ಹಿಂಬಾಗಿಲಿನಿಂದ ಬಿಟಿ ಬದನೆ ಪ್ರವೇಶ

ಆದರೆ, ನಿಜಕ್ಕೂ ಬಿಟಿ ತಳಿಗಳನ್ನು ನಿಷೇಧಿಸಲಾಗುವುದೇ ಅಥವಾ ಭಾರತದಲ್ಲಿ ಅದಕ್ಕೆ ತಳ ಊರಲು ಅವಕಾಶ ನೀಡುವ ಹುನ್ನಾರ ತೆರೆ ಮರೆಯಲ್ಲಿ ನಡೆಯುತ್ತಿದೆಯೇ? ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಸಚಿವ ಪೃಥ್ವಿರಾಜ್ ಚವ್ಹಾಣ್ ಅವರ ಚಲನವಲನಗಳನ್ನು ಗಂಭೀರವಾಗಿ ಗಮನಿಸುತ್ತಿರುವವರ ಪ್ರಕಾರ ಮೇಲಿನ ಪ್ರಶ್ನೆಗೆ ಉತ್ತರ, ಹೌದು!
ಬಿಟಿ ಬದನೆ ವಿಚಾರದಲ್ಲಿ ಚಾಲ್ತಿಯಿರುವ ಅದಕ್ಕೆ ಅನಾನುಕೂಲವಾಗಿರುವ ನಿಯಮಾವಳಿಗಳನ್ನು ತಿರುಚಲು ಸಚಿವರು ಗುಪ್ತವಾಗಿ ಪ್ರಯತ್ನ ನಡೆಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಅಷ್ಟೇ ಅಲ್ಲ, ಹಿಂಬಾಗಿಲಿನಿಂದ ಬಿಟಿ ಬದನೆಯನ್ನು ಬಚಾವ್ ಮಾಡುವ ಚವ್ಹಾಣ್ ಅವರ "ಕುಯುಕ್ತಿಯ" ವಿರುದ್ಧ ಸಹಿಸಂಗ್ರಹ ಚಳವಳಿ ಇದೀಗ ಆರಂಭವಾಗಿದೆ.
ಮಾನ್ ಸಾಂಟೋ ಮತ್ತಿತರ ಬಯೋಟೆಕ್ ಕಂಪನಿಗಳು ಕೊಡಮಾಡುವ ಹಣದಿಂದ ನಡೆಸಲಾದ ಅಧ್ಯಯನದ ಅಂಶಗಳನ್ನು ಸಚಿವರು ಮಕ್ಕಿಕಾಮಕ್ಕಿ ಕಾಪಿ ಹೊಡೆದು ಬಿಟಿ ಬದನೆ ಪರವಾಗಿ ವಕಾಲತ್ತು ವಹಿಸಿ ಬಿಟಿ ಬದನೆಗೆ ದೀರ್ಘಾಯಸ್ಸು ಕೋರುತ್ತಿದ್ದಾರೆ ಎಂದು ಹೇಳಲಾಗಿದೆ.
ಜೆನಿಟಿಕಲಿ ಮಾಡಿಫೈಡ್ ಉತ್ಪನ್ನಗಳಾದ ಬದನೆ, ಅಕ್ಕಿ ಮುಂತಾದ ಆಹಾರ ಪದಾರ್ಥಗಳನ್ನು ಬಳಸುವುದಕ್ಕೆ ಅಡ್ಡಿಯಾಗುವ ಕಾನೂನು ಅಂಶಗಳನ್ನು ತಿದ್ದುವುದಲ್ಲದೆ, ಆ ಬಗ್ಗೆ ಮಸೂದೆ ತರುವುದಕ್ಕೆ ಸಚಿವರು ತೀವ್ರ ಪ್ರಯತ್ನಗಳನ್ನು ನಡೆಸುತ್ತಿದ್ದಾರೆ. ಸಾರ್ವಜನಿಕರ ಅಭಿಪ್ರಾಯಗಳನ್ನು ಕ್ರೋಢೀಕರಿಸದೆ ಮಸೂದೆ ತರಲು ಯತ್ನಿಸುತ್ತಿರುವ ಸಚಿವರ ಉಮೇದು ಪ್ರಜಾಪ್ರಭುತ್ವ ವಿರೋಧಿ ಕ್ರಮವಾಗಿದೆ ಎಂದು ಸಹಿ ಸಂಗ್ರಹ ನಡೆಸುತ್ತಿರುವ ಗುಂಪು ಆರೋಪಿಸಿದೆ.
ಚವ್ಹಾಣ್ ಅವರು ಭಾರತದ ಜನಸೇವಕ ಆಗಿರಬೇಕೇ ಹೊರತು ಬಯೋಟೆಕ್ ಬೀಜ ಉತ್ಪಾದನಾ ಸಂಸ್ಥೆಗಳ ಬಾಲಬಡುಕನಾಗಬಾರದು ಎಂದು ಬಿಟಿ ಆಹಾರ ಮತ್ತು ಅದನ್ನು ಬೆಂಬಲಿಸುತ್ತಿರುವ ಸಚಿವರ ವಿರೋಧಿಗಳು ಒತ್ತಾಯಿಸುತ್ತಿದ್ದಾರೆ. ಸಹಿ ಮಾಡುವುದಕ್ಕೆ ಗ್ರೀನ್ ಪೀಸ್ ಆನ್ ಲೈನ್ ಅರ್ಜಿ ನಮೂನೆಗಳು ನಿಮಗೆ ಇಲ್ಲಿ ಸಿಗುತ್ತವೆ.
-
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ












Click it and Unblock the Notifications