ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಸಿದ್ದು ಮುಂದಿನ ಸಿಎಂ:, ಯುಆರ್ ಅನಂತಮೂರ್ತಿ
ಡಾ ರಾಮಮನೋಹರ ಲೋಹಿಯಾ ವಿಚಾರ ವೇದಿಕೆಯು ನಗರದ ಭಾರತೀಯ ವಿದ್ಯಾಭವನದ ಇವಿಎಸ್ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಶ್ರೀಸಾಮಾನ್ಯರ ಬದುಕಿನ ಮೇಲೆ ಬೆಲೆ ಏರಿಕೆಯ ಪರಿಣಾಮಗಳು ಕುರಿತ ವಿಚಾಕ ಸಂಕಿರಣದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು. ಸಿದ್ಧರಾಮಯ್ಯನವರೆ ಮುಂದಿನ ಮುಖ್ಯಮಂತ್ರಿ ಎಂದು ಮಾತು ಆರಂಭಿಸಿದ ಅವರು, ಎಡಪಂಥೀಯರು ಒಟ್ಟಾಗಿ ಮನುಷ್ಯ ಕೇಂದ್ರಿತ ಅರ್ಥ ವ್ಯವಸ್ಥೆಯನ್ನು ನಿರ್ಮಿಸಬೇಕು ಎಂದು ಹೇಳಿದರು.
ಯಾವ ದೇವರಿಗೆ ಕೈ ಮುಗಿಯಲಿ...
ಮರ್ಯಾದೆಯನ್ನು ಗಾಳಿಗೆ ತೂರಿ ದುಡ್ಡು ಮಾಡಿ ರಾಜಕಾರಣಕ್ಕೆ ಇಳಿಯುವವರು ಸಂಖ್ಯೆ ಹೆಚ್ಚುತ್ತಿದೆ. ಕೋಟಿಗಟ್ಲೆ ಹಣವನ್ನು ತಿಮ್ಮಪ್ಪನಿಗೆ ಸುರಿದುಬಿಟ್ಟರೆ ಮಾಡಿದ ತಪ್ಪುನ್ನು ಅವನು ಕ್ಷಮಿಸುತ್ತಾನಾ ? ನನಗಂತೂ ಯಾವ ದೇವರಿಗೆ ಕೈಮುಗಿಯಬೇಕು ಎನ್ನುವುದೇ ತಿಳಿಯುತ್ತಿಲ್ಲ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದರು.
Comments
Story first published: Wednesday, January 6, 2010, 12:39 [IST]