ಬಿಬಿಎಂಪಿ ಫಲಿತಾಂಶ: ಓದುಗರ ಗಿಣಿಶಾಸ್ತ್ರ

ಭಾರತೀಯ ಜನತಾಪಕ್ಷ, ಜಾತ್ಯತೀತ ಜನತಾದಳ, ಕಾಂಗ್ರೆಸ್ ಮತ್ತು ಪಕ್ಷೇತರರು ಮಹಾನಗರ ಪಾಲಿಕೆಯ ಚುಕ್ಕಾಣಿ ಹಿಡಿಯಲು ಲಗೋರಿ ಹೂಡಿದ್ದಾರೆ. ಅಂತಿಮವಾಗಿ ಯಾರ ಕೈಗೆ ಅಧಿಕಾರ ಹೋಗಲಿದೆ ಎನ್ನುವುದು ಅತ್ಯಂತ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.
ಬೆಂಗಳೂರು ಮತದಾರನ ಒಲವು ಯಾರ ಕಡೆಗೆ ಹೆಚ್ಚಿದೆ ಎನ್ನುವುದನ್ನು ಅರಿಯುವುದಕ್ಕೆ ಕೆಲವು ಖಾಸಗಿ ಸಂಸ್ಥೆಗಳು ಒಟ್ಟಾಗಿ ಚುನಾವಣಾ ಪೂರ್ವ ಸಮೀಕ್ಷೆ ಕೈಗೊಂಡಿದ್ದವು. ಆ ಸಮೀಕ್ಷೆಗಳು ಪ್ರಕಟಿಸಿದ ಫಲಿತಾಂಶ ಹೇಗೂ ಇರಲಿ. ಬೆಂಗಳೂರಿನ ಪ್ರಜೆಗಳಾದ ತಮ್ಮ ಊಹೆ ಮತ್ತು ಕರ್ನಾಟಕ ರಾಜಧಾನಿಯ ಆಗುಹೋಗುಗಳಲ್ಲಿ ಸದಾ ಆಸಕ್ತಿ ತಾಳುವ ಕನ್ನಡಿಗರ ರಾಜಕೀಯ ಲೆಕ್ಕಾಚಾರಗಳೂ ಪಣಕ್ಕೆ ಒಡ್ಡಿಕೊಂಡಿವೆ.
ಒಟ್ಟು 198 ವಾರ್ಡುಗಳಲ್ಲಿ ಅತಿ ಹೆಚ್ಚು ಸ್ಥಾನ ಗಳಿಸುವ ಪಕ್ಷ ಯಾವುದು ಎಂದು ಊಹಿಸುವುದಕ್ಕೆ ದಟ್ಸ್ ಕನ್ನಡ ನಿಮ್ಮನ್ನು ಆಹ್ವಾನಿಸುತ್ತದೆ ಮತ್ತು ವೇದಿಕೆ ಕಲ್ಪಿಸುತ್ತದೆ. ಆಸಕ್ತ ಚಾರಣಿಗರು ಪ್ರಮುಖ ಮೂರು ಪಕ್ಷಗಳಾದ ಬಿಜೆಪಿ, ಕಾಂಗೈ, ಜೆಡಿಎಸ್ ಅಲ್ಲದೆ ಪಕ್ಷೇತರ ಅಭ್ಯರ್ಥಿಗಳು ಅಂಕೆಸಂಖ್ಯೆಗಳ ರಾಜಕೀಯ ಚದುರಂಗದಾಟದಲ್ಲಿ ಎಲ್ಲಿ ನಿಲ್ಲುತ್ತಾರೆ ಎಂಬ ಒಳನೋಟಗಳನ್ನು ಪಕ್ಷಗಳ ಬಲಾಬಲ ಸೂಚಿಸುವ ಮೂಲಕ ಕಾಮೆಂಟ್ ವಿಭಾಗದಲ್ಲಿ ದಾಖಲಿಸುವುದಕ್ಕೆ ಸ್ವಾಗತ ಕೋರುತ್ತಿದ್ದೇವೆ.
ನಿಮ್ಮ ಸಮೀಕ್ಷೆಯ ಫಲಿತಾಂಶಗಳು ಹೀಗೆ ಹೊಮ್ಮಲಿ:ಒಂದು ಉದಾಹರಣೆ : ಭಾಜಪ xxx ಕಾಂಗ್ರೆಸ್ xxx ಜೆಡಿ ಎಸ್ xxx ಪಕ್ಷೇತರರು xx. ನಿಮ್ಮ ಲೆಕ್ಕಾಚಾರಗಳು ನಿಜವೇ ಆಗಿಬರಲಿ. ಸೋಮವಾರ ದಟ್ಸ್ ಕನ್ನಡ ದಾಖಲಿಸುವ ಅಧಿಕೃತ ಫಲಿತಾಂಶ ಪಟ್ಟಿಯೊಂದಿಗೆ ನಿಮ್ಮ ಊಹೆಗಳನ್ನು ತಾಳೆಹಾಕಿ ನೋಡಿಕೊಳ್ಳಿರಿ. ಗುಡ್ ಲಕ್.
-
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
ಮಾರ್ಚ್ 31ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Gold Price: ದಿಢೀರ್ ಏರಿಕೆ ಕಂಡ ಚಿನ್ನದ ದರ: ಪ್ರತಿ ಗ್ರಾಂಗೆ 14,929 ರೂಪಾಯಿ, ಕೆ.ಜಿಗೆ 2.5 ಲಕ್ಷ ರೂ. ತಲುಪಿದ ಬೆಳ್ಳಿ -
Kannada: ಕರ್ನಾಟಕದಲ್ಲಿರುವ ಬ್ಯಾಂಕ್ಗಳಲ್ಲಿ ಸ್ಪಷ್ಟ ಕನ್ನಡ; ತುಳು, ಕೊಂಕಣಿ ಭಾಷೆಯ ಕಲರವ ಈಗ ಉಳಿದಿಲ್ಲ: ಕವಿರಾಜ್












Click it and Unblock the Notifications