ಸಾಹಿತ್ಯಕ್ಕೆ ನೆರವು ಕೇಳುವುದು ನಮ್ಮ ಹಕ್ಕು, ಗೀತಾ
ಬೆಂಗಳೂರು,
ಫೆ. 21 : ಸಾಹಿತ್ಯ ಕ್ಷೇತ್ರಕ್ಕೆ ಜ್ಞಾನಪೀಠಕ್ಕಿಂತ ದೊಡ್ಡ ಪ್ರಶಸ್ತಿ ನೀಡಬೇಕೆಂಬ ತಮ್ಮ ಆಗ್ರಹದಿಂದ ಹಿಂದಕ್ಕೆ ಸರಿಯದ 76ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನಾಧ್ಯಕ್ಷೆ ಡಾ ಗೀತಾ ನಾಗಭೂಷಣ, ಸರಕಾರಕ್ಕೆ ಬೇಡಿಕೆಗಳನ್ನು ಸಲ್ಲಿಸುವುದು ನಮ್ಮ ಹಕ್ಕು ಎನ್ನುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ. id="toptextpromo"> ಸಮ್ಮೇಳನಾಧ್ಯಕ್ಷರ ಸಂವಾದದಲ್ಲಿ ತನ್ನ ವಾದ ಸರಣಿಯನ್ನು ಮುಂದುವರಿಸಿದ ಅವರು, ಶುಕ್ರವಾರ ತಾವು ಆಡಿದ ಮಾತಿಗೆ ಸ್ಪಷ್ಟಿಕರಣ ನೀಡಿದರು. ದೇವರಿಗೆ ಬಂಗಾರದ ಕಿರೀಟ ನೀಡಲಿಕ್ಕಾಗುತ್ತೆ. ಸಾಹಿತ್ಯ ಕ್ಷೇತ್ರಕ್ಕೆ ಪ್ರಶಸ್ತಿ ಏಕೆ ಕೊಡಬಾರದು ? ಹೆಚ್ಚು ಹಣ ಏಕೆ ಕೊಡಬಾರದು ಎಂದು ಪ್ರಶ್ನಿಸಿದರು. ದೇವರಿಗೆ ಬಂಗಾರದ ಕಿರೀಟ ನೀಡೋ ನಿಮ್ಮಂಥವರೇ ಜ್ಞಾನಪೀಠಕ್ಕಿಂತ ದೊಡ್ಡ ಪ್ರಶಸ್ತಿಯನ್ನು ನೀಡಬಹುದೆಂಬ ಇಂಗಿತವನ್ನು ಶುಕ್ರವಾರ ತಮ್ಮ ಅಧ್ಯಕ್ಷಿಯ ಭಾಷಣದಲ್ಲಿ ವ್ಯಕ್ತಪಡಿಸಿದರು. id='are-slot-1' class='oiad oi-axt oiadv'> id='top-searched-articles'>ಇದು
ಬೇರೆ ಬಗೆಯ ಚರ್ಚೆಯನ್ನು ಹುಟ್ಟುಹಾಕಿತ್ತು. ಈ ಹಿನ್ನೆಲೆಯಲ್ಲಿ ಅದನ್ನು ಮತ್ತಷ್ಟು ಸ್ಪಷ್ಟಪಡಿಸಿದ ಅವರು, ಶ್ರೀರಾಮುಲು ಅವರನ್ನು ಪ್ರಶಸ್ತಿ ಕೊಡವಂತೆ ನಾನು ಕೋರಲ್ಲ. ಇಲ್ಲಿ ಶ್ರೀರಾಮುಲು ಆರೋಗ್ಯ ಸಚಿವರಾಗಿ, ಸರಕಾರದ ಪ್ರತಿನಿಧಿಯಾಗಿ ಬಂದಿದ್ದಾರೆ. ಹಾಗಾಗಿ ಸರಕಾರಕ್ಕೆ ಅವರ ಮೂಲಕ ಬೇಡಿಕೆ ಸಲ್ಲಿಸಿದೆ. ಇದಕ್ಕೆ ಬೇರೇನೂ ಅರ್ಥ ಕಲ್ಪಿಸಬೇಡಿ ಎಂದು ಗೀತಾ ವಿವರಿಸಿದರು.











Click it and Unblock the Notifications