ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಲವ್ ಜಿಹಾದ್ ಬಗ್ಗೆ ಜಾಗೃತಿ ಅಗತ್ಯ : ಈಶ್ವರಪ್ಪ
ನಗರದ ಶಿವಪ್ಪ ನಾಯಕ ವೃತ್ತದ ಬಳಿ ಇರುವ ಸೇಂಟ್ ಥಾಮಸ್ ಚರ್ಚ್ ಉದ್ಘಾಟನಾ ಸಮಾರಂಭ ನಂತರ ಮಾತನಾಡಿದ ಅವರು, ಕೇರಳ ಹಾಗೂ ಕರ್ನಾಟಕದಲ್ಲಿ ನಡೆಯುತ್ತಿರುವ ಲವ್ ಜಿಹಾದ್ ಆತಂಕಕಾರಿ ಬೆಳವಣಿಗೆ ಎಂದರು. ನಿರಂತರವಾಗಿ ಹಿಂದೂ ಹಾಗೂ ಕ್ರಿಶ್ಚಿಯನ್ ಧರ್ಮದ ಹೆಣ್ಣುಮಕ್ಕಳಿಗೆ ಆಸೆ ಆಮಿಷ ತೋರಿಸಿ ಬಲಿಪಶು ಮಾಡಲಾಗುತ್ತಿದೆ ಎಂದರು.
ದೇಶದಲ್ಲಿ ವಿವಿಧ ಧರ್ಮ ಜಾತಿಗಳಿವೆ. ನಾವೆಲ್ಲರೂ ಒಂದೇ ಎಂಬ ಭಾವನೆ ನಮ್ಮಲ್ಲಿದೆ. ವಿವಿಧತೆಯಲ್ಲಿ ಏಕತೆಯಿದೆ. ಈ ವಿಷಯದಲ್ಲಿ ಭಾರತ ಪ್ರಪಂಚಕ್ಕೆ ಮಾದರಿ ದೇಶ. ಇಂತಹ ವಾತಾವರಣದಲ್ಲಿ ಕೆಲ ಕಿಡಿಗೇಡಿಗಳು ಸಮಾಜದಲ್ಲಿರುವ ಶಾಂತಿ ಭಗ್ನಗೊಳಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇಂತಹ ದುಷ್ಕರ್ಮಿಗಳ ಬಗ್ಗೆ ಜಾಗ್ರತೆಯಿಂದ ಇರಬೇಕು ಎಂದು ಈಶ್ವರಪ್ಪ ಕಿವಿಮಾತು ಹೇಳಿದರು.
Comments
ಶಿವಮೊಗ್ಗ ಕೆಎಸ್ ಈಶ್ವರಪ್ಪ ಮತಾಂತರ ಹಿಂದೂ hindu ಮದುವೆ ಕ್ರಿಶ್ಚಿಯನ್ ks eshwarappa district news christian conversion girls ಲವ್ ಜಿಹಾದ್ love jihad shivamogga
Story first published: Monday, January 4, 2010, 13:51 [IST]