ಹಿಂಬಾಗಿಲಿನಿಂದ ಬಿಟಿ ಬದನೆ ಪ್ರವೇಶ

ಆದರೆ, ನಿಜಕ್ಕೂ ಬಿಟಿ ತಳಿಗಳನ್ನು ನಿಷೇಧಿಸಲಾಗುವುದೇ ಅಥವಾ ಭಾರತದಲ್ಲಿ ಅದಕ್ಕೆ ತಳ ಊರಲು ಅವಕಾಶ ನೀಡುವ ಹುನ್ನಾರ ತೆರೆ ಮರೆಯಲ್ಲಿ ನಡೆಯುತ್ತಿದೆಯೇ? ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಸಚಿವ ಪೃಥ್ವಿರಾಜ್ ಚವ್ಹಾಣ್ ಅವರ ಚಲನವಲನಗಳನ್ನು ಗಂಭೀರವಾಗಿ ಗಮನಿಸುತ್ತಿರುವವರ ಪ್ರಕಾರ ಮೇಲಿನ ಪ್ರಶ್ನೆಗೆ ಉತ್ತರ, ಹೌದು!
ಬಿಟಿ ಬದನೆ ವಿಚಾರದಲ್ಲಿ ಚಾಲ್ತಿಯಿರುವ ಅದಕ್ಕೆ ಅನಾನುಕೂಲವಾಗಿರುವ ನಿಯಮಾವಳಿಗಳನ್ನು ತಿರುಚಲು ಸಚಿವರು ಗುಪ್ತವಾಗಿ ಪ್ರಯತ್ನ ನಡೆಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಅಷ್ಟೇ ಅಲ್ಲ, ಹಿಂಬಾಗಿಲಿನಿಂದ ಬಿಟಿ ಬದನೆಯನ್ನು ಬಚಾವ್ ಮಾಡುವ ಚವ್ಹಾಣ್ ಅವರ "ಕುಯುಕ್ತಿಯ" ವಿರುದ್ಧ ಸಹಿಸಂಗ್ರಹ ಚಳವಳಿ ಇದೀಗ ಆರಂಭವಾಗಿದೆ.
ಮಾನ್ ಸಾಂಟೋ ಮತ್ತಿತರ ಬಯೋಟೆಕ್ ಕಂಪನಿಗಳು ಕೊಡಮಾಡುವ ಹಣದಿಂದ ನಡೆಸಲಾದ ಅಧ್ಯಯನದ ಅಂಶಗಳನ್ನು ಸಚಿವರು ಮಕ್ಕಿಕಾಮಕ್ಕಿ ಕಾಪಿ ಹೊಡೆದು ಬಿಟಿ ಬದನೆ ಪರವಾಗಿ ವಕಾಲತ್ತು ವಹಿಸಿ ಬಿಟಿ ಬದನೆಗೆ ದೀರ್ಘಾಯಸ್ಸು ಕೋರುತ್ತಿದ್ದಾರೆ ಎಂದು ಹೇಳಲಾಗಿದೆ.
ಜೆನಿಟಿಕಲಿ ಮಾಡಿಫೈಡ್ ಉತ್ಪನ್ನಗಳಾದ ಬದನೆ, ಅಕ್ಕಿ ಮುಂತಾದ ಆಹಾರ ಪದಾರ್ಥಗಳನ್ನು ಬಳಸುವುದಕ್ಕೆ ಅಡ್ಡಿಯಾಗುವ ಕಾನೂನು ಅಂಶಗಳನ್ನು ತಿದ್ದುವುದಲ್ಲದೆ, ಆ ಬಗ್ಗೆ ಮಸೂದೆ ತರುವುದಕ್ಕೆ ಸಚಿವರು ತೀವ್ರ ಪ್ರಯತ್ನಗಳನ್ನು ನಡೆಸುತ್ತಿದ್ದಾರೆ. ಸಾರ್ವಜನಿಕರ ಅಭಿಪ್ರಾಯಗಳನ್ನು ಕ್ರೋಢೀಕರಿಸದೆ ಮಸೂದೆ ತರಲು ಯತ್ನಿಸುತ್ತಿರುವ ಸಚಿವರ ಉಮೇದು ಪ್ರಜಾಪ್ರಭುತ್ವ ವಿರೋಧಿ ಕ್ರಮವಾಗಿದೆ ಎಂದು ಸಹಿ ಸಂಗ್ರಹ ನಡೆಸುತ್ತಿರುವ ಗುಂಪು ಆರೋಪಿಸಿದೆ.
ಚವ್ಹಾಣ್ ಅವರು ಭಾರತದ ಜನಸೇವಕ ಆಗಿರಬೇಕೇ ಹೊರತು ಬಯೋಟೆಕ್ ಬೀಜ ಉತ್ಪಾದನಾ ಸಂಸ್ಥೆಗಳ ಬಾಲಬಡುಕನಾಗಬಾರದು ಎಂದು ಬಿಟಿ ಆಹಾರ ಮತ್ತು ಅದನ್ನು ಬೆಂಬಲಿಸುತ್ತಿರುವ ಸಚಿವರ ವಿರೋಧಿಗಳು ಒತ್ತಾಯಿಸುತ್ತಿದ್ದಾರೆ. ಸಹಿ ಮಾಡುವುದಕ್ಕೆ ಗ್ರೀನ್ ಪೀಸ್ ಆನ್ ಲೈನ್ ಅರ್ಜಿ ನಮೂನೆಗಳು ನಿಮಗೆ ಇಲ್ಲಿ ಸಿಗುತ್ತವೆ.
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications