ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ರಾಜ್ಯದ 7 ಸಹಕಾರಿ ಬ್ಯಾಂಕುಗಳ ದಿವಾಳಿ
ಆರ್ ಬಿಐ ತನ್ನ ವಿಮಾ ಅಂಗಸಂಸ್ಥೆಯಾದ ಠೇವಣಿ ವಿಮೆ ಮತ್ತು ಸಾಲ ಭದ್ರತೆ ನಿಗಮದ ಮೂಲಕ ಈ ಬ್ಯಾಂಕ್ ಗಳಿಗೆ ನೆರವು ನೀಡಿದೆ. 2009ರ ಜನವರಿ-ಡಿಸೆಂಬರ್ ಅವಧಿಯಲ್ಲಿ ಸುಮಾರು 482 ಕೋಟಿ ರುಪಾಯಿ ನೆರವು ನೀಡಿದೆ. ಹಣ ಪಾವತಿಗೆ ವಿಫಲವಾದ ಬ್ಯಾಂಕುಗಳ ಠೇವಣಿದಾರರಿಗೆ ಆರ್ ಬಿಐ ಗರಿಷ್ಠ 1 ಲಕ್ಷ ರುಪಾಯಿ ನೆರವು ನೀಡುತ್ತದೆ. ಕರ್ನಾಟಕದ 7, ಮಹಾರಾಷ್ಟ್ರದ 15, ಗುಜರಾತ್ ನ 5, ಉತ್ತರ ಪ್ರದೇಶದ ಮೂರು ಬ್ಯಾಂಕ್ ಗಳು ಈ ಪಟ್ಟಿಯಲ್ಲಿವೆ.
2007ರಲ್ಲಿ 17 ಬ್ಯಾಂಕ್ ಗಳು ವಿಫಲವಾಗಿದ್ದವು. ಠೇವಣಿ ವಿಮೆಯ ಪ್ರಿಮಿಯಂ ದರ ಸಾಲದೊಂದಿಗೆ ಸಂಬಂಧ ಹೊಂದಿರಬೇಕು. ಬ್ಯಾಂಕ್ ಗಳು ವಿಮೆ ಪಡೆಯುವುದನ್ನು ಕಡ್ಡಾಯಗೊಳಿಸಬೇಕು. ಇದು ನಿರ್ವಹಣೆ ವೆಚ್ಚದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಆರ್ ಬಿ ಐ ಡೆಫ್ಯೂಟಿ ಗವರ್ನರ್ ಸುಭೀರ್ ಗೋಕರನ್ ತಿಳಿಸಿದ್ದಾರೆ.
Comments
Story first published: Monday, February 15, 2010, 11:13 [IST]