ಅಪ್ಪಳಿಸಿದ ಕಾಪ್ಟರ್, ಪ್ರತಿಭಾ ಪಾಟೀಲ್ ಪಾರು

Pratibha Patil
ಭುವನೇಶ್ವರ, ಡಿ. 10 : ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಹಾಗೂ ಅವರ ಪತಿ ದೇವಿಸಿಂಗ್ ಶೇಖಾವತ್ ಮತ್ತು ಒರಿಸ್ಸಾ ರಾಜ್ಯಪಾಲ ಎಂ ಸಿ ಭಂಡಾರಿ ಬುಧವಾರ (ನ 9) ಪ್ರಾಣಾಪಾಯದಿಂದ ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಈ ಮೂವರು ಗಣ್ಯರು ಪ್ರಯಾಣಿಸುತ್ತಿದ್ದ ವಾಯುಪಡೆ ಹೆಲಿಕಾಪ್ಟರ್ ರೆಕ್ಕೆಗಳು ಭುವನೇಶ್ವರ ವಿಮಾನ ನಿಲ್ದಾಣದ ಶೆಡ್ ಗೆ ಅಪ್ಪಳಿಸಿ ಹಾನಿಗೊಂಡಿವೆ.

ಪ್ರತಿಭಾ ಪಾಟೀಲ್ ಪುರಿಯಲ್ಲಿ ಕಾರ್ಯಕ್ರಮ ಮುಗಿಸಿ ಭುವನೇಶ್ವರಕ್ಕೆ ಮರಳುತ್ತಿದ್ದಾಗ ಈ ಘಟನೆ ಸಂಭವಿಸಿದೆ. 16 ಆಸನಗಳ ಈ ಹೆಲಿಕಾಪ್ಟರ್ ನ ಮೂರು ರೆಕ್ಕೆಗಳು ಹಾನಿಗೀಡಾಗಿವೆ. ಅದೃಷ್ಟವಶಾತ್ ಯಾರಿಗೂ ತೊಂದರೆಯಾಗಿಲ್ಲ. ರಾಷ್ಟ್ರಪತಿಗಳು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಇಳಿಯುವ ಸ್ಥಳವನ್ನು ವಾಯುಪಡೆ ಅಧಿಕಾರಿಗಳೇ ಆಯ್ಕೆ ಮಾಡಿದ್ದರು. ಈ ಘಟನೆ ಭದ್ರತಾ ಲೋಪ ಎಂದು ಪರಿಗಣಿಸಿರುವ ಆಡಳಿತ ತನಿಖೆಗೆ ಆದೇಶ ನೀಡಿದೆ.

(ಏಜನ್ಸೀಸ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+