ಎಂಟು ವಾರದೊಳಗೆ ನೈಸ್ ಮಾಹಿತಿ ನೀಡಿ

ಮಾಜಿ ಪ್ರಧಾನಮಂತ್ರಿ ಎಚ್ ಡಿ ದೇವೇಗೌಡ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ತರುಣ್ ಚಟರ್ಜಿ, ನ್ಯಾಯಮೂರ್ತಿ ಮಾರನ್ ಲೋಧ್ ಹಾಗೂ ನ್ಯಾಯಮೂರ್ತಿ ದೀಪಕ್ ವರ್ಮಾ ನೇತೃತ್ವದ ತ್ರಿಸದಸ್ಯ ಪೀಠ, ನೈಸ್ ನೇತೃತ್ವದ ಬಿಎಂಐಸಿ ಯೋಜನೆಗೆ ಸಂಬಂಧಿಸಿದ ಉನ್ನತ ಮಟ್ಟದ ಸಮಿತಿ ಸಭೆ ನಡೆಸಿ ಸಮಗ್ರ ವರದಿಯನ್ನು ಎಂಟು ವಾರದೊಳಗೆ ಸಲ್ಲಿಸಬೇಕು ಎಂದು ರಾಜ್ಯ ಸರಕಾರಕ್ಕೆ ತಾಕೀತು ಮಾಡಿದೆ. ಮಾಜಿ ಪ್ರಧಾನಿ ದೇವೇಗೌಡ, ಸಾಹಿತಿ ಯು ಆರ್ ಅನಂತಮೂರ್ತಿ ಸೇರಿ 107 ಮಂದಿ ನೈಸ್ ವಿರುದ್ಧ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.
ಇಂದು ನವದೆಹಲಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ದೇವೇಗೌಡ, ಮತ್ತೆ ಮುಖ್ಯಮಂತ್ರಿ ಯಡಿಯೂರಪ್ಪ, ಅಡ್ವೋಕೇಟ್ ಜನರಲ್ ಅಶೋಕ್ ಹಾರನಹಳ್ಳಿ ಮತ್ತು ನೈಸ್ ಮುಖ್ಯಸ್ಥ ಅಶೋಕ್ ಖೇಣಿ ಅವರ ವಿರುದ್ದ ತೀವ್ರ ವಾಗ್ದಾಳಿ ನಡೆಸಿದರು. ರೈತರು ಕೊಳ್ಳೆ ಹೊಡೆಯಲು ಸರಕಾರ ಸಂಪೂರ್ಣ ಸಹಾಯ ನೀಡಿದೆ. ನೈಸ್ ಕಂಪನಿ ಹಗರಣ ಸತ್ಯಂ ಕಂಪನಿ ಹಗರಣವನ್ನು ಮೀರಿಸುವಂತಿದೆ ಎಂದು ಗೌಡರು ಗುಡುಗಿದರು. ಯಡಿಯೂರಪ್ಪ ವಿರುದ್ದ ಮಾತನಾಡಿರುವ ಪದವನ್ನು ನಾನು ಹಿಂತೆಗೆದುಕೊಂಡಿದ್ದು ಈ ಬಗ್ಗೆ ಕ್ಷಮೆಯಾಚಿಸಿರುವುದಾಗಿ ಗೌಡರು ಹೇಳಿದರು.












Click it and Unblock the Notifications