ವೈದ್ಯರು ಯಮನ ಏಜೆಂಟರು: ರಾಮಚಂದ್ರ ಗೌಡ

ಹೀಲಿಂಗ್ ತಜ್ಞರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಗೌಡ, ಸಾಂಪ್ರದಾಯಿಕ ವೈದ್ಯರ ಸಮಸ್ಯೆಗೆ ಸರಕಾರ ಸಕರಾತ್ಮಕವಾಗಿ ಸ್ಪಂದಿಸಲಿದೆ. ಹಳ್ಳಿ ವೈದ್ಯರು ತಮ್ಮ ವೈದ್ಯ ಪದ್ದತಿಯನ್ನು ಬೇರೆಯವರಿಗೆ ಹೇಳಿ ಕೊಡುವುದಿಲ್ಲ ಇದರಿಂದ ಈ ಪದ್ಧತಿ ಒಂದು ಕುಟುಂಬಕ್ಕೆ ಸೀಮಿತವಾಗಿದೆ ಎಂದು ಸಚಿವರು ವಿಷಾದ ವ್ಯಕ್ತಪಡಿಸಿದ್ದಾರೆ.
ಹಳ್ಳಿ ವೈದ್ಯರು ತಮ್ಮ ವೈದ್ಯ ಪದ್ದತಿಯನ್ನು ಅನ್ಯರಿಗೂ ತಿಳಿಸಿಕೊಡಬೇಕು. ಇದರಿಂದ ಪದ್ಧತಿ ಜನಪ್ರಿಯವಾಗುತ್ತದೆ. ಹೀಲಿಂಗ್ ವೈದ್ಯ ಪದ್ದತಿಗೆ ಅಧಿಕೃತ ಮಾನ್ಯತೆ ಸಿಕ್ಕಿಲ್ಲ. ಸ್ಥಳೀಯರ ಜ್ಞಾನ ಆಧರಿಸಿರುವ ಈ ಕ್ಷೇತ್ರಕ್ಕೆಸಾಕಷ್ಟು ಸಮಸ್ಯೆ ಎದುರಿಸುತ್ತಿದೆ ಎಂದು ತಿಳಿದಿದೆ. ವೈದ್ಯರ ಸಮಸ್ಯೆಗಳಿಗೆ ಸರಕಾರ ಸಕರಾತ್ಮಕವಾಗಿ ಸ್ಪಂದಿಸಲಿದೆ ಎಂದು ಹೇಳಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)











Click it and Unblock the Notifications