ಬೆಂಗಳೂರಿನಲ್ಲಿ ಮರಗಳನ್ನು ಕಡಿಯಲು ಕರೆ

ಆದರೆ ಜೀವಕ್ಕೇ ಸಂಚಕಾರ ಒಡ್ಡುವ ಮರಗಳು ನಮಗೆ ಖಂಡಿತ ಬೇಡ. ಪ್ರತೀವರ್ಷ ಮೇ ಜೂನ್ ತಿಂಗಳಲ್ಲಿ ಮಳೆ ಗಾಳಿ ಜೋರಾದಾಗ ಬೆಂಗಳೂರಿನಲ್ಲಿರುವ ರಸ್ತೆ ಮರಗಳು ಉರುಳಿ ಬೀಳುತ್ತಲೇ ಇರುತ್ತವೆ. ಇದು ಪ್ರತೀವರ್ಷ ಕಂಡುಬರುವ ದೃಶ್ಯ. ವಯಸ್ಸಾದ ಮರಗಳು ಮತ್ತು ಬುಡ ಭದ್ರವಿಲ್ಲದ ಮರಗಳು ಉರುಳಿ ನಾನಾ ಬಗೆಯ ಅನಾಹುತಗಳು ಸಂಭವಿಸುತ್ತವೆ. ದಾರಿಯಲ್ಲಿ ಹೋಗುತ್ತಿದ್ದರೆ ಯಾವ ಮರ ಯಾರ ತಲೆ ಮೇಲೆ ಯಾವಾಗ ಬೀಳುತ್ತದೋ ಎಂಬ ಅಂಜಿಕೆಯಿಂದಲೇ ಹೆಜ್ಜೆ ಹಾಕಬೇಕಾಗುವ ಸೀಸನ್ ಈಗ ಮತ್ತೆ ಬೆಂಗಳೂರಿಗೆ ಕಾಲಿಟ್ಟಿದೆ.
ಮೊನ್ನೆ ಶನಿವಾರ ನಗರದ ನಾನಾ ಕಡೆ ಬಿದ್ದ ಅಲ್ಪ ಬೇಸಿಗೆ ಮಳೆಗೆ 60 ಮರಗಳು ಉರುಳಿವೆ. ಇಂದಿರಾ ನಗರದಲ್ಲಂತೂ ಮರ ಉರುಳುವುದರಿಂದ ಉಂಟಾದ ಫಜೀತಿ ಹೇಳಲಸಾಧ್ಯ. ಈ ಮರಗಳು ಸುಮ್ಮನೆ ಉರುಳಿಬೀಳುವುದಿಲ್ಲ. ಕರೆಂಟು ಕಂಬ, ಫೋನು ಕಂಬ, ಸಿಗ್ನಲ್ ಲೈಟು ಕಂಬ, ಕೇಬಲ್ಲುಗಳು, ಜಾಹಿರಾತು ಫಲಕಗಳ ಮೇಲೆ ಬಿದ್ದು ರಸ್ತೆಯಲ್ಲಿ ಅಂಗಾತ ಮಲಗುತ್ತವೆ. ಮರದ ಕೆಳಗೆ ಇರುವ ವಾಹನ, ಜನಗಳನ್ನು ಈ ಮರಗಳು ಆಹುತಿ ತೆಗೆದುಕೊಳ್ಳುವ ಭಯ ಇದ್ದೇ ಇದೆ.
ಬೆಂಗಳೂರಿನ ರಸ್ತೆಯ ಇಕ್ಕೆಲಗಳಲ್ಲಿರುವ ಶಿಥಿಲ ಮರಗಳನ್ನು, ರಸ್ತೆಯಮೇಲೆ ಚಾಚಿಕೊಂಡಿರುವ ಕೊಂಬೆ ರೆಂಬೆಗಳನ್ನು ಈ ಕೂಡಲೇ ಕಡಿಯಬೇಕೆಂದು ಬಿಬಿಎಂಪಿಗೆ ನಾವು ಈ ಮೂಲಕ ಮನವಿ ಮಾಡುತ್ತೇವೆ. ಉದ್ಯಾನವನ, ಮನೆ ಕಾಂಪೌಂಡು ಮತ್ತಿತರ ಬಯಲು ಪ್ರದೇಶಗಳಲ್ಲಿರುವ ಮರಗಳನ್ನು ರಕ್ಷಿಸಿ, ಪ್ರಾಣಾಪಾಯದ ಭೀತಿ ಹುಟ್ಟಿಸಿರುವ ಮರಗಳನ್ನು ದಯಾ ದಾಕ್ಷಿಣ್ಯ ತೋರದೆ ಇವತ್ತೇ ಕಡಿಯಿರಿ.
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications