ಪುಣೆ ದಾಳಿಗೆ ಪಾಕಿಗಳ ಕೈವಾಡ

ಉಗ್ರ ಸಂಘಟನೆಯ ವಕ್ತಾರ ಅಬು ಜಿಂದಾಲ್, ಭಾರತೀಯ ಮೂಲದ ಅಂತಾರಾಷ್ಟ್ರೀಯ ಪತ್ರಿಕೆ ದಿ ಹಿಂದು ಪತ್ರಿಕೆಯ ವಿಶೇಷ ವರದಿಗಾರ್ತಿ ನಿರುಪಮಾ ಸುಬ್ರಮಣ್ಯ ಅವರಿಗೆ ಈ ವಿಷಯ ತಿಳಿಸಿದ್ದಾನೆ ಎಂದು ಮೂಲಗಳು ತಿಳಿಸಿವೆ. ಪುಣೆ ದಾಳಿಗೆ ಎರಡು ಪ್ರಮುಖ ಕಾರಣಗಳನ್ನು ನೀಡಿರುವ ಉಗ್ರ, ಮುಂಬರುವ ಭಾರತ ಮತ್ತು ಪಾಕಿಸ್ತಾನದ ದ್ವಿಪಕ್ಷಿಯ ಮಾತುಕತೆಯಲ್ಲಿ ಕಾಶ್ಮೀರದ ಬಗ್ಗೆ ಚರ್ಚೆ ಮಾಡದಿರುವುದು ಒಂದಾದರೆ, ಅಮೆರಿಕದೊಂದಿಗೆ ಭಾರತ ನಿಕಟ ಸಂಪರ್ಕ ಹೊಂದಿರುವುದು ಎರಡನೇ ಮುಖ್ಯ ಕಾರಣವಾಗಿದೆ ಎಂದು ಹೇಳಿದ್ದಾನೆ.
ಅಮೆರಿರಕದೊಂದಿಗೆ ಸ್ನೇಹ ಬೆಳೆಸುವ ದೇಶಗಳ ಮೇಲೆ ದಾಳಿ ಖಚಿತ ಎಂದು ಅವರು ಎಚ್ಚರಿಕೆ ನೀಡಿದ್ದಾನೆ. ಘಟನೆಯಲ್ಲಿ 11 ಮಂದಿ ಸಾವನ್ನಪ್ಪಿದ್ದು, 45ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.











Click it and Unblock the Notifications