For Daily Alerts
ಒಟ್ಟಿನಲ್ಲಿ ನಾನು ಸೋತಿರುವೆ : ಡಿ ಕೆ ಶಿವಕುಮಾರ್
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಾರ್ಯಾಧ್ಯಕ್ಷನಾಗಿ ಯಾವ ರೀತಿ ಕೆಲಸ ಮಾಡಬೇಕೆಂದು ಮತ್ತು ಪಕ್ಷದ ಸಂಘಟನೆ ಹೇಗೆ ನಡೆಸಬೇಕೆಂದು ಮೊದಲೇ ಯೋಜನೆ ಸಿದ್ದಪಡಿಸಿಕೊಂಡಿದ್ದೆ. ಆದರೆ ಆ ಯೋಜನೆ ಕಾರ್ಯರೂಪಕ್ಕೆ ಬರಲಿಲ್ಲ ಎಂದರು. ನನ್ನ ಶಕ್ತಿಯನ್ನು ಸಂಪೂರ್ಣವಾಗಿ ಧಾರೆ ಎರೆಯಲು ಆಗಲಿಲ್ಲ. ಫಲಿತಾಂಶ ಆಧಾರಿತ ನಾಯಕ ನಾನಾಗಲಿಲ್ಲ, ಒಟ್ಟಿನಲ್ಲಿ ನಾನು ವಿಫಲನಾದೆ ಎಂದು ಡಿಕೆಶಿ ಆತ್ಮಾವಲೋಕನ ಮಾಡಿಕೊಂಡಿದ್ದಾರೆ.
ನನ್ನ ಮತ್ತು ಅಧ್ಯಕ್ಷರ ನಡುವೆ ಹೊಂದಾಣಿಕೆ ಇರಲಿಲ್ಲ ಎನ್ನುವ ಮಾತು ನಿರಾಧಾರಿತ. ದೇಶಪಾಂಡೆ ವಹಿಸಿದ ಕೆಲಸವನ್ನು ಮಾಡಿದ್ದೇನೆ. ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ನಡೆಯುವ ಯುವ ಚುನಾವಣೆಯಲ್ಲಿ ಸ್ಪರ್ಧಿಸಬೇಕೆನ್ನುವ ಇಚ್ಛೆ ನನಗಿಲ್ಲ. ನನ್ನನ್ನು ಈ ಸ್ಥಾನಕ್ಕೆ ನೇಮಕ ಮಾಡಿದವರು ಸೋನಿಯಾ ಮೇಡಂ. ಅವರು ಎಲ್ಲಿಯವರೆಗೆ ಇಟ್ಟಿರುವವರೋ ಅಲ್ಲಿಯವರೆಗೆ ಈ ಹುದ್ದೆಯಲ್ಲಿ ಇರುತ್ತೇನೆ ಎಂದು ಶಿವಕುಮಾರ್ ಹೇಳಿದರು. ಆದರೆ ತಾನಾಗಿ ಹುದ್ದೆಯಿಂದ ನಿರ್ಗಮಿಸುವುದಿಲ್ಲ ಎನ್ನುವ ಸುಳಿವನ್ನು ಅವರು ನೀಡಿದ್ದಾರೆ.
ಡಿಕೆ ಶಿವಕುಮಾರ್ ಕಾಂಗ್ರೆಸ್ ಕೆಪಿಸಿಸಿ ಆರ್ ವಿ ದೇಶಪಾಂಡೆ ಸೋನಿಯಾ ಗಾಂಧಿ dk shivakumar congress kpcc rv deshpande sonia gandhi
Story first published: Friday, May 14, 2010, 15:22 [IST]