ಮೀರಾಕುಮಾರ್ ಪಲ್ಲವಿ ಅನುಪಲ್ಲವಿ

ಈ ವಿಷಯದ ಬಗೆಗೆ ಕೂಲಂಕುಷ ಚರ್ಚೆಯಾಗಬೇಕು ಎನ್ನುವುದು ಲೋಕಸಭಾ ಸದಸ್ಯರ ಇಂಗಿತ. ಹಾಗಾಗಿ ಇಂದು ಮತ್ತು ನಾಳೆ ಡಿ 7ಮತ್ತು ಎಂಟರಂದು ಲೋಕಸಭೆಯಲ್ಲಿ ಬಿಸಿಬಿಸಿ ಚರ್ಚೆ. ಇದಕ್ಕೋಸ್ಕರವೇ ಕರೆದ ವಿಶೇಷ ಸಂಸತ್ ಅಧಿವೇಶನ ಈಗ ನಡೆಯುತ್ತಿದೆ.
ಇಂದು ಬೆಳಗ್ಗೆ 11 ಗಂಟೆಯಿಂದ ಚರ್ಚೆ ನಡೆಯುತ್ತಿದೆ. ಮುಖ್ಯ ಭಾಷಣಕಾರರಲ್ಲಿ ಸಿಪಿಐನ ಧುರೀಣ ಗುರುದಾಸ್ ದಾಸ್ ಗುಪ್ತ ಮತ್ತು ಕಾಂಗ್ರೆಸ್ಸಿನ ಉತ್ತರ ಪ್ರದೇಶದ ಸದಸ್ಯ ಜಗದಂಬಿಕ ಪಾಲ್ ಅವರು ಹೇಳಿದ್ದಿಷ್ಟು. ವರದಿಯಲ್ಲಿ ಹೆಸರಿಸಲಾದ 68 ಮಂದಿಗೆ ಶಿಕ್ಷೆ ಆಗಬೇಕು. ಈ ವರದಿ ಬರೆಯುವ ಸಮಯಕ್ಕೆ ಭಾಜಪದ ಅಧ್ಯಕ್ಷ ರಾಜನಾಥ್ ಸಿಂಗ್ ತಮ್ಮ ವಾಗ್ಝರಿಯನ್ನು ತೇಲಿಬಿಡುತ್ತಿದ್ದು, ಭಾಜಪ ತಪ್ಪೇನೂ ಇಲ್ಲ ಎನ್ನುವುದು ಅವರ ಸಮರ್ಥನೆಯ ಸಾರಾಂಶ.
ಘಟನೆ ಸಂಭವಿಸಿದ ದಿನದಂದು ಭಾರತದ ಚುಕ್ಕಾಣಿ ಕಾಂಗ್ರೆಸ್ ಕೈಯಲ್ಲಿತ್ತು. ಪ್ರಧಾನಿಯಾಗಿ ಪಿ ವಿ ನರಸಿಂಹರಾವ್ ಅವರಿದ್ದರು. ಅವರು ಕೂಡಾ ಘಟನೆಯಲ್ಲಿ ಪಾಲುದಾರರು ಎಂಬುದು ಬಿಜೆಪಿಯ ವಾದ. ಆದರೆ, ಲಿಬರ್ಹಾನ್ ವರದಿಯಲ್ಲಿ ನರಸಿಂಹರಾವ್ ಅವರ ಸೊಲ್ಲು ಇಲ್ಲದಿರುವುದು ವರದಿಯನ್ನು ಅನುಮಾನದಿಂದ ನೋವಂತಾಗಿದೆ.
ಮುಖ್ಯವಾದ ಸುದ್ದಿಯೆಂದರೆ ಒಬ್ಬ ಸದಸ್ಯರು ಮಾತನಾಡುತ್ತಿರುವಾಗ ಇನ್ನೊಬ್ಬ ಸದಸ್ಯ ಅಥವಾ ನಾಕಾರು ಎಂಟು ಮಂದಿ ಸದಸ್ಯರು ಮಧ್ಯೆ ಬಾಯಿಹಾಕುವುದು ಲೋಕಸಭೆಯಲ್ಲಿ ವಾಡಿಕೆ. ಹಾಗಾಗಿ ಯಾರು ಎನು ಹೇಳುತ್ತಾರೆ ಎಂದು ಆಸಕ್ತಿಯಿಂದ ಟಿವಿ ನೋಡುತ್ತಾ ಕುಳಿತವರಿಗೆ ಗೊಂದಲ. ಅದೇನೇ ಇರಲಿ, ಸ್ಪಷ್ಟವಾಗಿ ಕೇಳಿಸಿದ ವಿಚಾರವೆಂದರೆ ಲೋಕಸಭಾಧ್ಯಕ್ಷೆ ಮೀರಾಕುಮಾರ್ ಹೇಳುತ್ತಿರುವ ಆಪ್ ಭೈಟಿಯೇ, ಆಪ್ ಭೈಟಿಯೇ, ಶಾಂತ್ ಹೋಜಾಯಿ ಯೇ, ಆಪ್ ಕಾ ಬಾರಿ ಖತಂ ಹೋಗಯಾ, ಮುಂತಾದವು.
ಟಿವಿಗೆ ಕಿವಿಯನ್ನು ಅಂಟಿಸಿಕೊಂಡು ಕುಳಿತಿದ್ದ ನಮ್ಮ ಉಪಸಂಪಾದಕರು ಹೇಳುವ ಪ್ರಕಾರ ಮೀರಾಕುಮಾರ್ ಅವರ ಎಲ್ಲ ಸಮಯ, ಎಲ್ಲ ಚಾಕಚಕ್ಯತೆ, ಸಂಸತ್ ನಿಭಾಯಿಸುವ ಎಲ್ಲ ಕೌಶಲ್ಯಗಳೂ ಸುಮ್ಮನಿರಿ, ಸುಮ್ಮನಿರಿ ಎನ್ನುವುದರಲ್ಲೇ ಕಳೆದುಹೋಗುತ್ತಿದೆ. ಏನಿಲ್ಲವೆಂದರೂ ಅವರೂ 'ಶಾಂತ್ ಹೋಜಾಯಿ ಯೇ' ಶಬ್ದಗುಚ್ಛಗಳನ್ನು ಬೆಳಗಿನಿಂದ 79 ಬಾರಿ ಬಳಸಿದ್ದಾರೆ. ಈ ಅಧಿವೇಶನ ಮುಗಿಯುವ ಹೊತ್ತಿಗೆ ಅವರು ತ್ರಿಶತಕ ಬಾರಿಸಿದರೆ ಆಶ್ಚರ್ಯವಿಲ್ಲ.
(ದಟ್ಸ್ ಕನ್ನಡ ವಾರ್ತೆ)
-
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ -
"ಜೈಲಲ್ಲಿ ನಮಗೆ ಮೊಬೈಲ್ ಕೊಟ್ಟಿದ್ದು ಡಿಜಿಪಿ ಅಲೋಕ್ ಕುಮಾರ್" ಎಂದ ಕೈದಿಗಳು, ವಿಡಿಯೋ ವೈರಲ್ -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್












Click it and Unblock the Notifications