ಕೆಎಸ್ಆರ್ ಟಿಸಿ ದೈನಿಕ ಬಸ್ ಪಾಸ್ ಹೆಚ್ಚಳ

ಬೆಂಗಳೂರಿಗೆ ಸಮೀಪವಿರುವ ಪಟ್ಟಣ ಹಾಗೂ ನಗರಗಳಿಂದ ಸಾಕಷ್ಟು ಜನರು ಕೆಎಸ್ಆರ್ ಟಿಸಿ ಬಸ್ ಗಳ ಮೂಲಕ ನಿತ್ಯವೂ ಸಂಚರಿಸುತ್ತಾರೆ. ಅವರೆಲ್ಲರೂ ದೈನಿಕ ಪಾಸ್ ಗಳನ್ನು ಅವಲಂಬಿಸಿದ್ದಾರೆ. ಹೀಗಾಗಿ ಇಂತಹ ಪ್ರಯಾಣಿಕರ ಜೇಬಿಗೆ ಸರಕಾರ ಮತ್ತೆ ಕತ್ತರಿ ಹಾಕಿದ್ದು. ಕೆಎಸ್ ಆರ್ ಟಿಸಿ ದೈನಿಕ ಸಂಯುಕ್ತ ಪಾಸ್ ದರವನ್ನು ಗರಿಷ್ಟ 10 ರುಪಾಯಿ ಹೆಚ್ಚಳ ಮಾಡಲಾಗಿದೆ.
ಕನಕಪುರದಿಂದ ಬೆಂಗಳೂರಿಗೆ 70 ರಿಂದ 80 ರುಪಾಯಿಗೆ ಹೆಚ್ಚಿಸಲಾಗಿದೆ. ಹಾರೋಹಳ್ಳಿಯಿಂದ ಬೆಂಗಳೂರಿಗೆ 50 ರಿಂದ 60ರುಪಾಯಿ, ಚನ್ನಪಟ್ಟಣದಿಂದ ಬೆಂಗಳೂರಿಗೆ 70 ರಿಂದ 80 ರುಪಾಯಿ, ರಾಮನಗರದಿಂದ ಬೆಂಗಳೂರಿಗೆ 56 ರಿಂದ 65 ರುಪಾಯಿಗೆ ಹೆಚ್ಚಿಸಲಾಗಿದೆ.
ಮಾಗಡಿಯಿಂದ ಬೆಂಗಳೂರಿಗೆ 50 ರಿಂದ 60 ರುಪಾಯಿಗೆ, ಕುಣಿಗಲ್ ನಿಂದ ಬೆಂಗಳೂರಿಗೆ 80 ರಿಂದ 85 ರುಪಾಯಿಗೆ ಹೆಚ್ಚಿಸಲಾಗಿದೆ. ತುಮಕೂರಿನಿಂದ ಬೆಂಗಳೂರಿಗೆ 85 ರಿಂದ 90 ರುಪಾಯಿಗೆ, ಗೌರಿಬಿದನೂರಿನಿಂದ ಬೆಂಗಳೂರಿಗೆ 90 ರಿಂದ 100ರುಪಾಯಿಗೆ, ಶಿಢ್ಲಘಟ್ಟದಿಂದ ಬೆಂಗಳೂರಿಗೆ 60 ರಿಂದ 70 ರುಪಾಯಿ, ಚಿಂತಾಮಣಿಯಿಂದ ಬೆಂಗಳೂರಿಗೆ 90 ರಿಂದ 100 ದರವನ್ನು ನಿಗದಿಪಡಿಸಲಾಗಿದೆ.












Click it and Unblock the Notifications