ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಸುಷ್ಮಾ ಸ್ವರಾಜ್ ಪತಿ ರಾಜ್ಯದ ಪರ ವಕೀಲ
ಇತ್ತೀಚಿನ ಪಕ್ಷದ ಬಿಕ್ಕಟ್ಟು ಶಮನಗೊಳಿಸಲು ಪ್ರಮುಖ ಪಾತ್ರ ನಿರ್ವಹಿಸಿರುವ ಸುಷ್ಮಾ ಅವರಿಗೆ ಬಳುವಳಿಯಾಗಿ ಈ ನೇಮಕ ಮಾಡಲಾಗಿದೆ. ಈ ಸಂಬಂಧ ಡಿಸೆಂಬರ್ 5ರಂದೇ ಸರಕಾರದ ಆದೇಶ ಹೊರಬಿದ್ದಿದೆ. ಸುಪ್ರೀಂಕೋರ್ಟ್ ನಲ್ಲಿ ರಾಜ್ಯದ ಪರ ವಾದಿಸಲು ದಿನಕ್ಕೆ ಒಂದು ಲಕ್ಷ ರೂಪಾಯಿನಿಂದ ಐದುಲಕ್ಷ ರೂಪಾಯಿವರೆಗೆ ಶುಲ್ಕ ತೆಗೆದುಕೊಳ್ಳಲಾಗುತ್ತದೆ .
ಗಡಿ ವಿವಾದ, ಕಳಸಾ ಬಂಡೂರಿ ನಾಲಾ ಯೋಜನೆ ಮೊದಲಾದ ವಿವಾದಗಳಲ್ಲಿ ಪರಿಣತ ವಕೀಲರಾದ ನಾರಿಮನ್ , ಅನಿಲ್ ದಿವಾನ್, ಹರೀಶ್ ಸಾಳ್ವೆ ಮೊದಲಾದವರು ರಾಜ್ಯದ ಪರ ಸುಪ್ರೀಂಕೋರ್ಟ್ ನಲ್ಲಿ ಕೆಲಸ ಮಾಡಿದ್ದಾರೆ. ಆದರೆ ಈಗದಿಢೀರ್ ಸ್ವರಾಜ್ ಕೌಶಲ್ ಅವರನ್ನು ನೇಮಿಸಿರುವುದು ಚರ್ಚೆಗೆ ಗ್ರಾಸವಾಗಿದೆ.
(ದಟ್ಸ್ ಕನ್ನಡ ವಾರ್ತೆ)
Comments
Story first published: Tuesday, December 15, 2009, 10:52 [IST]