ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಅಪ್ಪಳಿಸಿದ ಕಾಪ್ಟರ್, ಪ್ರತಿಭಾ ಪಾಟೀಲ್ ಪಾರು
ಪ್ರತಿಭಾ ಪಾಟೀಲ್ ಪುರಿಯಲ್ಲಿ ಕಾರ್ಯಕ್ರಮ ಮುಗಿಸಿ ಭುವನೇಶ್ವರಕ್ಕೆ ಮರಳುತ್ತಿದ್ದಾಗ ಈ ಘಟನೆ ಸಂಭವಿಸಿದೆ. 16 ಆಸನಗಳ ಈ ಹೆಲಿಕಾಪ್ಟರ್ ನ ಮೂರು ರೆಕ್ಕೆಗಳು ಹಾನಿಗೀಡಾಗಿವೆ. ಅದೃಷ್ಟವಶಾತ್ ಯಾರಿಗೂ ತೊಂದರೆಯಾಗಿಲ್ಲ. ರಾಷ್ಟ್ರಪತಿಗಳು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಇಳಿಯುವ ಸ್ಥಳವನ್ನು ವಾಯುಪಡೆ ಅಧಿಕಾರಿಗಳೇ ಆಯ್ಕೆ ಮಾಡಿದ್ದರು. ಈ ಘಟನೆ ಭದ್ರತಾ ಲೋಪ ಎಂದು ಪರಿಗಣಿಸಿರುವ ಆಡಳಿತ ತನಿಖೆಗೆ ಆದೇಶ ನೀಡಿದೆ.
(ಏಜನ್ಸೀಸ್)
Comments
Story first published: Thursday, December 10, 2009, 13:07 [IST]