ಮನೆ ಬಿಟ್ಟುಹೋದವಳ ಗರ್ವಭಂಗ

ಭಾರತೀಯ ಕುಟುಂಬ ವ್ಯವಸ್ಥೆಯ ಮೇಲೆ ದೂರಗಾಮಿ ಪರಿಣಾಮ ಬೀರುವಂತಹ ಒಂದು ಐತಿಹಾಸಿಕ ತೀರ್ಪನ್ನು ಭಾರತ ಸರ್ವೋಚ್ಚ ನ್ಯಾಯಾಲಯ ಬುಧವಾರ ಹೊರಹಾಕಿದೆ. ಅದರಂತೆ, ಮನೆಗೆ ವಾಪಸ್ಸು ಬಾರಮ್ಮ ಬಾರಮ್ಮ ಎಂದು ಪರಿಪರಿ ಬೇಡಿಕೊಂಡರೂ ಮೂತಿ ತಿರುವಿಕೊಂಡು ಇನ್ನೊಂದು ತಿರುವಿನಲ್ಲಿ ಹಾದುಹೋಗುವ ಮಹಿಳೆಗೆ ಅವಳ ಗಂಡ ಕ್ಯಾರೇ ಅನ್ನಬಾರದು. ಅವಳ ಜೀವನ ನಿರ್ವಹಣೆಗೆ ಮೂರು ಕಾಸು ಕೊಡಬಾರದು.
ಪೂನಂ ಮತ್ತು ಮಹೇಂದ್ರಕುಮಾರ್ ಎಂಬ ದಂಪತಿಗಳ ಕುಟುಂಬ ವ್ಯಾಜ್ಯದ ಬಗೆಗೆ ನ್ಯಾಯ ನಿರ್ಣಯ ಮಾಡಿದ ಪಂಜಾಬ್ ಉಚ್ಚ ನ್ಯಾಯಾಲಯ ಅವಳಾಗೇ ಬಿಟ್ಟು ಹೋಗಿರುವುದರಿಂದ ಅವಳಿಗೆ ಪರಿಹಾರ ಕೊಡಕೂಡದು ಎಂದು ತೀರ್ಪು ನೀಡಿತ್ತು. ಆ ತೀರ್ಪನ್ನು ಸರ್ವೂಚ್ಚ ನ್ಯಾಯಾಲಯ (ನ್ಯಾಯಮೂರ್ತಿ ವಿ ಎಸ್ ಸಿರ್ ಪುರ್ ಕರ್)ಎತ್ತಿ ಹಿಡಿದು ಬುಧವಾರ ತನ್ನ ತೀರ್ಮಾನವನ್ನು ಪ್ರಕಟಿಸಿತು.
ಹೇಳಲೇಬೇಕಾದ ಮತ್ತು ಹೇಳಲೇಬಾರದ ಕಾರಣಗಳಿಂದಾಗಿ ಮಹಿಳೆಯರು ಗಂಡನ ಮನೆ ಬಿಟ್ಟು ಎಲ್ಲಿಗೋ ಹೋಗುವುದುಂಟು. ಹೋದ ಮೇಲೆ, ವರದಕ್ಷಿಣೆ ಕಿರುಕುಳ ಕೊಡುತ್ತಾರೆ, ಸೀಮೆ ಎಣ್ಣೆ ಹಾಕಿ ಸುಡಲು ಬಂದರು, ಅವನು ಗಂಡಸೇ ಅಲ್ಲ ಎಂಬಿತ್ಯಾದಿ ಆರೋಪಗಳನ್ನು ಗಂಡ ಮತ್ತು ಅವನ ಮನೆಯವರ ಮೇಲೆ ಮಹಿಳೆಯರು ಮಾಡುವುದುಂಟು. ಇಂಥ ಕೇಸುಗಳು ದೇಶದಲ್ಲಿ, ನಮ್ಮದೇ ಕರ್ನಾಟಕದಲ್ಲಿ ಖಂಡಾಪಟ್ಟೆ ಇವೆ.
ನಿನ್ನೆ ನ್ಯಾಯಾಲಯ ನೀಡಿರುವ ಈ ತೀರ್ಪಿನ ಬೆಳಕಲ್ಲಿ ನಮ್ಮ ವಕೀಲರು ಮತ್ತು ಹಿರಿಯ ಹಾಗೂ ಕಿರಿಯ ನ್ಯಾಯಾಲಯದ ಸನ್ಮಾನ್ಯ ನ್ಯಾಯಮೂರ್ತಿಗಳು ಕುಟುಂಬ ವ್ಯಾಜ್ಯಗಳನ್ನು ಸೂಕ್ತವಾಗಿ ಪರಿಹರಿಸುತ್ತಾರೆ ಎಂಬ ಆಶಾವಾದವನ್ನು ಕನ್ನಡನಾಡಿಗರು ಇಟ್ಟುಕೊಳ್ಳಬಹುದು. ಅಂದಹಾಗೆ, ಇವತ್ತು ವಿಶ್ವ ಪುರುಷರ ದಿನ. ಬಡಪಾಯಿ ಗಂಡನಿಗೆ ಕೋರ್ಟು ನೀಡಿದ ತೀರ್ಪು ಉಡುಗೊರೆ ಎಂದೇ ಭಾವಿಸುವುದಕ್ಕೆ ಯಾರ ಅಪ್ಪಣೆಯೂ ಬೇಕಿಲ್ಲ.
(ದಟ್ಸ್ ಕನ್ನಡ ವಾರ್ತೆ)
-
Sachin Tendulkar: ಅಭಿಷೇಕ್ ಶರ್ಮಾಗೆ ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ವಿಶೇಷ ಸಂದೇಶ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂಬ ಮಾತಿನಂತೆ ನಡೆದುಕೊಂಡ ಯುವರಾಜ್ ಸಿಂಗ್ ಶಿಶ್ಯ ಅಭಿಷೇಕ್ ಶರ್ಮಾ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Property: ಬೆಂಗಳೂರಿನ 510 ಕೋಟಿ ಮೌಲ್ಯದ 14 ಎಕರೆ ಭೂಮಿ ವಶಕ್ಕೆ ಪಡೆದ ಜಿಬಿಎ, ಕಾರಣವೇನು -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು -
ಟಿ20 ವಿಶ್ವಕಪ್ 2026 ಭಾರತದ ಮುಡಿಗೆ: ಬಾಲ ಮುದುರಿಕೊಂಡ 'ಸೈಲೆಂಟ್' ಸ್ಯಾಂಟ್ನರ್












Click it and Unblock the Notifications