ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ವಿಮಾನ ದುರಂತ: ಬೆಂಗಳೂರಿನ ಪೈಲಟ್ ಮರಣ
ಬೆಂಗಳೂರಿನ ಕಮಾಂಡರ್ ಸುರೇಶ್ ಮೌರ್ಯ ಮತ್ತು ಉತ್ತರ ಪ್ರದೇಶದ ಸುಲ್ತಾನಪುರದ ರಾಹುಲ್ ನಾಯರ್ ಎಂಬ ಇಬ್ಬರು ಪೈಲಟ್ಗಳು ಮೃತಪಟ್ಟ ದುರ್ದೈವಿಗಳು. ಈ ದುರ್ಘಟನೆಯಲ್ಲಿ ನಾಲ್ವರು ಗಾಯಗೊಂಡಿದ್ದಾರೆ. ಅಂತಾರಾಷ್ಟ್ರೀಯ ವೈಮಾನಿಕ ಪ್ರದರ್ಶನದಲ್ಲಿ ಇತರ ಮೂರು ವಿಮಾನಗಳೊಂದಿಗೆ ಪಾಲ್ಗೊಂಡಿದ್ದ ನೌಕಾ ಪಡೆಯ ಸಾಗರ್ ಪವನ್ ತಂಡದ 'ಕಿರಣ್ ಎಂಕೆ-II' ಎಂಬ ವಿಮಾನ ನಿಯಂತ್ರಣ ತಪ್ಪಿ ಮೂರು ಮಹಡಿಗಳ ಕಟ್ಟಡದ ಮೇಲೆ ಉರುಳಿ ಬಿತ್ತು. ಈ ಸಂದರ್ಭದಲ್ಲಿ ಪೈಲಟ್ಗಳಿಗೆ ಪ್ಯಾರಾಚೂಟ್ಗಳನ್ನು ಬಳಸಲು ಸಾಧ್ಯವಾಗಿಲ್ಲ ಎಂದು ಹೇಳಲಾಗಿದೆ.
ಘಟನೆಗೆ ಪ್ರತಿಕ್ರಿಯಿಸಿರುವ ಕೇಂದ್ರ ವಾಯುಯಾನ ಸಚಿವ ಪ್ರಫುಲ್ ಪಟೇಲ್, ಇದು ದುರದೃಷ್ಟಕರ ಎಂದು ಹೇಳಿದ್ದಾರೆ. ಪ್ರತ್ಯಕ್ಷದರ್ಶಿಗಳ ಪ್ರಕಾರ ವಿಮಾನವು ಮೊದಲು ಕಟ್ಟಡದ ಮೇಲಿದ್ದ ಮೊಬೈಲ್ ಟವರ್ಗೆ ಡಿಕ್ಕಿ ಹೊಡೆದು, ಬಳಿಕ ಕೆಳಕ್ಕುರುಳಿದೆ. ಮಾರ್ಚ್ 3ರಿಂದ 7ರವರೆಗೆ ನಡೆಯಲಿರುವ ವೈಮಾನಿಕ ಪ್ರದರ್ಶನದ ಆರಂಭಿಕ ದಿನವೇ ಈ ದುರಂತ ಸಂಭವಿಸಿದೆ.
Comments
ದುರಂತ ಹೈದರಾಬಾದ್ ಸಾವು ವಿಮಾನ ಭಾರತೀಯ ಸೇನೆ ಏರ್ ಷೋ air crash accident hyderabad andhra pradesh death plane crash
Story first published: Wednesday, March 3, 2010, 14:38 [IST]