ವಕಪ್ ಗೆಲುವಿನ ಬಳಿಕ ಕ್ರಿಕೆಟ್ ದೇವರ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಸಂಜು ಸ್ಯಾಮ್ಸನ್












Click it and Unblock the Notifications