ಬಿಬಿಎಂಪಿ ಫಲಿತಾಂಶ: ಓದುಗರ ಗಿಣಿಶಾಸ್ತ್ರ

ಭಾರತೀಯ ಜನತಾಪಕ್ಷ, ಜಾತ್ಯತೀತ ಜನತಾದಳ, ಕಾಂಗ್ರೆಸ್ ಮತ್ತು ಪಕ್ಷೇತರರು ಮಹಾನಗರ ಪಾಲಿಕೆಯ ಚುಕ್ಕಾಣಿ ಹಿಡಿಯಲು ಲಗೋರಿ ಹೂಡಿದ್ದಾರೆ. ಅಂತಿಮವಾಗಿ ಯಾರ ಕೈಗೆ ಅಧಿಕಾರ ಹೋಗಲಿದೆ ಎನ್ನುವುದು ಅತ್ಯಂತ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.
ಬೆಂಗಳೂರು ಮತದಾರನ ಒಲವು ಯಾರ ಕಡೆಗೆ ಹೆಚ್ಚಿದೆ ಎನ್ನುವುದನ್ನು ಅರಿಯುವುದಕ್ಕೆ ಕೆಲವು ಖಾಸಗಿ ಸಂಸ್ಥೆಗಳು ಒಟ್ಟಾಗಿ ಚುನಾವಣಾ ಪೂರ್ವ ಸಮೀಕ್ಷೆ ಕೈಗೊಂಡಿದ್ದವು. ಆ ಸಮೀಕ್ಷೆಗಳು ಪ್ರಕಟಿಸಿದ ಫಲಿತಾಂಶ ಹೇಗೂ ಇರಲಿ. ಬೆಂಗಳೂರಿನ ಪ್ರಜೆಗಳಾದ ತಮ್ಮ ಊಹೆ ಮತ್ತು ಕರ್ನಾಟಕ ರಾಜಧಾನಿಯ ಆಗುಹೋಗುಗಳಲ್ಲಿ ಸದಾ ಆಸಕ್ತಿ ತಾಳುವ ಕನ್ನಡಿಗರ ರಾಜಕೀಯ ಲೆಕ್ಕಾಚಾರಗಳೂ ಪಣಕ್ಕೆ ಒಡ್ಡಿಕೊಂಡಿವೆ.
ಒಟ್ಟು 198 ವಾರ್ಡುಗಳಲ್ಲಿ ಅತಿ ಹೆಚ್ಚು ಸ್ಥಾನ ಗಳಿಸುವ ಪಕ್ಷ ಯಾವುದು ಎಂದು ಊಹಿಸುವುದಕ್ಕೆ ದಟ್ಸ್ ಕನ್ನಡ ನಿಮ್ಮನ್ನು ಆಹ್ವಾನಿಸುತ್ತದೆ ಮತ್ತು ವೇದಿಕೆ ಕಲ್ಪಿಸುತ್ತದೆ. ಆಸಕ್ತ ಚಾರಣಿಗರು ಪ್ರಮುಖ ಮೂರು ಪಕ್ಷಗಳಾದ ಬಿಜೆಪಿ, ಕಾಂಗೈ, ಜೆಡಿಎಸ್ ಅಲ್ಲದೆ ಪಕ್ಷೇತರ ಅಭ್ಯರ್ಥಿಗಳು ಅಂಕೆಸಂಖ್ಯೆಗಳ ರಾಜಕೀಯ ಚದುರಂಗದಾಟದಲ್ಲಿ ಎಲ್ಲಿ ನಿಲ್ಲುತ್ತಾರೆ ಎಂಬ ಒಳನೋಟಗಳನ್ನು ಪಕ್ಷಗಳ ಬಲಾಬಲ ಸೂಚಿಸುವ ಮೂಲಕ ಕಾಮೆಂಟ್ ವಿಭಾಗದಲ್ಲಿ ದಾಖಲಿಸುವುದಕ್ಕೆ ಸ್ವಾಗತ ಕೋರುತ್ತಿದ್ದೇವೆ.
ನಿಮ್ಮ ಸಮೀಕ್ಷೆಯ ಫಲಿತಾಂಶಗಳು ಹೀಗೆ ಹೊಮ್ಮಲಿ:ಒಂದು ಉದಾಹರಣೆ : ಭಾಜಪ xxx ಕಾಂಗ್ರೆಸ್ xxx ಜೆಡಿ ಎಸ್ xxx ಪಕ್ಷೇತರರು xx. ನಿಮ್ಮ ಲೆಕ್ಕಾಚಾರಗಳು ನಿಜವೇ ಆಗಿಬರಲಿ. ಸೋಮವಾರ ದಟ್ಸ್ ಕನ್ನಡ ದಾಖಲಿಸುವ ಅಧಿಕೃತ ಫಲಿತಾಂಶ ಪಟ್ಟಿಯೊಂದಿಗೆ ನಿಮ್ಮ ಊಹೆಗಳನ್ನು ತಾಳೆಹಾಕಿ ನೋಡಿಕೊಳ್ಳಿರಿ. ಗುಡ್ ಲಕ್.
-
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Sanju Samson Father: ಅಂದು ಮಗನನ್ನು ಅಲೆದಾಡಿಸಿದವರು ಇಂದು ಕ್ಷಮೆ ಕೇಳುತ್ತಿದ್ದಾರೆ: ಸಂಜು ಸ್ಯಾಮ್ಸನ್ ತಂದೆಯ ಭಾವುಕ ನುಡಿ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ












Click it and Unblock the Notifications