ಮೀರಾಕುಮಾರ್ ಪಲ್ಲವಿ ಅನುಪಲ್ಲವಿ

ಈ ವಿಷಯದ ಬಗೆಗೆ ಕೂಲಂಕುಷ ಚರ್ಚೆಯಾಗಬೇಕು ಎನ್ನುವುದು ಲೋಕಸಭಾ ಸದಸ್ಯರ ಇಂಗಿತ. ಹಾಗಾಗಿ ಇಂದು ಮತ್ತು ನಾಳೆ ಡಿ 7ಮತ್ತು ಎಂಟರಂದು ಲೋಕಸಭೆಯಲ್ಲಿ ಬಿಸಿಬಿಸಿ ಚರ್ಚೆ. ಇದಕ್ಕೋಸ್ಕರವೇ ಕರೆದ ವಿಶೇಷ ಸಂಸತ್ ಅಧಿವೇಶನ ಈಗ ನಡೆಯುತ್ತಿದೆ.
ಇಂದು ಬೆಳಗ್ಗೆ 11 ಗಂಟೆಯಿಂದ ಚರ್ಚೆ ನಡೆಯುತ್ತಿದೆ. ಮುಖ್ಯ ಭಾಷಣಕಾರರಲ್ಲಿ ಸಿಪಿಐನ ಧುರೀಣ ಗುರುದಾಸ್ ದಾಸ್ ಗುಪ್ತ ಮತ್ತು ಕಾಂಗ್ರೆಸ್ಸಿನ ಉತ್ತರ ಪ್ರದೇಶದ ಸದಸ್ಯ ಜಗದಂಬಿಕ ಪಾಲ್ ಅವರು ಹೇಳಿದ್ದಿಷ್ಟು. ವರದಿಯಲ್ಲಿ ಹೆಸರಿಸಲಾದ 68 ಮಂದಿಗೆ ಶಿಕ್ಷೆ ಆಗಬೇಕು. ಈ ವರದಿ ಬರೆಯುವ ಸಮಯಕ್ಕೆ ಭಾಜಪದ ಅಧ್ಯಕ್ಷ ರಾಜನಾಥ್ ಸಿಂಗ್ ತಮ್ಮ ವಾಗ್ಝರಿಯನ್ನು ತೇಲಿಬಿಡುತ್ತಿದ್ದು, ಭಾಜಪ ತಪ್ಪೇನೂ ಇಲ್ಲ ಎನ್ನುವುದು ಅವರ ಸಮರ್ಥನೆಯ ಸಾರಾಂಶ.
ಘಟನೆ ಸಂಭವಿಸಿದ ದಿನದಂದು ಭಾರತದ ಚುಕ್ಕಾಣಿ ಕಾಂಗ್ರೆಸ್ ಕೈಯಲ್ಲಿತ್ತು. ಪ್ರಧಾನಿಯಾಗಿ ಪಿ ವಿ ನರಸಿಂಹರಾವ್ ಅವರಿದ್ದರು. ಅವರು ಕೂಡಾ ಘಟನೆಯಲ್ಲಿ ಪಾಲುದಾರರು ಎಂಬುದು ಬಿಜೆಪಿಯ ವಾದ. ಆದರೆ, ಲಿಬರ್ಹಾನ್ ವರದಿಯಲ್ಲಿ ನರಸಿಂಹರಾವ್ ಅವರ ಸೊಲ್ಲು ಇಲ್ಲದಿರುವುದು ವರದಿಯನ್ನು ಅನುಮಾನದಿಂದ ನೋವಂತಾಗಿದೆ.
ಮುಖ್ಯವಾದ ಸುದ್ದಿಯೆಂದರೆ ಒಬ್ಬ ಸದಸ್ಯರು ಮಾತನಾಡುತ್ತಿರುವಾಗ ಇನ್ನೊಬ್ಬ ಸದಸ್ಯ ಅಥವಾ ನಾಕಾರು ಎಂಟು ಮಂದಿ ಸದಸ್ಯರು ಮಧ್ಯೆ ಬಾಯಿಹಾಕುವುದು ಲೋಕಸಭೆಯಲ್ಲಿ ವಾಡಿಕೆ. ಹಾಗಾಗಿ ಯಾರು ಎನು ಹೇಳುತ್ತಾರೆ ಎಂದು ಆಸಕ್ತಿಯಿಂದ ಟಿವಿ ನೋಡುತ್ತಾ ಕುಳಿತವರಿಗೆ ಗೊಂದಲ. ಅದೇನೇ ಇರಲಿ, ಸ್ಪಷ್ಟವಾಗಿ ಕೇಳಿಸಿದ ವಿಚಾರವೆಂದರೆ ಲೋಕಸಭಾಧ್ಯಕ್ಷೆ ಮೀರಾಕುಮಾರ್ ಹೇಳುತ್ತಿರುವ ಆಪ್ ಭೈಟಿಯೇ, ಆಪ್ ಭೈಟಿಯೇ, ಶಾಂತ್ ಹೋಜಾಯಿ ಯೇ, ಆಪ್ ಕಾ ಬಾರಿ ಖತಂ ಹೋಗಯಾ, ಮುಂತಾದವು.
ಟಿವಿಗೆ ಕಿವಿಯನ್ನು ಅಂಟಿಸಿಕೊಂಡು ಕುಳಿತಿದ್ದ ನಮ್ಮ ಉಪಸಂಪಾದಕರು ಹೇಳುವ ಪ್ರಕಾರ ಮೀರಾಕುಮಾರ್ ಅವರ ಎಲ್ಲ ಸಮಯ, ಎಲ್ಲ ಚಾಕಚಕ್ಯತೆ, ಸಂಸತ್ ನಿಭಾಯಿಸುವ ಎಲ್ಲ ಕೌಶಲ್ಯಗಳೂ ಸುಮ್ಮನಿರಿ, ಸುಮ್ಮನಿರಿ ಎನ್ನುವುದರಲ್ಲೇ ಕಳೆದುಹೋಗುತ್ತಿದೆ. ಏನಿಲ್ಲವೆಂದರೂ ಅವರೂ 'ಶಾಂತ್ ಹೋಜಾಯಿ ಯೇ' ಶಬ್ದಗುಚ್ಛಗಳನ್ನು ಬೆಳಗಿನಿಂದ 79 ಬಾರಿ ಬಳಸಿದ್ದಾರೆ. ಈ ಅಧಿವೇಶನ ಮುಗಿಯುವ ಹೊತ್ತಿಗೆ ಅವರು ತ್ರಿಶತಕ ಬಾರಿಸಿದರೆ ಆಶ್ಚರ್ಯವಿಲ್ಲ.
(ದಟ್ಸ್ ಕನ್ನಡ ವಾರ್ತೆ)
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications