ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ವನ್ಯಜೀವಿ ಪರ ಅನಿಲ್ ಕುಂಬ್ಳೆ ಬೌಲಿಂಗ್
ಮೈಸೂರು ಮೃಗಾಲಯದ ಯುವಸಂಘಟನೆ ಸಮಾರೋಪ ಸಮಾರಂಭಕ್ಕೂ ಮುನ್ನ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಗಣಿಗಾರಿಕೆಯಿಂದ ಅರಣ್ಯ ಪ್ರದೇಶಕ್ಕೆ ಹಾನಿಯಾಗುತ್ತಿದೆ ಎಂಬುದು ಅರಿವಾಗಿದೆ. ಈ ಸಂಬಂಧ ಮಂಡಳಿ ನೀಡುವ ವರದಿಯಲ್ಲಿ ಇದನ್ನು ಉಲ್ಲೇಖಿಸಲಾಗುವುದು ಎಂದರು.
ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದ ವನ್ಯಸಂಪತ್ತು ಉತ್ತಮ ಸ್ಥಿತಿಯಲ್ಲಿದೆ. ಇದನ್ನು ಉಳಿಸಿಕೊಂಡು ಹೋಗುವುದು ಪ್ರತಿಯೊಬ್ಬರ ಮೇಲಿರುವ ಜವಾಬ್ದಾರಿ. ಈ ನಿಟ್ಟಿನಲ್ಲಿ ಸರಕಾರದ ಸಹಕಾರದೊಂದಿಗೆ ವನ್ಯಸಂಪತ್ತು ರಕ್ಷಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಕುಂಬ್ಳೆ ಹೇಳಿದರು.
ವನ್ಯಜೀವಿಗಳ ಬಗ್ಗೆ ಪ್ರೀತಿ ಇರುವ ಸಾಕಷ್ಟು ಕ್ರಿಕೆಟಿಗರು ಇದ್ದಾರೆ. ಸಮಾನ ಮನಸ್ಕರನ್ನು ಒಂದೇ ವೇದಿಕೆಗೆ ತಂದು ವನ್ಯಜೀವಿ ಸಂರಕ್ಷಣೆಗೆ ತೊಡಗಿಸಿಕೊಳ್ಳುವ ಯೋಜನೆಯೂ ಇದೆ ಎಂದರು. ವಾರದ ಹಿಂದೆಯಷ್ಟೇ ಮೃಗಾಲಯಕ್ಕೆ ಆಗಮಿಸಿರುವ ಜಿರಾಫೆ ಮರಿಯನ್ನು ಕುಂಬ್ಳೆ ದತ್ತು ಪಡೆದರು. 10 ದಿನದ ಈ ಮರಿಗೆ ಲಕ್ಷ್ಮಿ ಎಂದು ನಾಮಕರಣ ಮಾಡಿದ ಕುಂಬ್ಳೆ 25 ಸಾವಿರ ದತ್ತು ಹಣ ನೀಡಿದರು.
Comments
ಮೈಸೂರು mysuru ಗಣಿಗಾರಿಕೆ mining cricketer anil kumble ಅನಿಲ್ ಕುಂಬ್ಳೆ ವನ್ಯಜೀವಿ ಮೃಗಾಲಯ ಸಂರಕ್ಷಣೆ wildlife zoo
Story first published: Monday, January 4, 2010, 11:39 [IST]